ಶಿವಾಜಿ ವ್ಯಕ್ತಿತ್ವ ಎಲ್ಲರಿಗೂ ಮಾರ್ಗದರ್ಶಿ
ರಾಜನಾಗಿದ್ಧರೂ ಸಾಮಾನ್ಯ ಜೀವನ ನಡೆಸಿದ್ದ ಶಿವಾಜಿ ಕರ್ನಾಟಕದಲ್ಲಿಯೇ ಯುದ್ಧ ಕೌಶಲ್ಯ ಪಡೆದಿದ್ದ ಮಹಾರಾಜ
Team Udayavani, Feb 20, 2020, 11:46 AM IST
ಬೀದರ: ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ಶೌರ್ಯ ಮತ್ತು ಸಾಹಸ ಗುಣಗಳು, ವ್ಯಕ್ತಿತ್ವ ಎಲ್ಲರಿಗೂ ಮಾರ್ಗದರ್ಶಿ ಎಂದು ಜಿಪಂ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬುಧವಾರ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಾಜಿ ಸಾಧನೆ ಹಿಂದೆ ಅವರ ತಾಯಿ ಜೀಜಾಬಾಯಿ ಪಾತ್ರವೇ ಹೆಚ್ಚು. ರಾಮಾಯಣ, ಮಹಾಭಾರತ, ಸಂಸ್ಕೃತಿ ಬಗ್ಗೆ ನೀಡಿದ ಪಾಠಗಳನ್ನು ಶಿವಾಜಿಯವರು ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ತಿಳಿಸಿದರು.
ಮಹಾರಾಷ್ಟ್ರದ ಪರಭಾಣಿಯ ಕೇಶವ ಖಟಿಂಗ್ ಉಪನ್ಯಾಸಕರಾಗಿ ಮಾತನಾಡಿ, ಶಿವಾಜಿ ಮಹಾರಾಜರ ಸಾಧನೆಗಳು ಕೇವಲ ಮರಾಠಿ ಮತ್ತು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿರದೇ ಇಡೀ ವಿಶ್ವದಾದ್ಯಂತ ಹರಡಿವೆ. ಅವರು ಯುದ್ಧ ಕೌಶಲ್ಯಗಳನ್ನು ಕರ್ನಾಟಕದಲ್ಲಿಯೇ ಪಡೆದಿದ್ದರು ಎಂದರು.
ಧಾರ್ಮಿಕ ಸಹಿಷ್ಣು: ಶಿವಾಜಿ ಎಂದಿಗೂ ಜಾತಿ, ಧರ್ಮ ಮತ್ತು ಭಾಷೆಗಾಗಿ ಹೋರಾಡಿಲ್ಲ. ಅವರ ಹೋರಾಟ ಎಲ್ಲ ಜನಾಂಗದವರಿಗೆ ಸಂಬಂಧಿ ಸಿತ್ತು. ಶಿವಾಜಿ ಅಂಗ ರಕ್ಷಕರು, ವಕೀಲರು ಸೇರಿದಂತೆ ಹಲವು ಉನ್ನತ ಹುದ್ದೆಗಳಲ್ಲಿ ಮುಸ್ಲಿಮರನ್ನು ನೇಮಕ ಮಾಡಿದ್ದರು. ಇದು ಅವರಲ್ಲಿದ್ದ ಧಾರ್ಮಿಕ ಭಾವನೆ ಎತ್ತಿ ತೋರಿಸುತ್ತದೆ ಎಂದು ವಿವರಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ, ಪದವಿಗಳನ್ನು ಸುಲಭವಾಗಿ ಗೆಲ್ಲಬಹುದು. ಆದರೆ, ಜನರ ಮನಸ್ಸು ಗೆಲ್ಲುವುದು ಕಷ್ಟಕರ. ಎಲ್ಲವನ್ನು ಶಿವಾಜಿ ಮಹಾರಾಜರು ಜಯಿಸಿ ತೋರಿಸಿದ್ದರು. ಅವರ ಹೋರಾಟ ಯಾವುದೇ ಧರ್ಮದ ವಿರುದ್ಧವಾಗಿರದೇ ಅಸತ್ಯ ಮತ್ತು ಅಧರ್ಮದ ವಿರುದ್ಧವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಮಾಜದ ಮುಖಂಡರಾದ ರಘುನಾಥರಾವ್ ಜಾಧವ್, ಮುರುಳೀಧರರಾವ್ ಕಾಳೆ, ಆರ್.ಎಂ. ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ ಸ್ವಾಗತಿಸಿದರು. ಪ್ರಾಂಶುಪಾಲ ಚನ್ನಬಸವ ಹೇಡೆ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು