ಸ್ವಂತ ಹಣದಲ್ಲಿ ಆಹಾರ ಧಾನ್ಯ ವಿತರಣೆ
Team Udayavani, Apr 20, 2020, 5:21 PM IST
ಬಳ್ಳಾರಿ: ಕೊರೊನಾ ಸೈನಿಕ, ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಆರ್.ಎನ್. ಶಿವರಾಜ್ ರೇಷನ್ ಕಿಟ್ಗಳನ್ನು ವಿತರಿಸಿದರು.
ಬಳ್ಳಾರಿ: ಕೋವಿಡ್-19ನ ಈ ಲಾಕ್ ಡೌನ್ ಸಂದರ್ಭದಲ್ಲಿ ಕೋವಿಡ್ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಆರ್.ಎನ್. ಶಿವರಾಜ್ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾವಿಹಾಳದ ವಿಕಲಚೇತನರು, ಹಿರಿಯ ನಾಗರಿಕರು, ವಿಧವೆಯರ ಕುಟುಂಬಗಳಿಗೆ ಪಡಿತರ ಕಿಟ್ನ್ನು ಭಾನುವಾರ ವಿತರಿಸಿದರು.
ಕೋವಿಡ್ ಸೈನಿಕ ಆರ್.ಎನ್. ಶಿವರಾಜ್ ಅವರು 20 ಸಾವಿರ ರೂಗಳ ಸ್ವಂತ ವೆಚ್ಚದಲ್ಲಿ ಅಕ್ಕಿ, ಬೆಳೆ, ಎಣ್ಣೆ, ಹಿಟ್ಟು, ಸಕ್ಕರೆ ಸೇರಿದಂತೆ ಅವಶ್ಯಕ ಆಹಾರ ಪದಾರ್ಥಗಳ ಪಡಿತರ ಕಿಟ್ ನ್ನು 100ಕ್ಕೂ ಹೆಚ್ಚು ಕುಟುಂಬಗಳಿಗೆ ವಿತರಿಸಿದರು. ಮೊದಲಿಗೆ ಗ್ರಾಮದ ಕನಕ ವೃತ್ತದ ಆವರಣದಲ್ಲಿ ವಿತರಿಸಿದ ಅವರು ನಂತರ ಈ ಮುಂಚೆಯೇ ಗುರುತಿಸಲಾದವರ ಮನೆ-ಮನೆಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಆರ್.ಟಿ. ಆದೇಪ್ಪ, ಗಂಗಾಧರ್, ನಾಗರಾಜ, ದೇವಿಪುತ್ರ, ವೀರೇಶ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!