ಮನಸ್ಸು ಹತೋಟಿಯಲ್ಲಿ ಇಟ್ಟುಕೊಳ್ಳಿ

ಭಗವಂತನ ಸತ್ಸಂಗದಲ್ಲಿ ತಲ್ಲೀನನಾದಲ್ಲಿ ಬದುಕು ಸಾರ್ಥಕ: ಸ್ವಾಮೀಜಿ

Team Udayavani, Mar 7, 2020, 5:30 PM IST

7-March-25

ಶಹಾಪುರ: ಮಂಗನಂತಿರುವ ಈ ಮಾಯದ ಮನಸ್ಸನ್ನು ಏಕಾಗ್ರತೆ ಮೂಲಕ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಆದರೆ ಮನಸ್ಸನ್ನು ಸಮಾಧಾನಿಸಲು ಸಂತೃಪ್ತಿಸಲು ಸಾಧ್ಯವಿಲ್ಲ ಎಂದು ಇಂಡಿ ಓಂಕಾರಾಶ್ರಮ ಸಿದ್ಧಾರೂಢ ಮಠದ ಡಾ| ಸ್ವರೂಪಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಭೀಮರಾಯನ ಗುಡಿ ಸಾಧಕ ಸಿದ್ಧಾಶ್ರಮ ಸಿದ್ಧಾರೂಡ ಮಠದಲ್ಲಿ ನಡೆಯುತ್ತಿರುವ ಮೂರನೇ ದಿನದ ಜ್ಞಾನ ದಾಸೋಹದಲ್ಲಿ “ಮನಸ್ಸಿಗೆ ಬಂದಂತೆ
ನಡೆಯದಿರು’ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಚಿತ್ರ ವಿಚಿತ್ರವಾಗಿ ವರ್ತಿಸುವ ಈ ಸುಂದರ ಮನಸ್ಸು ಭಗವಂತನನ್ನು ಸ್ಮರಿಸುವಂತೆಯೂ ಮತ್ತು ಮರೆಸುವಂತೆಯೂ ಮಾಡುವ ಶಕ್ತಿ ಇದೆ. ಈ ಮನಸ್ಸಿಗೆ ಉತ್ತಮ ಸಂಸ್ಕಾರ ನೀಗಿಸುವ ಮೂಲಕ ಮನಸ್ಸನ್ನು ಪ್ರತಿಬಂಧನೆ ಮಾಡಬಹುದು. ಸ್ವಾಭಾವಿಕವಾಗಿ ಚಂಚಲತೆ ಹೊಂದಿರುವ ಮನಸ್ಸು ಸಂತೃಪ್ತಿ ಹೊಂದಲು ಆಗದು. ಆದರೆ ಈ ಮನಸ್ಸನ್ನು ಶಿವಸ್ಮರಣೆಯಿಂದ ಬಂಧಿಸಿ ದಂಡಿಸಿ ಪ್ರಯತ್ನಿಸಲು ಮುಂದಾದರೆ ಬದುಕು ಒಂದಿಷ್ಟು ಸಾರ್ಥಕತೆ ಪಡೆದುಕೊಳ್ಳಲಿದೆ. ಸಂತ, ಶರಣರ, ಸತ್ಪುರುಷರು ತೋರಿದ ಸನ್ಮಾರ್ಗದಿ ನಾವೆಲ್ಲ ನಡೆದುಕೊಂಡರೆ ಮಾನವ ಜನ್ಮ ಪಾವನವಾಗಲಿದೆ ಎಂದರು.

ಮನಸ್ಸನ್ನು ಗೆದ್ದವರು ಮಹಾತ್ಮರಾಗಿ ಲೋಕ ಕಲ್ಯಾಣಕ್ಕಾಗಿ ತಮ್ಮ ಬದುಕನ್ನೆ ವಿಶ್ವಶಾಂತಿಗಾಗಿ ಅರ್ಪಣೆ ಮಾಡಿದ್ದಾರೆ. ಇಂತಹ ಅಪರೂಪದ ಶರೀರಿ ಪಡೆದುಕೊಂಡ ಮನುಷ್ಯ ಜನ್ಮ ಈ ಕುಟಿಲ ಸಂಸಾರದೊಳಗೆ ಬಿದ್ದು ನಾನು ನನ್ನದೆಂಬ ಮಮಕಾರದಿಂದ ಭ್ರಾಂತಿಯಲ್ಲಿ ಮುಳುಗಿ ಸಂಸಾರಕ್ಕೆ ಅಂಟಿಕೊಂಡು ಬಲಳುವ ಬದಲು ಶಿವನಾಮ ಸ್ಮರಣೆ, ಭಗವಂತನ ಸತ್ಸಂಗದಲ್ಲಿ ತಲ್ಲೀನನಾದಲ್ಲಿ ಬದುಕು ಸಾರ್ಥಕತೆ ಪಡೆಯಲಿದೆ ಎಂದು ತಿಳಿಸಿದರು.

ಕುದರೆಯಂತೆ ಓಟ ಹೊಂದಿದ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಒಂದಿಷ್ಟು ಯೋಗ, ಧ್ಯಾನ, ಸತ್ಸಂಗ, ಭಜನೆಯಂತ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ನಮ್ಮ ಮನಸ್ಸು ನಿರ್ಮಲವಾಗಿ ಬದುಕು ಮಂಗಲಮಯವಾಗಲಿದೆ ಎಂದರು. ಬೀದರನ ಸಿದ್ಧಾರೂಢ ಮಠದ ಸದ್ಗುರು ಡಾ| ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾತೋಶ್ರೀ ಲಕ್ಷ್ಮೀದೇವಿ, ಜ್ಞಾನೇಶ್ವರಿ ದೇವಿ, ಮಾತಾ ನೀಲಾಂಬಿಕಾ ತಾಯಿ ಉಪಸ್ಥಿತರಿದ್ದರು. ಗೋಪಾಲರಾವ್‌ ಶಾಸ್ತ್ರಿ, ವಿನಾಯಕ ಮಹಾರಾಜರು, ಮಾತಾ ಶಂಕ್ರೆಮ್ಮ ತಾಯಿ, ವಿನಾಯಕ ಮಹಾರಾಜ, ಮಾತಾ ಶಂಕ್ರೆಮ್ಮ, ಸೊಲ್ಲಾಪುರದ ಅರುಣಾ ಮಾತಾ ಭಾಗವಹಿಸಿದ್ದರು. ದೋರನಹಳ್ಳಿಯ ಮಹೇಶ ಪತ್ತಾರ ನಿರೂಪಿಸಿ, ವಂದಿಸಿದರು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.