ಕುಂಬಳಕಾಯಿ ಬೆಳೆದವರಿಗೆ ಸಿಹಿ ಉಣಿಸಿದ ರೈತ ಸೇತು
Team Udayavani, Apr 27, 2020, 11:35 AM IST
ಚಿತ್ರದುರ್ಗ: ಮಲ್ಲಪ್ಪನಹಳ್ಳಿ ರೈತರ ಜಮೀನಿನಲ್ಲಿ ಬೆಳೆದಿದ್ದ ಸಿಹಿ ಕುಂಬಳ ಖರೀದಿಸಿ ಲಾರಿಗೆ ತುಂಬಿಸಲಾಯಿತು.
ಚಿತ್ರದುರ್ಗ: ಕೋವಿಡ್ ತಡೆಗಾಗಿ ಲಾಕ್ಡೌನ್ ಘೋಷಿಸಿದ ನಂತರ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ನೆರವು ನೀಡುವ ಉದ್ದೇಶದಿಂದ “ಉದಯವಾಣಿ’ ರೂಪಿಸಿದ “ರೈತಸೇತು’ ಜಿಲ್ಲೆಯ ರೈತರ ಬದುಕಿನಲ್ಲಿ ಸಿಹಿ ತಂದಿದೆ. ಹೊಸದುರ್ಗ ತಾಲೂಕು ಮಲ್ಲಪ್ಪನಹಳ್ಳಿ ಗ್ರಾಮದ ಆನಂದ್ ಹಾಗೂ ಎಂ.ಕೆ. ಕಾಂತರಾಜು ಎಂಬುವವರು ಒಟ್ಟು ಐದು ಎಕರೆಯಲ್ಲಿ ಬೆಳೆದಿದ್ದ ಸಿಹಿ ಕುಂಬಳಕ್ಕೆ ಮಾರುಕಟ್ಟೆ ಒದಗಿಸಿಕೊಟ್ಟಿದೆ. ಸಿಹಿ ಕುಂಬಳದ ಬೀಜ ನಾಟಿ ಮಾಡಿದ
ದಿನ ದಿಂದಲೂ ಉತ್ತಮ ಲಾಭದ ಕನಸು ಕಾಣುತ್ತಿದ್ದ ರೈತರಿಗೆ ಕೋವಿಡ್ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿಸಿತು. ಇದರಿಂದ ಕಂಗೆಟ್ಟಿದ್ದ ಆನಂದ್ ಹಾಗೂ ಕಾಂತರಾಜು ಪತ್ರಿಕೆಯನ್ನು ಸಂಪರ್ಕಿಸಿ ತಮ್ಮ ಬೆಳೆ ವಿವರಗಳನ್ನು ನೀಡಿದ್ದರು.
ಪತ್ರಿಕೆಯಲ್ಲಿ ರೈತರ ಊರು, ಬೆಳೆದಿರುವ ಬೆಳೆಯ ಹೆಸರು, ಅದರ ಪ್ರಮಾಣ ಹಾಗೂ ರೈತ ಅದಕ್ಕೆ ನಿಗ ದಿ ಮಾಡಿರುವ ಬೆಲೆ ಅವರ ಮೊಬೈಲ್ ಸಂಖ್ಯೆಯನ್ನು ರೈತಸೇತು ಅಂಕಣದಲ್ಲಿ ಪ್ರಕಟಿಸಿತ್ತು. ಈ ವಿಷಯವನ್ನು ಗಮನಿಸಿದ ಬೆಂಗಳೂರು ಮೂಲದ ಶರತ್ ಎಂಬುವವರು ಪ್ರತಿ ವಾರ ಮೂರು ಟನ್ನಂತೆ ಇಬ್ಬರೂ ರೈತರಿಂದ ಸಿಹಿ ಕುಂಬಳ ಖರೀದಿ ಮಾಡಿ ತಮ್ಮ ಹಂದಿ ಫಾರಂಗೆ ಬಳಕೆ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ಹೊಸದುರ್ಗ ತಾಲೂಕಿನ ಮಲ್ಲಪ್ಪನಹಳ್ಳಿ ರೈತರು ಪ್ರತಿ ವರ್ಷವೂ ಸಿಹಿಕುಂಬಳ ಬೆಳೆಯುತ್ತಾರೆ. ಎಕರೆಗೆ 25 ರಿಂದ 30 ಸಾವಿರ ಖರ್ಚು ಬರುತ್ತದೆ. ಇದರಿಂದ ಒಂದು ಲಕ್ಷದವರೆಗೆ ಲಾಭ ಸಿಗುತ್ತದೆ. ಪ್ರತಿ ಎಕರೆಗೆ 6 ರಿಂದ 7 ಟನ್ ಇಳುವರಿ ಬಂದರೆ ಪ್ರತಿ ಕೆಜಿಗೆ 15 ರೂ.ವರೆಗೆ ಬೆಲೆ ಇರುತ್ತದೆ. ಮಲ್ಲಪ್ಪನಹಳ್ಳಿ ರೈತ ಆನಂದ್ ಮೂರು ಎಕರೆಯಲ್ಲಿ ಬೆಳೆ ಬೆಳೆದಿದ್ದಾರೆ. ಕಾಂತರಾಜು ಎರಡು ಎಕರೆಯಲ್ಲಿ ಬೆಳೆದಿದ್ದಾರೆ. ಸದ್ಯ 6 ರೂ.ನಂತೆ ಪ್ರತಿ ಕೆಜಿ ಸಿಹಿ ಕುಂಬಳ ಖರೀದಿಯಾಗುತ್ತಿದೆ.
ನಮ್ಮ ಬೆಳೆ ಹೊಲದಲ್ಲೇ ಕೊಳೆಯುತ್ತದೆ ಎಂಬ ಆತಂಕದಲ್ಲಿದ್ದಾಗ “ಉದಯವಾಣಿ’ ಪತ್ರಿಕೆಯ ರೈತಸೇತು ಅಂಕಣ ನಮಗೆ ಹೊಸ ದಾರಿ ತೋರಿಸಿದೆ. ಲಾಭ
ಬಾರದಿದ್ದರೂ ಪರವಾಗಿಲ್ಲ, ನಷ್ಟವಾಗದಂತೆ ಕಾಪಾಡಿದೆ. ರೈತರು ಮಾರಾಟಗಾರರ ನಡುವಿನ ಸೇತುವೆಯಾದ ಪತ್ರಿಕೆಗೆ ಆಭಾರಿ.
ಎಂ.ಕೆ. ಕಾಂತರಾಜು,
ಮಲ್ಲಪ್ಪನಹಳ್ಳಿ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ
Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ