ಕುಂಬಳಕಾಯಿ ಬೆಳೆದವರಿಗೆ ಸಿಹಿ ಉಣಿಸಿದ ರೈತ ಸೇತು


Team Udayavani, Apr 27, 2020, 11:35 AM IST

3

ಚಿತ್ರದುರ್ಗ: ಮಲ್ಲಪ್ಪನಹಳ್ಳಿ ರೈತರ ಜಮೀನಿನಲ್ಲಿ ಬೆಳೆದಿದ್ದ ಸಿಹಿ ಕುಂಬಳ ಖರೀದಿಸಿ ಲಾರಿಗೆ ತುಂಬಿಸಲಾಯಿತು.

ಚಿತ್ರದುರ್ಗ: ಕೋವಿಡ್ ತಡೆಗಾಗಿ ಲಾಕ್‌ಡೌನ್‌ ಘೋಷಿಸಿದ ನಂತರ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ನೆರವು ನೀಡುವ ಉದ್ದೇಶದಿಂದ “ಉದಯವಾಣಿ’  ರೂಪಿಸಿದ “ರೈತಸೇತು’ ಜಿಲ್ಲೆಯ ರೈತರ ಬದುಕಿನಲ್ಲಿ ಸಿಹಿ ತಂದಿದೆ. ಹೊಸದುರ್ಗ ತಾಲೂಕು ಮಲ್ಲಪ್ಪನಹಳ್ಳಿ ಗ್ರಾಮದ ಆನಂದ್‌ ಹಾಗೂ ಎಂ.ಕೆ. ಕಾಂತರಾಜು ಎಂಬುವವರು ಒಟ್ಟು ಐದು ಎಕರೆಯಲ್ಲಿ ಬೆಳೆದಿದ್ದ ಸಿಹಿ ಕುಂಬಳಕ್ಕೆ ಮಾರುಕಟ್ಟೆ ಒದಗಿಸಿಕೊಟ್ಟಿದೆ. ಸಿಹಿ ಕುಂಬಳದ ಬೀಜ ನಾಟಿ ಮಾಡಿದ
ದಿನ ದಿಂದಲೂ ಉತ್ತಮ ಲಾಭದ ಕನಸು ಕಾಣುತ್ತಿದ್ದ ರೈತರಿಗೆ ಕೋವಿಡ್ ಲಾಕ್‌ಡೌನ್‌ ಸಂಕಷ್ಟಕ್ಕೆ ಸಿಲುಕಿಸಿತು. ಇದರಿಂದ ಕಂಗೆಟ್ಟಿದ್ದ ಆನಂದ್‌ ಹಾಗೂ ಕಾಂತರಾಜು ಪತ್ರಿಕೆಯನ್ನು ಸಂಪರ್ಕಿಸಿ ತಮ್ಮ ಬೆಳೆ ವಿವರಗಳನ್ನು ನೀಡಿದ್ದರು.

ಪತ್ರಿಕೆಯಲ್ಲಿ ರೈತರ ಊರು, ಬೆಳೆದಿರುವ ಬೆಳೆಯ ಹೆಸರು, ಅದರ ಪ್ರಮಾಣ ಹಾಗೂ ರೈತ ಅದಕ್ಕೆ ನಿಗ ದಿ ಮಾಡಿರುವ ಬೆಲೆ ಅವರ ಮೊಬೈಲ್‌ ಸಂಖ್ಯೆಯನ್ನು ರೈತಸೇತು ಅಂಕಣದಲ್ಲಿ ಪ್ರಕಟಿಸಿತ್ತು. ಈ ವಿಷಯವನ್ನು ಗಮನಿಸಿದ ಬೆಂಗಳೂರು ಮೂಲದ ಶರತ್‌ ಎಂಬುವವರು ಪ್ರತಿ ವಾರ ಮೂರು ಟನ್‌ನಂತೆ ಇಬ್ಬರೂ ರೈತರಿಂದ ಸಿಹಿ ಕುಂಬಳ ಖರೀದಿ  ಮಾಡಿ ತಮ್ಮ ಹಂದಿ ಫಾರಂಗೆ ಬಳಕೆ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ಹೊಸದುರ್ಗ ತಾಲೂಕಿನ ಮಲ್ಲಪ್ಪನಹಳ್ಳಿ ರೈತರು ಪ್ರತಿ ವರ್ಷವೂ ಸಿಹಿಕುಂಬಳ ಬೆಳೆಯುತ್ತಾರೆ. ಎಕರೆಗೆ 25 ರಿಂದ 30 ಸಾವಿರ ಖರ್ಚು ಬರುತ್ತದೆ. ಇದರಿಂದ ಒಂದು ಲಕ್ಷದವರೆಗೆ ಲಾಭ ಸಿಗುತ್ತದೆ. ಪ್ರತಿ ಎಕರೆಗೆ 6 ರಿಂದ 7 ಟನ್‌ ಇಳುವರಿ ಬಂದರೆ ಪ್ರತಿ ಕೆಜಿಗೆ 15 ರೂ.ವರೆಗೆ ಬೆಲೆ ಇರುತ್ತದೆ. ಮಲ್ಲಪ್ಪನಹಳ್ಳಿ ರೈತ ಆನಂದ್‌ ಮೂರು ಎಕರೆಯಲ್ಲಿ ಬೆಳೆ ಬೆಳೆದಿದ್ದಾರೆ. ಕಾಂತರಾಜು ಎರಡು ಎಕರೆಯಲ್ಲಿ ಬೆಳೆದಿದ್ದಾರೆ. ಸದ್ಯ 6 ರೂ.ನಂತೆ ಪ್ರತಿ ಕೆಜಿ ಸಿಹಿ ಕುಂಬಳ ಖರೀದಿಯಾಗುತ್ತಿದೆ.

ನಮ್ಮ ಬೆಳೆ ಹೊಲದಲ್ಲೇ ಕೊಳೆಯುತ್ತದೆ ಎಂಬ ಆತಂಕದಲ್ಲಿದ್ದಾಗ “ಉದಯವಾಣಿ’ ಪತ್ರಿಕೆಯ ರೈತಸೇತು ಅಂಕಣ ನಮಗೆ ಹೊಸ ದಾರಿ ತೋರಿಸಿದೆ. ಲಾಭ
ಬಾರದಿದ್ದರೂ ಪರವಾಗಿಲ್ಲ, ನಷ್ಟವಾಗದಂತೆ ಕಾಪಾಡಿದೆ. ರೈತರು ಮಾರಾಟಗಾರರ ನಡುವಿನ ಸೇತುವೆಯಾದ ಪತ್ರಿಕೆಗೆ ಆಭಾರಿ.
ಎಂ.ಕೆ. ಕಾಂತರಾಜು,
ಮಲ್ಲಪ್ಪನಹಳ್ಳಿ ರೈತ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.