ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ನಾಳೆ
Team Udayavani, Feb 15, 2020, 3:45 PM IST
ಸಾಂಧರ್ಬಿಕ ಚಿತ್ರ
ಶಿರಸಿ: ಇಲ್ಲಿನ ವಿವೇಕಾನಂದ ನಗರದಲ್ಲಿ ಶಿರಸಿ ಹಬ್ಬದ ಪ್ರಯುಕ್ತ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ಸ್ಪರ್ಧೆಯನ್ನು ಫೆ. 16 ರಂದು
ಮುಂಜಾನೆ 9.30 ಗಂಟೆಗೆ ಏರ್ಪಡಿಸಲಾಗಿದೆ. 26 ತಳಿಗಳ 180 ಜಾತಿ ನಾಯಿಗಳ ಪ್ರದರ್ಶನದ ಸ್ಪರ್ಧೆ ನಡೆಯಲಿದೆ. ಪ್ರತಿ ತಳಿಯಲ್ಲಿ ಚಾಂಪಿಯನ್ ಮತ್ತು 2 ಮತ್ತು 3ನೇ ಸ್ಥಾನದ ಬಹುಮಾನ ನೀಡಲಾಗುತ್ತದೆ ಎಂದು ಶಿರಸಿ ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಆರ್.ಜಿ.ಹೆಗಡೆ ಹೇಳಿದರು.
ಅವರು ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವೇಕಾನಂದ ಗೆಳೆಯರ ಬಳಗ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಶಿರಸಿ, ಜೀವ ಜಲ ಕಾರ್ಯ ಪಡೆ, ಸಮರ್ಪಣಾ ಫೌಂಢೇಶನ್, ಹಾಗೂ ಶ್ರೀ ಸರ್ವಶಕ್ತಿ ಮಹಿಳಾ ಮಂಡಳ ಸಂಯುಕ್ತವಾಗಿ ನಡೆಸುತ್ತಿರುವ ರಾಷ್ಟ್ರಮಟ್ಟದಶ್ವಾನ ಪ್ರದರ್ಶನದಲ್ಲಿ 9 ತಿಂಗಳ ಒಳಗಿನ ಮರಿಗಳಿಗೂ ಸ್ಪರ್ಧೆ ಇರಲಿದೆ. ಜೊತೆಗೆ 3 ಬಹುಮಾನ, 5 ಸಮಾಧಾನಕರ ಬಹುಮಾನ ಸೇರಿ ಒಟ್ಟೂ 75 ಸಾವಿರ ರೂ. ಮೊತ್ತದ ಬಹುಮಾನ ನೀಡಲಾಗುತ್ತದೆ ಎಂದರು.
ಸ್ಪರ್ಧೆಯಲ್ಲಿ ಪಾಲ್ಗೊಂಡ ಶ್ವಾನಗಳ ಚಾಕಚಕ್ಯತೆಯ ಪರೀಕ್ಷೆ ಮಾಡಲಾಗುವುದು. ತರಬೇತಿ ಪಡೆದ ನಾಯಿಗಳಿರುವ ಕಡೆ ಬೇರೆಯವರು ಜಾಗ್ರತರಾಗಿ ವ್ಯವಹರಿಸಬೇಕಾಗುತ್ತದೆ. ಸಾರ್ವಜನಿಕರು ಪ್ರದರ್ಶನಕ್ಕೆ ಆಗಮಿಸಬಹುದಾಗಿದ್ದು, ಜಾಗ್ರತೆ ವಹಿಸಬೇಕು. ರೋಟ ವ್ಹೀಲರ್ ಮತ್ತು ಪಿಟಬುಲ್ ನಾಯಿಗಳು ಭಯಾನಕವಾಗಿದ್ದು, ಈ 2 ಜಾತಿಯ ನಾಯಿಗಳನ್ನು ಪ್ರದರ್ಶನದಿಂದ ದೂರವಿಡಲು ಯೋಚಿಸಲಾಗಿದೆ ಎಂದರು.
ವಿನಾಯಕ ವೆರ್ಣೇಕರ್ ಮಾತನಾಡಿ, ವಿವೇಕಾನಂದ ಗೆಳೆಯರ ಬಳಗ, ಸರ್ವಶಕ್ತಿ ಮಹಿಳಾ ಮಂಡಳ ಪ್ರತಿವರ್ಷ ನಗರಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದು, 2 ವರ್ಷಗಳಿಂದ ಶಿರಸಿ ನಮ್ಮ ಹಬ್ಬ ಎನ್ನುವ ಕಾರ್ಯಕ್ರಮ ವಿಶಿಷ್ಠವಾಗಿ ಆಯೋಜಿಸಲಾಗುತ್ತಿದೆ. ಈ ವರ್ಷ ಫೆ.15 ಮತ್ತು 16 ರಂದು ಶಿರಸಿ ಹಬ್ಬ ಆಚರಿಸಲಾಗುತ್ತಿದೆ.
ತಾಲೂಕು ಮಟ್ಟದ ಅನೇಕ ಕಾರ್ಯಕ್ರಮ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದೆ. ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳುವವರು ವಿನಯ ನಾಯ್ಕ 9535989895ಗೆ ಸಂಪರ್ಕಿಸಬಹುದಾಗಿದೆ.
ಡಾ| ರಾಕೇಶ ಬಂಗ್ಲೆ ಧಾರವಾಡ, ಡಾ| ಶಿಲ್ಪಾ ಪೊನ್ನಪ್ಪ, ಉಡುಪಿ, ಡಾ| ಪಿ.ಎಸ್. ಹೆಗಡೆ, ಶ್ರೀನಿವಾಸ ಹೆಬ್ಟಾರ್, ರಾಘು ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ