ಹೋಂ ಕ್ವಾರಂಟೈನ್ ಉಲ್ಲಂಘಿಸಿದ ಅಧಿಕಾರಿಯ ಕುಟುಂಬದ ವಿರುದ್ಧ ಪ್ರಕರಣ
Team Udayavani, Apr 3, 2020, 2:05 PM IST
ರಾಯಚೂರು: ಹೋಂ ಕ್ವಾರೆಂಟೇನ್ ಉಲ್ಲಂಘಿಸಿದ ವೈಟಿಪಿಎಸ್ ನ ಅಧಿಕಾರಿಯ ಕುಟುಂಬದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಧಿಕಾರಿಯ ಮಗನ ಸ್ನೇಹಿತೆ ಜರ್ಮನಿಯಿಂದ ಶಕ್ತಿನಗರಕ್ಕೆ ಬಂದಿದ್ದರು. ಅಧಿಕಾರಿ ಪತ್ನಿ ಕೂಡ ವೈಟಿಪಿಎಸ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಗ ಸೇರಿದಂತೆ ಕುಟುಂಬದ ನಾಲ್ವರನ್ನು ಮಾರ್ಚ್ 14 ರಿಂದ ಮಾರ್ಚ 29 ರವರೆಗೆ ಹೋಂ ಕ್ವಾರೆಂಟೇನ್ ನಲ್ಲಿ ಇಡಲಾಗಿತ್ತು. ಆದರೂ ಆದೇಶ ಉಲ್ಲಂಘಿಸಿ ಆರ್ ಟಿ ಪಿಎಸ್ , ವೈಟಿಪಿಎಸ್ ನಲ್ಲಿ ದಂಪತಿ ಕೆಲಸ ಮಾಡಿದ್ದರು.
ದೇವಸುಗೂರು ಉಪತಹಸೀಲ್ದಾರ್ ದೂರಿನ ಮೇರೆಗೆ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ