ಸೆಲೂನ್ ಬಂದ್, ಬಿಸಿಲ ಧಗೆ:ಪೊಲೀಸರಿಂದ ರಕ್ಷಣಾ ಮಾರ್ಗ!
Team Udayavani, Apr 5, 2020, 11:00 AM IST
ಪುತ್ತೂರು: ದೇಶದ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ತೊಡಗಿರುವ ಯೋಧರು ಹಾಗೂ ಪೊಲೀಸರು ಕರ್ತವ್ಯದ ಜತೆಗೆ ಸ್ವಯಂ ಶಿಸ್ತಿಗೂ ಆದ್ಯತೆ ನೀಡಬೇಕು. ಲಾಕ್ಡೌನ್ನಿಂದಾಗಿ ಕೌÒರದ ಅಂಗಡಿಗಳೂ ಬಂದ್ ಆಗಿರುವ ಈ ದಿನಗಳಲ್ಲಿ ಬಿಸಿಲಿನ ಝಳದಿಂದ ಪಾರಾಗಲು ಪುತ್ತೂರಿನ ಪೊಲೀಸರು ಸುಲಭ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಅದೆಂದರೆ ಟ್ರಿಮ್ಮರ್ ಮೂಲಕ ತಲೆಯನ್ನು ಸಂಪೂರ್ಣ ಬೋಳಿಸಿಕೊಳ್ಳುವುದು!
ದೇಶದಲ್ಲಿ ಲಾಕ್ಡೌನ್ ಘೋಷಣೆಗೆ ಕೆಲವು ದಿನಗಳ ಮೊದಲೇ ಸೆಲೂನ್ಗಳು ಮತ್ತು ಬ್ಯೂಟಿಪಾರ್ಲರ್ಗಳು ಬಾಗಿಲು ಮುಚ್ಚಿದ್ದವು. ಜನಸಾಮಾನ್ಯರು ಮನೆಯಲ್ಲೇ ಇರುವುದರಿಂದ ಗಡ್ಡ, ತಲೆಗೂದಲನ್ನು ತೆಗೆಯದಿದ್ದರೂ ದೊಡ್ಡ ಸಮಸ್ಯೆಯಾಗಲಾರದು. ಆದರೆ ಇಲಾಖಾ ಶಿಸ್ತು ಪಾಲನೆ ಪೊಲೀಸರಿಗೆ ಅನಿವಾರ್ಯ. ಈಗ ಅವರ ನೆರವಿಗೆ ಬಂದಿರುವುದು ಟ್ರಿಮ್ಮರ್ಗಳು.ಪುತ್ತೂರು ನಗರ ಹಾಗೂ ಸಂಚಾರ ಠಾಣೆಯ ಹಲವು ಮಂದಿ ಪೊಲೀಸರು ಈಗಾಗಲೇ ಟ್ರಿಮ್ಮರ್ಗೆ ತಲೆ ಒಡ್ಡಿದ್ದಾರೆ. ಬಿಸಿಲಿನ ಧಗೆಯಿಂದ ಬೆವರಿಳಿಯುವ ತಲೆಯನ್ನು ಬೋಳಿಸಿದರೆ ಒಂದಷ್ಟು ಪ್ರಯೋಜನವಾಗುತ್ತದೆ ಎನ್ನುತ್ತಾರೆ ಅವರು.