ಸಾರ್ವಜನಿಕರಿಗೆ ಬಾಳೆಗೊನೆ ಉಚಿತ ಹಂಚಿಕೆ
Team Udayavani, Apr 8, 2020, 5:44 PM IST
ಕಂಪ್ಲಿ: ಕೊರೊನಾ ಪರಿಣಾಮ ಬಾಳೆ ವಹಿವಾಟು ಸ್ಥಗಿತವಾದ ಹಿನ್ನೆಲೆಯಲ್ಲಿ ವಾಣಿಜ್ಯ ಬೆಳೆ ಲಕ್ಷಾಂತರ ರೂ ಮೌಲ್ಯದ ಬಾಳೆಗೊನೆಗಳನ್ನು ತೋಟದ ಮಾಲೀಕ ಉಚಿತವಾಗಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಹಂಚುತ್ತಿದ್ದಾನೆ. ತಾಲೂಕಿನ ನೆಲ್ಲುಡಿ ಗ್ರಾಪಂ ವ್ಯಾಪ್ತಿಯ ಶಂಕರಸಿಂಗ್ ಕ್ಯಾಂಪಿನ ರೈತ ಚೆಲ್ಲಾ ಧನಂಜಯ 6 ಎಕರೆ ಭೂಮಿಯಲ್ಲಿ ಬೆಳೆದ ಬಾಳೆ ತೋಟದ ಗೋನೆಗಳು (ಜಿ.9 ತಳಿ) ಕಟಾವಿಗೆ ಬಂದಿವೆ. ಆದರೆ ಕೊರೊನಾ ಪರಿಣಾವಾಗಿ ವ್ಯಾಪಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹಣ್ಣು ಹಾಳಾಗಬಾರದೆಂದು ರೈತರಿಗೆ ಮತ್ತು ಸಾರ್ವಜನಿಕರಿಗೆ ಕಳೆದ ಮೂರು ದಿನಗಳಿಂದ ಉಚಿತವಾಗಿ ನೀಡುತ್ತಿದ್ದಾರೆ.
ಸುಮಾರು 6 ಎಕರೆಗೆ 9 ಲಕ್ಷಕ್ಕೂ ಅಧಿಕವಾಗಿ ವೆಚ್ಚ ಮಾಡಲಾಗಿದೆ. ಆದರೆ ಮಾರಾಟ ಇಲ್ಲದ್ದರಿಂದ ಬಾಳೆಗೊನೆಗಳು ಹಾಳಾಗಬಾರದೆಂದು ಸುತ್ತಮುತ್ತಲಿನ ಜನತೆಗೆ ಉಚಿತವಾಗಿ ಹಂಚುತ್ತಿರುವುದು ಗಮನ ಸೆಳೆದಿದೆ. ಪ್ರತಿ ಒಂದು ಗೊನೆ ಕನಿಷ್ಠ 45 ರಿಂದ 55 ಕೆಜಿ ತೂಕ ಬರಲಿದೆ ಎಂದು ತಿಳಿದು ಬಂದಿದೆ. ಔಷಧ ಸಂಸ್ಕರಣೆ: ಹಸಿರು ಬಾಳೆಕಾಯಿಗೆ ಮುಂಜಾಗ್ರತೆಯಾಗಿ ಉಚಿತ ಕೊಡುವ ಜೊತೆಗೆ ಯಾವುದೇ ರೋಗಗಳು ಬಾರದೇ ಇರಲೆಂದು ಔಷಧ ನೀರಿನ ಸಂಸ್ಕರಣೆ ಮಾಡಿ ತೇವಾಂಶದೊಂದಿಗೆ ಗೊನೆ ನೀಡುವುದರ ಮೂಲಕ ಮಾದರಿ ರೈತನಾಗಿದ್ದಾನೆ.
ಉಳಿದ ಚಿಗರು ಬಾಳೆ ಗಿಡಗಳಿಗೆ ಪೋಷಣೆ ಮಾಡಿ ಬೆಳೆಸಿದರೆ, ಮುಂದಿನ ದಿನಗಳಲ್ಲಿ ಎರಡನೇ ಬೆಳೆಯಾದರು ಉತ್ತಮವಾಗಿ ಬೆಳೆದು, ಮೊದಲ ಬೆಳೆಗೆ ತಗಲಿರುವ ವೆಚ್ಚ ಹಾಗೂ ನಷ್ಟ ಕೈ ಸೇರಬಹುದು ಎಂಬ ಆಶಯವಿದೆ.
ಚೆಲ್ಲಾ ಧನಂಜಯ,
ಬಾಳೆ ಬೆಳೆದ ರೈತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HDK ಹೇಳುತ್ತಿದ್ದದ್ದು ಪ್ರಜ್ವಲ್ ಪೆನ್ಡ್ರೈವ್ ಇರಬೇಕು: ಜಮೀರ್
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್