ರೈತನ ಕೈ ಹಿಡಿದ ದಾಳಿಂಬೆ!

ಎಕರೆಗೆ 25 ಟನ್‌ ದಾಳಿಂಬೆ ಫಸಲು ಹಣ್ಣುಗಳ ರಕ್ಷಣೆಗೆ ಗ್ಲೋಕವರ್‌ ಬಳಕೆ

Team Udayavani, Mar 7, 2020, 4:25 PM IST

7-March-19

ನಾಯಕನಹಟ್ಟಿ: ಚಳ್ಳಕೆರೆ ತಾಲೂಕು ತೊರೆಕೋಲಮ್ಮನಹಳ್ಳಿ ಗ್ರಾಮದ ರೈತ ಕೆ.ನಾಗರಾಜ್‌ ನಾಲ್ಕು ಎಕರೆಯಲ್ಲಿ ನೂರು ಟನ್‌ ದಾಳಿಂಬೆ ಬೆಳೆದು ಗಮನ ಸೆಳೆದಿದ್ದಾರೆ.

ನಾಲ್ಕು ಎಕರೆಯಲ್ಲಿ ಕೆಂಪು ಮಣ್ಣಿನ ಭೂಮಿಯಲ್ಲಿ 1900 ದಾಳಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ಮೂರು ಬೋರ್‌ ವೆಲ್‌ಗ‌ಳಿಂದ ತಲಾ ಎರಡು ಇಂಚ್‌ನಷ್ಟು ನೀರು ದೊರೆಯುತ್ತಿದೆ. ಇಡೀ ತೋಟಕ್ಕೆ ಡ್ರಿಪ್‌ ಮೂಲಕ ನೀರು ಹಾಯಿಸಲಾಗುವುದು. ಗಿಡಗಳ ಮೇಲ್ಭಾಗದಲ್ಲಿ ಗ್ಲೋಕವರ್‌ ಬಳಕೆ, ಜೈವಿಕ ಬೇಲಿ ಸೇರಿದಂತೆ ನಾನಾ ವಿಧಾನಗಳಿಂದ ದಾಖಲೆಯ ಇಳುವರಿ ಪಡೆದಿದ್ದಾರೆ.

ಗಿಡವನ್ನು ನಾಟಿ ಮಾಡುವುದಕ್ಕೆ ಮುಂಚೆ ಗುಂಡಿ ತೆಗೆದು 70 ಕೆ.ಜಿ.ಯಷ್ಟು ಕೊಟ್ಟಿಗೆ
ಗೊಬ್ಬರ ಹಾಕಲಾಗಿದೆ. ನಂತರ ಹಸಿರೆಲೆ ಗೊಬ್ಬರದ ಜತೆಗೆ ಗಿಡ ನಾಟಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ದಾಳಿಂಬೆ ಹಣ್ಣು ಉತ್ತಮ ಬಣ್ಣ ಹಾಗೂ ಗಾತ್ರ ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬಿಸಿಲಿನಿಂದಾಗಿ ಹಣ್ಣಿನ ಬಣ್ಣ ಕೆಡುತ್ತಿದೆ. ಜತೆಗೆ ಹಣ್ಣನ್ನು ಪಕ್ಷಿಗಳಿಂದ ಹಾಗೂ ಗಾಳಿಯಿಂದ ಹರಡುವ ರೋಗಗಳಿಂದ ರಕ್ಷಿಸಲು ನಾಗರಾಜ್‌ ಗ್ಲೋಕವರ್‌ಗಳನ್ನು ಬಳಸಿದ್ದಾರೆ. ಹತ್ತು ಅಡಿ ಅಗಲದ ಪ್ಲಾಸ್ಟಿಕ್‌ ಹಾಗೂ ಕಾಟನ್‌ ಮಿಶ್ರಿತ ಕವರ್‌ ಇಡೀ ಗಿಡಕ್ಕೆ ಹರಡಿದ್ದಾರೆ. ಇದಕ್ಕಾಗಿ ಕಟ್ಟಿಗೆಗಳನ್ನು ಆಧಾರವಾಗಿ ಬಳಸಿದ್ದಾರೆ.

ತೋಟದಲ್ಲಿರುವ ಎಲ್ಲ 1900 ದಾಳಿಂಬೆ ಗಿಡಗಳಿಗೆ ಗ್ಲೋ ಕವರ್‌ ಹೊದಿಸಲಾಗಿದೆ.
ದಾಳಿಂಬೆಗೆ ಗಾಳಿಯಿಂದ ಹರಡುವ ಟ್ರಿಪ್ಸ್‌, ಕಾಯಿಕೊರೆಕ ಹೆಚ್ಚಿನ ಸಮಸ್ಯೆ ಉಂಟು ಮಾಡುತ್ತವೆ. ಸುತ್ತಲಿನ ಹೊಲಗಳಿಂದ ಹರಡುವ ರೋಗಗಳನ್ನು ತಡೆಯಲು ಜೀವಂತ ಬೇಲಿ ನಿರ್ಮಿಸಲಾಗಿದೆ. ನಾಲ್ಕು ಎಕರೆ ದಾಳಿಂಬೆ ತೋಟದ ಸುತ್ತಲೂ ಕಬ್ಬಿಣದ ಮುಳ್ಳು ತಂತಿ ಹಾಕಲಾಗಿದೆ.

ತಂತಿಯ ಮೇಲ್ಭಾಗದಲ್ಲಿ ಗಿಡಗಳು ಹಾಗೂ ಬಳ್ಳಿಗಳನ್ನು ಬೆಳೆಸಿದ್ದಾರೆ. ತೋಟದ
ಸುತ್ತಲಿರುವ ಜೀವಂತ ತಂತಿ ಬೇಲಿ ಜನರು ಹಾಗೂ ಕೀಟಗಳಿಂದ ರಕ್ಷಣೆ ಒದಗಿಸಿದೆ.
ಜೀವಂತ ತಂತಿ ಬೇಲಿ ನಿರ್ಮಾಣದಿಂದ ಗಾಳಿ ಹಾಗೂ ಕೀಟಗಳ ಪ್ರಸಾರಕ್ಕೆ ತಡೆ ಒಡ್ಡಿದೆ.
ಜತೆಗೆ ಇದು ಒಣಗಿದ ನಂತರ ಉತ್ತಮ ಕಾಂಪೋಸ್ಟ್‌ ಗೊಬ್ಬರವಾಗಿ ಮಾರ್ಪಾಟು ಹೊಂದುತ್ತದೆ.

ಗಿಡಗಳನ್ನು ಬೆಳೆಸಿದ ಮೊದಲ ವರ್ಷದಲ್ಲಿ ನಾಲ್ಕು ಎಕರೆ ತೋಟದಿಂದ 45 ಟನ್‌,
ಎರಡನೇ ವರ್ಷದಲ್ಲಿ 60 ಟನ್‌, ಮೂರನೇ ವರ್ಷದಲ್ಲಿ 78 ಟನ್‌ ಇದೀಗ 100 ಟನ್‌ ಇಳುವರಿ ಪಡೆದಿದ್ದಾರೆ. ವರ್ಷದಿಂದ ವರ್ಷಕ್ಕೆ ಹೊಸ ವಿಧಾನಗಳ ಅಳವಡಿಕೆಯಿಂದ ಇಳುವರಿ ಪ್ರಮಾಣ ಹೆಚ್ಚಾಗುತ್ತಿದೆ. ಪ್ರತಿ ಎಕರೆಗೆ ಸರಾಸರಿ 25 ಟನ್‌ ದಾಳಿಂಬೆ ಫಸಲು ಪಡೆದಿದ್ದಾರೆ.

ಪ್ರತಿ ಗಿಡದಿಂದ ಸುಮಾರು 60 ಕೆಜಿ ಇಳುವರಿ ಪಡೆಯಲಾಗುತ್ತಿದೆ. ಪ್ರತಿ ಗಿಡವು ಹೆಚ್ಚಿನ ಫಸಲಿನಿಂದಾಗಿ ನೆಲ ಮುಟ್ಟುತ್ತಿದೆ. ಹಣ್ಣಿನ ಭಾರದಿಂದ ನೆಲಕ್ಕೆ ಬೀಳುವುದನ್ನು ತಡೆಯಲು ಗಿಡಗಳಿಗೆ ಆಧಾರವಾಗಿ ಕಟ್ಟಿಗೆ ಒದಗಿಸಲಾಗಿದೆ. ಕಳೆದ ಬಾರಿಯ ಕಟಾವಿನಲ್ಲಿ ದೊಡ್ಡ ಗಿಡದಲ್ಲಿ ಬಿಟ್ಟಿದ್ದ ಹಣ್ಣು 1ಕೆಜಿ 200 ಗ್ರಾಂ ತೂಕವಿತ್ತು. ಬೆಂಗಳೂರಿನ ವರ್ತಕರು ತೋಟದಲ್ಲಿಯೇ ಬೆಳೆ ಖರೀದಿಸುತ್ತಿದ್ದಾರೆ.

ಪ್ರತಿ ಕೆಜಿಗೆ 85 ರಿಂದ 90 ರೂ. ಬೆಲೆ ದೊರೆತಿದೆ. ನಾಲ್ಕು ಎಕರೆ ಭೂಮಿಯಿಂದ ಲಕ್ಷಾಂತರ ರೂ. ಆದಾಯ ಗಳಿಸಿದ ಇವರು ಇತರ ರೈತರಿಗೆ ಮಾದರಿಯಾಗಿದ್ದಾರೆ. ಆರ್‌ಎಂಪಿ ವೈದ್ಯರಾಗಿದ್ದ ಇವರು ತಮ್ಮ ವೃತ್ತಿಯನ್ನು ಬಿಟ್ಟು ಪೂರ್ಣ ಪ್ರಮಾಣದಲ್ಲಿ ರೈತರಾಗಿ ಜೀವನ
ರೂಪಿಸಿಕೊಂಡಿದ್ದಾರೆ. ದಾಳಿಂಬೆಯಿಂದ ಬಂದ ಲಾಭದಲ್ಲಿ ಇನ್ನೂ ಐದು ಎಕರೆ ಜಮೀನು ಖರೀದಿಸಿರುವ ಇವರು ಹೊಸ ಹೊಲದಲ್ಲಿ ಡ್ರಾಗನ್‌ ಫ್ರೂಟ್ಸ್‌ ಗಳನ್ನು ಬೆಳೆಯುವ
ಚಿಂತನೆಯಲ್ಲಿದ್ದಾರೆ.

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.