ಹರಪನಹಳ್ಳಿಗೆ ವಾಪಾಸಾದ 74 ಕಾರ್ಮಿಕರು
Team Udayavani, Apr 30, 2020, 3:26 PM IST
ಆಲ್ದೂರು: 74 ಕಾರ್ಮಿಕರನ್ನು ಬುಧವಾರ ಸರ್ಕಾರಿ ಬಸ್ನಲ್ಲಿ ಹರಪನಹಳ್ಳಿಗೆ ಕಳುಹಿಸಿಕೊಡಲಾಯಿತು.
ಆಲ್ದೂರು: ಬನ್ನೂರು ಗ್ರಾಮದ ಸಿ.ಎ. ಕೃಷ್ಣೇಗೌಡ ಅವರ ಕಾಫಿ ತೋಟಕ್ಕೆ ಹರಪನಹಳ್ಳಿಯಿಂದ ಕೆಲಸ ಅರಸಿ ಬಂದಿದ್ದ 23 ಜನ ಹಾಗೂ ಗುಲ್ಲನ್ಪೇಟೆಯ ಮಹಮ್ಮದ್ ಜೆ. ಅವರ ಕಾಫಿ ತೋಟಕ್ಕೆ ಬಂದಿದ್ದ 18 ಜನ ಹಾಗೂ ಕಬ್ಬಿಣ ಸೇತುವೆ ಬಳಿ ತೋಟವೊಂದರಲ್ಲಿ ಕೆಲಸಕ್ಕೆ ಬಂದಿದ್ದ 33 ಜನ ಒಟ್ಟು 74 ಜನ ಕಾರ್ಮಿಕರನ್ನು ಬುಧವಾರ ಮೂರು ಸರ್ಕಾರಿ ಬಸ್ನಲ್ಲಿ ಗ್ರಾಮಕ್ಕೆ ವಾಪಸು ಕಳುಹಿಸಿಕೊಡಲಾಯಿತು.
ಕಾಫಿ ಕೊಯ್ಲು ಆರಂಭವಾದ್ದರಿಂದ ಈ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿದು ವಾಪಾಸಾಗಬೇಕಾದ ಸಂದರ್ಭದಲ್ಲಿ ಭಾರತ ಲಾಕ್ ಡೌನ್ ಆದ ಕಾರಣ ತಮ್ಮ ಊರಿಗೆ ಹಿಂತಿರುಗಲು ಸಾಧ್ಯವಾಗದೆ ತೋಟದಲ್ಲೇ ಬಂಧಿಯಾಗಿದ್ದರು. ಬುಧವಾರ ಆಲ್ದೂರಿನ ಸರ್ಕಾರಿ ಆಸ್ಪತ್ರೆ, ವಸ್ತಾರೆ ಹಾಗೂ ಮಾಚಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಮಿಕರ ಪ್ರಾಥಮಿಕ ಆರೋಗ್ಯ ಪರೀಕ್ಷೆ ನಡೆಸಿ ನಂತರ ಬಸ್ ಮೂಲಕ ಅವರನ್ನು ಹರಪ್ಪನಹಳ್ಳಿಗೆ ಕಳುಹಿಸಲಾಯಿತು. ಉಪ ತಹಶೀಲ್ದಾರ್ ಸುಮಿತ್ರ, ರಾಜಸ್ವ ನಿರೀಕ್ಷಕ ವೆಂಕಟೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಸಾರಿಕಾ, ಸಂದೀಪ್, ಸತ್ತಿಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್, ಪೊಲೀಸ್ ಸಿಬ್ಬಂದಿ ಶಿವಶಂಕರ್ ಇದ್ದರು.
ಶೃಂಗೇರಿ: ಕೂಲಿಗಾಗಿ ಹಾವೇರಿಯಿಂದ ಆಗಮಿಸಿ ಲಾಕ್ಡೌನ್ ಹಿನ್ನಲೆಯಲ್ಲಿ ಊರಿಗೆ ತೆರಳಲಾಗದೆ ಇಲ್ಲಿಯೇ ವಾಸ್ತವ್ಯವಿದ್ದ 24 ಕಾರ್ಮಿಕರನ್ನು ರಾಜ್ಯ ಉಪ ತಹಸೀಲ್ದಾರ್ ಶಿವರಾಂ ಮಾತನಾಡಿ, ಕಳೆದ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ಕೆಲಸಕ್ಕಾಗಿ ಹಾವೇರಿಯಿಂದ ಬಂದಿದ್ದ ಕಾರ್ಮಿಕರು ಲಾಕ್ಡೌನ್ ಆದ ನಂತರ ಕೆಲಸವೂ ಇಲ್ಲದೇ ಪರದಾಡುವಂತಾಗಿತ್ತು. ತೊಂದರೆಯಲ್ಲಿದ್ದ ಕಾರ್ಮಿಕರಿಗೆ ಶ್ರೀಮಠದಿಂದ ಮೂರು ಹೊತ್ತಿನ ಊಟ, ಉಪಾಹಾರ ವ್ಯವಸ್ಥೆ ಮಾಡಿತ್ತು. ಜಿಲ್ಲಾಡಳಿತದ ಸೂಚನೆ ಮೇರೆಗೆ ಇದೀಗ ಅವರ ಊರಿಗೆ ಕಳುಹಿಸಿಕೊಡಲಾಗುತ್ತಿದೆ. ರಾಣಿಬೆನ್ನೂರು, ಚಿತ್ರದುರ್ಗ ಮುಂತಾದೆಡೆಯಿಂದ ಬಂದಿದ್ದ ಇನ್ನಷ್ಟು ಕಾರ್ಮಿಕರಿಗೂ ಬಸ್ ವ್ಯವಸ್ಥೆಗೊಳಿಸಲಾಗಿದೆ ಎಂದರು. ವೃತ್ತ ನಿರೀಕ್ಷಕ ಸಿದ್ದರಾಮಯ್ಯ, ವಿದ್ಯಾರಣ್ಯಪುರ ಗ್ರಾಪಂ ಸಿಬ್ಬಂದಿ ರವಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗುಂಡೇಟಿನಿಂದ ಯುವಕ ಸಾವು: ಹೆಚ್ಚಿದ ಅನುಮಾನ
Chikkamagaluru: ಸರ್ಕಾರಿ ಜಾಗಕ್ಕೆ ಎರಡು ಸಮುದಾಯಗಳ ನಡುವೆ ಮಾರಾಮಾರಿ
Kaduru; ನಿಂತಿದ್ದ ಲಾರಿಗೆ ಟಿಟಿ ಢಿಕ್ಕಿ: ಓರ್ವ ಸಾವು, ಹಲವರಿಗೆ ಗಾಯ
Chikkamagaluru; ಮಲೆನಾಡಿಗರಲ್ಲಿ ಮಂದಹಾಸ ಮೂಡಿಸಿದ ಮಳೆರಾಯ
ಶಿವಮೊಗ್ಗದಿಂದ ಮೈಸೂರಿಗೆ ಬರುತ್ತಿದ್ದ ಐರಾವತ ಬಸ್ ಬೆಂಕಿಗಾಹುತಿ… ತಪ್ಪಿದ ಭಾರಿ ದುರಂತ
MUST WATCH
ಹೊಸ ಸೇರ್ಪಡೆ
Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್
Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್
Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ
Sandalwood: ದರ್ಶನ್ ʼಡೆವಿಲ್ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್ ಪೋಸ್ಟರ್ ಔಟ್
Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ