ನ್ಯಾಯಬೆಲೆ ಅಂಗಡಿಗೆ ಶಾಸಕ ರಾಜುಗೌಡ ಭೇಟಿ
Team Udayavani, Apr 15, 2020, 4:24 PM IST
ನಾರಾಯಣಪುರ: ಕೊಡೇಕಲ್ ಪಟ್ಟಣದ ನ್ಯಾಯಬೆಲೆ ಅಂಗಡಿಗೆ ಶಾಸಕ ರಾಜುಗೌಡ ಭೇಟಿ ನೀಡಿ ಪರೀಶಿಲನೆ ನಡೆಸಿದರು
ನಾರಾಯಣಪುರ: ಬಯೋಮೆಟ್ರಿಕ್ ಇಲ್ಲ; ಓಟಿಪಿ ಬರಲಿಲ್ಲ ಎಂದು ಇಲ್ಲದ ನೆಪ ಹೇಳಿ ಯಾವ ಪಡಿತರದಾರರನ್ನು ವಾಪಸ್ ಕಳುಹಿಸಬೇಡಿ ಎಂದು ಶಾಸಕ ನರಸಿಂಹನಾಯಕ (ರಾಜುಗೌಡ) ಹೇಳಿದರು.
ಕೊಡೇಕಲ್ ಪಟ್ಟಣದ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು. ಇದೇ ವೇಳೆ ಪಡಿತರದಾರರು ಓರ್ವ ಮಹಿಳೆ “ನಮ್ಮಲ್ಲಿ ಫೋನ್ ಇಲ್ಲ. ಅದಕ್ಕೆ ನಮಗೆ ರೇಷನ್ ಇಲ್ಲ ಎಂದರೆ, ಇನೋರ್ವ ಮಹಿಳೆ ನಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಬೇಕಿದ್ದು, ಅದಕ್ಕೆ ಪಡಿತರ ಬರುವುದಿಲ್ಲವಂತೆ ಎಂದು ತಮ್ಮ ಅಳಲು ಶಾಸಕರ ಮುಂದೆ ತೋಡಿಕೊಂಡರು.
ಈ ಕುರಿತು ಅಂಗಡಿ ಮಾಲೀಕರಿಂದ ಮಾಹಿತಿ ಪಡೆದ ಶಾಸಕರು, ಜಿಲ್ಲಾ ಆಹಾರ ನಿದೇರ್ಶಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮುಖ್ಯಮಂತ್ರಿಗಳು ನೀಡಿರುವ ಆದೇಶ ಪ್ರತಿ ಕುರಿತಂತೆ ಮಾತನಾಡಿದರು. ಪ್ರತಿಯೊಬ್ಬ ಪಡಿತರದಾರರಿಗೆ ಸಹಿ ಪಡೆಯುವ ಮೂಲಕ ಪಡಿತರ ನೀಡುವಂತೆ ಆದೇಶ ಹೊರಡಿಸಿ ಎಂದು ಹೇಳಿದರು. ಸಿದ್ದನಗೌಡ ಕರಿಭಾವಿ, ಸಂತೋಷ ಕೊಡೇಕಲ್ಮಠ, ಬಸವರಾಜ ಭದ್ರಗೋಳ, ಪ್ರಮೋದ ಜೋಶಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ