ಮಹಾರಾಷ್ಟ್ರದಲ್ಲಿ ಸಿಲುಕಿದ ಕಾರ್ಮಿಕರ ಪರದಾಟ
ಇಂಗಳಗೇರಿ-ಭಂಟನೂರಿನ 11 ಕುಟುಂಬಗಳುತವರಿಗೆ ಕರೆಸಿಕೊಳ್ಳಲು ಕಾರ್ಮಿಕರ ಮನವಿ
Team Udayavani, Apr 30, 2020, 1:44 PM IST
ಮುದ್ದೇಬಿಹಾಳ: ಮಹಾರಾಷ್ಟ್ರದ ಉಮರಜದಲ್ಲಿ ಲಾಕ್ ಆಗಿ ಪರದಾಡುತ್ತಿರುವ ಮುದ್ದೇಬಿಹಾಳ ತಾಲೂಕಿನ ಕಾರ್ಮಿಕರು
ಮುದ್ದೇಬಿಹಾಳ: ಕೋವಿಡ್ ಲಾಕ್ಡೌನ್ ನಿಂದಾಗಿ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಕರೋಡ ತಾಲೂಕಿನ ಉಮರಜ್ ಗ್ರಾಮದಲ್ಲಿ ಮುದ್ದೇಬಿಹಾಳ ತಾಲೂಕಿನ 60 ಜನ ಕೂಲಿ ಕಾರ್ಮಿಕರು ಸಿಕ್ಕಿಕೊಂಡಿದ್ದಾರೆ. ಇವರು ಕೆಲಸ ಇಲ್ಲದೆ, ಇದ್ದ ಹಣವೂ ಖಾಲಿ ಆಗಿದ್ದರಿಂದ ತುತ್ತು ಅನ್ನಕ್ಕೂ ಪರದಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಹತ್ತಿರ ಇರುವ ಉಮರಜ್ಗೆ 4-5 ತಿಂಗಳ ಹಿಂದೆ ಮುದ್ದೇಬಿಹಾಳ ತಾಲೂಕಿನ ಇಂಗಳಗೇರಿ, ತಾಳಿಕೋಟೆ ತಾಲೂಕಿನ ಭಂಟನೂರ ಗ್ರಾಮದ 11 ಕುಟುಂಬಗಳ ಮಕ್ಕಳು, ಮಹಿಳೆಯರು ಸೇರಿ ಸುಮಾರು 60 ಜನರು ಕೂಲಿ ಅರಸಿ ಹೋಗಿದ್ದರು. ಅಲ್ಲಿನ ಇಟ್ಟಂಗಿ ಭಟ್ಟಿಯಲ್ಲಿ ಇವರಿಗೆ ಕೆಲಸ ಸಿಕ್ಕಿತ್ತು. ಅಲ್ಲೇ ಗುಡಿಸಲು ಹಾಕಿಕೊಂಡು ಕುಟುಂಬ ಸಮೇತ ವಾಸವಾಗಿದ್ದರು. ಲಾಕ್ಡೌನ್ನಿಂದಾಗಿ ಇಟ್ಟಂಗಿ ಭಟ್ಟಿ ಬಂದ್ ಆಗಿದೆ. ಕೆಲ ದಿನ ಹೇಗೋ ಕಾಲ ಕಳೆದರು. ಬಳಿಕ ಲಾಕ್ ಡೌನ್ ವಿಸ್ತರಣೆ ಆಗಿದ್ದು, ಇವರ ಪಾಲಿಗೆ ಶಾಪವಾಗಿ ಪರಿಣಮಿಸಿತು. ಗ್ರಾಮದ ಹೊಲವೊಂದರಲ್ಲಿ ವಾಸವಾಗಿದ್ದಾರೆ. ಅಲ್ಲಿನ ತಾಲೂಕಾಡಳಿತ, ಜಿಲ್ಲಾಡಳಿತ ತಮ್ಮ ಸಮಸ್ಯೆ, ಕೂಗು ಪರಿಗಣಿಸುತ್ತಲೇ ಇಲ್ಲ ಎಂದು ಹಲವರು ದೂರವಾಣಿ ಮೂಲಕ ಇಲ್ಲಿನ ತಮ್ಮ ಬಂಧುಗಳ ಬಳಿ ಸಂಕಟ ಹಂಚಿಕೊಂಡಿದ್ದಾರೆ.
ಇಂಗಳಗೇರಿಯ ಬಸಪ್ಪ ನಡುವಿನಮನಿ, ಹನುಮಂತ ಮೇಲಿನಮನಿ, ಶಿವಪ್ಪ ನಡುವಿನಮನಿ, ಸದಾಶಿವಪ್ಪ ಮಾದರ, ಶರಣಪ್ಪ ರತ್ನಾಗಿರಿ, ಮಲಿಕಸಾಬ್ ಜಮಾದಾರ, ಭಾಷಾಸಾಬ್
ಜಮಾದಾರ ಕುಟುಂಬಗಳ 38 ಜನ, ಭಂಟನೂರಿನ ಸಿದ್ದನಗೌಡ ಸಾಸನೂರ, ಬಾಲಪ್ಪ ರತ್ನಾಗಿರಿ, ಜಟ್ಟೆಪ್ಪ ತಳವಾರ, ಬಸವರಾಜ ಪಾಲ್ಕೇಕರ್ ಕುಟುಂಬಗಳ 18 ಜನ ಸಹಿತ ಮಹಿಳೆಯರು, ಮಕ್ಕಳು ಸೇರಿ ಒಟ್ಟು 56 ಜನರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್