ಅಕಾಲದಲ್ಲಿ ಕರ ಭಾರಕ್ಕೆ ಅಸಮಾಧಾನ
Team Udayavani, Apr 22, 2020, 6:52 PM IST
ಶಿರಸಿ: ಕೋವಿಡ್ ಕಷ್ಟದಲ್ಲಿದ್ದಾಗಲೇ ಸ್ಥಳೀಯ ನಗರಸಭೆ ಮನೆ ಕರ, ವಾಣಿಜ್ಯ ಕರಗಳನ್ನು ಏರಿಕೆ ಮಾಡಿದ ಬಗ್ಗೆ ನಗರದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಕಾಂಗ್ರೆಸ್, ಬಿಜೆಪಿ ಪ್ರಮುಖರು ಕರ ಏರಿಕೆ ಬಗ್ಗೆ ದೂರಿದ್ದು, ಕೋವಿಡ್ 19ರ ನಿರ್ಮೂಲನೆಯ ಬಳಿಕ ಅಸ್ತಿತ್ವಕ್ಕೆ ಬರಲಿರುವ ಆಡಳಿತ ಮಂಡಳಿಯ ತೀರ್ಮಾನಕ್ಕೇ ಬಿಡಬೇಕು. ಅಲ್ಲೀ ತನಕ ಕಳೆದ ವರ್ಷದ ಕರವನ್ನೇ ಆಕರಿಸಬೇಕು ಎಂದು ಹಕ್ಕೊತ್ತಾಯ ಮಾಡಿದ್ದಾರೆ.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ನಗರದ ಜನತೆ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಸಮಯದಲ್ಲಿ ನಗರಸಭೆ ಕರ ಏರಿಕೆ ಮಾಡಿ ಜನರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ. ಬಹುತೇಕ ಸಾರ್ವಜನಿಕರು ಯಾವುದೇ ಕೆಲಸ ಕಾರ್ಯಗಳಿಲ್ಲದೇ ಖಾಲಿ ಕೂತಿದ್ದಾರೆ. ಕೈಯಲ್ಲಿರುವ ಹಣ ಕೂಡ ಖರ್ಚಾಗಿದ್ದು, ಅವರಿವರನ್ನು ಬೇಡುವ ಪರಿಸ್ಥಿತಿ ಬಂದೊದಗಿದೆ. ಕರ ಏರಿಸುವ ಮೂಲಕ ಹಣ ಸಂಗ್ರಹಣೆಗೆ ಚಾಲನೆ ನೀಡುತ್ತಿರುವುದು ಜನವಿರೋಧಿ ಕಾರ್ಯವಾಗಿದೆ ಎಂದು ಕೈ ಮುಖಂಡರು ದೂರಿದ್ದಾರೆ.
ನಗರದ ಬಡ ಜನತೆ ತುತ್ತು ಅನ್ನಕ್ಕೆ ಪರದಾಡುತ್ತಿದ್ದು, ಈ ಸಮಯದಲ್ಲಿ ಈ ಏರಿಕೆ ಸರಿಯಲ್ಲ. ಕ್ಷೇತ್ರದ ಶಾಸಕ, ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್ ಕೂಡಲೇ ಮಧ್ಯ ಪ್ರವೇಶಿಸಿ ಕರ ಏರಿಕೆ ತಡೆಯುವಂತೆ ಸರಕಾರದ ಗಮನ ಸೆಳೆದು ಹೆಚ್ಚಳ ಮಾಡದಂತೆ ಸಲಹೆ ನೀಡಬೇಕು. ಮನವಿಗೆ ಸ್ಪಂದಿಸದೇ ಇದ್ದರೆ ಹೋರಾಟ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪ್ರಮುಖರಾದ ರಮೇಶ ದುಭಾಶಿ, ಸತೀಶ ನಾಯ್ಕ ಮಧುರವಳ್ಳಿ, ರಾಜು ಉಗ್ರಾಣಕರ್, ಖಾದರ್ ಆನವಟ್ಟಿ ಆಗ್ರಹಿಸಿದ್ದಾರೆ.
ಬಿಜೆಪಿ ನಗರದ ಘಟಕದ ಅಧ್ಯಕ್ಷ ರಾಜೇಶ ಶೆಟ್ಟಿ, ಹೆಚ್ಚಳ ಮಾಡಲಾದ ಕರವನ್ನು ವಾಪಸ್ ಪಡೆಯಬೇಕು. ಕೋವಿಡ್ 19ತೊಂದರೆಯಲ್ಲಿದ್ದಾಗ ಜನರಿಗೆ ವ್ಯಾಪಾರ ವಹಿವಾಟು, ಉದ್ಯೋಗ ಯಾವುದೂ ಇಲ್ಲ. ಕರ ತಗ್ಗಿಸಬೇಕು. ಅದು ಬಿಟ್ಟು ಹೆಚ್ಚಳ ಮಾಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದ್ದಾರೆ. ಕಾಗೇರಿ ಅವರ ಗಮನಕ್ಕೂ ತಂದಿದ್ದಾರೆ. ಹಳೆ ತೆರಿಗೆಯನ್ನೇ ಮುಂದುವರಿಸಿಕೊಂಡು ಹೋಗಲು ಅನುಕೂಲ ಮಾಡಿಕೊಡುತ್ತಿದ್ದಾರೆ. ಹಳೆ ತೆರಿಗೆ ಪದ್ಧತಿಯೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾಗಿ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಬಿಜೆಪಿ ಪ್ರಮುಖ, ನಗರಸಭಾ ಸದಸ್ಯ ಗಣಪತಿ ನಾಯ್ಕ ಕೂಡ ಕರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ನೂತನ ತೆರಿಗೆಯನ್ನು ಏಕಾಏಕಿ ವಿಧಿಸಿದ್ದಾರೆ. ಇದನ್ನು ವಾಪಸ್ ಪಡೆಯಬೇಕು. ನಗರದ ಕರದಾತರು ಕಳೆದ ವರ್ಷದ ಕರವನ್ನೇ ಸಲ್ಲಿಸಬೇಕು. ಮುಂದಿನ ನೂತನ ಆಡಳಿತ ಮಂಡಳಿ ತೆರಿಗೆ ತೀರ್ಮಾನಿಸಲಿದೆ. -ಪ್ರದೀಪ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !