ಜನ್ಧನ್ಕ್ಕಾಗಿ ಬ್ಯಾಂಕ್ ಎದುರು ಸಾಲು
Team Udayavani, Apr 8, 2020, 12:45 PM IST
ದಾವಣಗೆರೆ: ಲಾಕ್ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನ್ಧನ್ ಖಾತೆಗೆ ಜಮೆ ಮಾಡಿರುವ 500 ರೂಪಾಯಿ ಬಿಡಿಸಿಕೊಳ್ಳಲು ಮಂಗಳವಾರ ಅನೇಕ ಬ್ಯಾಂಕ್ಗಳಲ್ಲಿ ಮಹಿಳೆಯರು ಸಮಸ್ಯೆ ಅನುಭವಿಸಿದರು.
ತಮ್ಮ ಬ್ಯಾಂಕ್ ಖಾತೆಗೆ 500 ರೂಪಾಯಿ ಜಮೆ ಮಾಡಲಾಗಿದೆ ಎಂದು ಮೊಬೈಲ್ ಗೆ ಸಂದೇಶ ಬರುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ತಮ್ಮ ಖಾತೆ ಇರುವ ಬ್ಯಾಂಕ್ಗಳತ್ತ ದೌಡಾಯಿಸಿದರು. ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ ಒಳಗೊಂಡಂತೆ ಅನೇಕ ಕಡೆ ಬ್ಯಾಂಕ್ಗಳ ಮುಂದೆ ಕಿಲೋಮೀಟರ್ ಉದ್ದನೆಯ ಸರತಿ ಸಾಲಿನಲ್ಲಿ ಮಹಿಳೆಯರು ಬೆಳಗ್ಗೆಯಿಂದಲೇ ಬಿರು ಬಿಸಿಲನ್ನೂ ಲೆಕ್ಕಿಸದೆ ನಿಂತಿದ್ದರು. ಮೆಸೇಜ್ ಬಂದ ದಿನವೇ ಹಣ ಬಿಡಿಸಿಕೊಳ್ಳಬೇಕಂತೆ, ಇಲ್ಲದಿದ್ದರೆ ಹಣ ವಾಪಾಸ್ಸಾಗುತ್ತದೆ… ಎಂಬ ಮಾತುಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದಂತೆ ಮಹಿಳೆಯರ ಜಮಾವಣೆ ಹೆಚ್ಚಾಗ ತೊಡಗಿತು. ಬಿನ್ನಿ ಕಂಪನಿ ರಸ್ತೆಯ ಬ್ಯಾಂಕ್ ಮುಂದೆ ನೂರಾರು ಮಹಿಳೆಯರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ನಿಂತಿದ್ದನ್ನು ಕಂಡಂತಹ ಮೇಯರ್ ಅಜಯ್ ಕುಮಾರ್ ಕಾರಿನಿಂದ ಇಳಿದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು. ಕೆಲ ಬ್ಯಾಂಕ್ಗಳಲ್ಲಿ ರಕ್ಷಣಾ ಸಿಬ್ಬಂದಿ ಸಾಮಾಜಿಕ ಅಂತರ ಕಾಪಾಡಲು ಹರ ಸಾಹಸ ಪಡಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ