ದೊರಸ್ವಾಮಿ ನೂರು ವರ್ಷದಲ್ಲಿ ಅನುಭವಿಸದೇ ಇರುವುದನ್ನು ಈಗ ಅನುಭವಿಸುವಂತಾಗಿದೆ: ಅಯನೂರು
Team Udayavani, Mar 1, 2020, 1:05 PM IST
ಶಿವಮೊಗ್ಗ: ಬಸನಗೌಡ ಯತ್ನಾಳ್ ಮತ್ತು ದೊರೆಸ್ವಾಮಿ ಬಗ್ಗೆ ಪರ ವಿರೋಧ ಹೇಳಿಕೆ ನಡುವೆ ದೊರೆಸ್ವಾಮಿ ನಿತ್ಯ ಅಪಮಾನಕ್ಕೆ ಒಳಗಾಗುತ್ತಿದ್ದಾರೆ. ದೊರೆಸ್ವಾಮಿಯವರು ಶತಾಯುಷಿ. ದೊರಸ್ವಾಮಿ ನೂರು ವರ್ಷದಲ್ಲಿ ಅನುಭವಿಸದೇ ಇರುವುದನ್ನು ಈಗ ಅನುಭವಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅಯನೂರು ಮಂಜುನಾಥ್ ಹೇಳಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ತಮ್ಮ ಕ್ರೆಡಿಟ್ ಅನ್ನು ಎಲ್ಲದಕ್ಕೂ ಬಳಸಬಾರದು. ದೊರೆಸ್ವಾಮಿಯಾಗಿ ತಮ್ಮ ನಿಲುವು ಪ್ರಕಟ ಮಾಡುತ್ತಾರೋ? ಅಥವಾ ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಕಟ ಮಾಡುತ್ತಾರೋ ಅವರು ಸ್ಪಷ್ಟಪಡಿಸಬೇಕು ಎಂದರು.
ಯತ್ನಾಳ ಹೇಳಿಕೆಯಲ್ಲಿ ಕೆಲ ಪದಗಳ ಬಳಕೆ ಅಷ್ಟು ಸಮಂಜಸವಾಗಿಲ್ಲ ಎಂದ ಅವರು, ಈ ವಿವಾದ ಇಲ್ಲಿಗೆ ನಿಲ್ಲಿಸುವಂತೆ ಮನವಿ ಮಾಡುತ್ತೇನೆ ಎಂದರು.
ಸಿದ್ದರಾಮಯ್ಯನವರಿಗೆ ಬೇರೆ ವಿಷಯವೇ ಸಿಕ್ಕಿಲ್ಲ. ಅದಕ್ಕೆ ಯತ್ನಾಳ ಹೇಳಿಕೆ ವಿಷಯ ಕುರಿತು ಅಧಿವೇಶನದಲ್ಲಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಜೀವಂತವಾಗಿ ಇರುವುದಕ್ಕೆ ಈ ವಿಷಯ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಶಾಸಕ, ಸಿಎಂ ಆದರೂ ಉತ್ತಮ ಪಾರ್ಲಿಮೆಂಟರಿಯನ್ ಆಗಲಿಲ್ಲ ಎಂದು ಅಯನೂರು ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು