ಭಾವ ನವನವೀನ

ಮುಖಪುಟದಲ್ಲಿ ವಿಜಯರಾಘವೇಂದ್ರ ಗಾಯನ ; ಡಾಕ್ಟರ್, ಪೊಲೀಸರಿಗೆ ಅರ್ಪಣೆ

Team Udayavani, Apr 21, 2020, 10:46 AM IST

cinema-tdy-5

ವಿಜಯರಾಘವೇಂದ್ರ ಬರೀ ನಟರಷ್ಟೇ ಅಲ್ಲ, ಅವರೊಬ್ಬ ಗಾಯಕ, ಒಳ್ಳೆಯ ಮಾತುಗಾರ ಕೂಡ. ಈಗಾಗಲೇ ಹಲವು ಚಿತ್ರಗಳಲ್ಲಿ ಹಾಡಿರುವ ಅವರು, ಎಫ್ ಎಂವೊಂದರಲ್ಲಿ ಆರ್‌ಜೆಯಾಗಿಯೂ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದು ಗೊತ್ತೇ ಇದೆ. ಅವರೀಗ ಸಂಪೂರ್ಣ ಹಾಡುವ ಮೂಲಕವೇ ಈ ಲಾಕ್‌ಡೌನ್‌ ಸಮಯದಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಹೌದು, ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ದಿನಕ್ಕೊಂದು ವಿಶೇಷ ಹಾಡುಗಳನ್ನು ಹಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಡಾ.ರಾಜಕುಮಾರ್‌ ಅವರು ಹಾಡಿರುವ ಹಲವು ಚಿತ್ರಗೀತೆಗಳು, ಭಾವಗೀತೆ, ದಾಸರ ಪದ, ಭಕ್ತಿಗೀತೆಗಳನ್ನು ಹಾಡುವ ಮೂಲಕ ಮುಖಪುಟದಲ್ಲಿ ಕೇಳುಗರಿಂದ ಭರಪೂರ ಮೆಚ್ಚುಗೆಯ ಪ್ರತಿಕ್ರಿಯೆಗೆ ಪಾತ್ರರಾಗಿದ್ದಾರೆ. ಅಂದಹಾಗೆ, ವಿಜಯರಾಘವೇಂದ್ರ ಅವರು, “ಬಹದ್ದೂರ್‌ ಗಂಡು’ ಚಿತ್ರದಲ್ಲಿ ರಾಜ್‌ಕುಮಾರ್‌ ಹಾಡಿರುವ “ಮುತ್ತಿನಂಥ ಮಾತೊಂದು ಗೊತ್ತೇನಮ್ಮ ‘ ಹಾಡುವುದರೊಂದಿಗೆ ಅಂದಿಗೂ ಇಂದಿಗೂ ಅರ್ಥಪೂರ್ಣ ಪದಗಳು ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲ, ರಾಜಕುಮಾರ್‌ ಹಾಡಿದ ದಾಸರ ಪದಸಿರಿ “ದಾಸ ದಾಸರ ಮನೆಯ ದಾಸಾನು ದಾಸ ನಾನು’, “ಆಡಿಸಿ ನೋಡು ಬೀಳಿಸಿ ನೋಡು ‘, “ನಮಸ್ತೇತು ಮಹಾ ಮಾಯೆ ‘, “ಶ್ರೀಕಂಠ ವಿಷಕಂಠ ‘, “ಓಂ ಬ್ರಹ್ಮಾನಂದ ಓಂಕಾರ ‘ ಹಾಗು “ನಿನ್ನ ಮನ ಮೆಚ್ಚಿಸಲು ನಿನ್ನ ಮನ ಮೆಚ್ಚಿಸಲು ಏನು ಮಾಡಲಿ ಹೇಳು ಪವನಸುತ ‘ ಹಾಡುಗಳನ್ನು ಹಾಡುವ ಮೂಲಕ ಖುಷಿಪಡಿಸಿದ್ದಾರೆ.

ಇದಷ್ಟೇ ಅಲ್ಲ, ರಾಜು ಅನಂತಸ್ವಾಮಿ ಅವರು ಹಾಡಿರುವ ಜಿ.ಎಸ್‌.ಶಿವರುದ್ರಪ್ಪ ರಚಿಸಿರುವ “ಎದೆತುಂಬಿ ಹಾಡಿದೆನು ಅಂದು ನಾನು ‘, ಡಾ.ವಿಷ್ಣುವರ್ಧನ್‌ ಅಭಿನಯದ “ಕರ್ಣ ‘ ಚಿತ್ರದ “ಆ ಕರ್ಣನಂತೆ ನೀ ದಾನಿಯಾದೆ ‘ ಹಾಡು ಹಾಡುವ ಮೂಲಕ ಈ ಹಾಡನ್ನು ತ್ಯಾಗಕ್ಕೆ ಹೆಸರಾದ ಡಾಕ್ಟರ್, ಪೊಲೀಸ್‌, ಸಮಾಜ ಸೇವಕರಿಗೆ, ಆಶಾ ಕಾರ್ಯಕರ್ತೆಯರಿಗೆ ಅರ್ಪಿಸಿದ್ದಾರೆ.

ಉಳಿದಂತೆ ಅವರು ಸುದೀಪ್‌ ಅಭಿನಯದ “ಮುಸ್ಸಂಜೆ ಮಾತು’ ಸಿನಿಮಾದ “ಏನಾಗಲಿ ಮುಂದೆ ಸಾಗು ನೀ ‘, “ಪಲ್ಲವಿ ಅನುಪಲ್ಲವಿ ‘ ಚಿತ್ರದ “ನಗುವ ನಯನ ಮಧುರ ಮೌನ ‘, “ಅಮೃತವರ್ಷಿಣಿ ‘ ಚಿತ್ರದ “ಭಲೇ ಭಲೇ ಚಂದದ.. ‘ ಹಾಡು ಸೇರಿದಂತೆ ಅನೇಕ ಗೀತೆಗಳನ್ನು ಹಾಡುವ ಮೂಲಕ ತಮ್ಮ ಫ್ಯಾನ್ಸ್‌ಗೆ ಖುಷಿಪಡಿಸುತ್ತಿದ್ದಾರೆ.

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.