ಕಾರ್ಕಳ : ಗಾಳಿ ಮಳೆ ವಿವಿಧೆಡೆ ಹಾನಿ
Team Udayavani, May 3, 2020, 7:50 PM IST
ಕಾರ್ಕಳ: ಕಾರ್ಕಳ ನಗರದಲ್ಲಿ ರವಿವಾರ ಸಂಜೆ 5 ಗಂಟೆ ಸುಮಾರಿಗೆ ಬೀಸಿದ ಗಾಳಿ ಮಳೆಗೆ ನಗರದ ವಿವಿಧೆಡೆ ಹಾನಿ ಸಂಭವಿಸಿದೆ.
ಕುಂಟಲ್ಪಾಡಿ ಅತ್ರಿಯಾ ಅಪಾರ್ಟ್ಮೆಂಟ್ ಮೇಲ್ಪಾವಣಿಗೆ ಅಳವಡಿಸಿದ ಶೀಟ್ ಸುಮಾರು 200 ಮೀಟರ್ ಸುತ್ತುಮುತ್ತು ಹಾರಿ ಹೋಗಿದ್ದು, ಇದರಿಂದ 5 ಮನೆಗಳು ಹಾನಿಗೀಡಾಗಿವೆ. ಗಾಳಿಯ ಅಬ್ಬರಕ್ಕೆ ಇದೇ ಪರಿಸರದ 7 ವಿದ್ಯುತ್ ಕಂಬಗಳು ಹಾನಿಗೀಡಾಗಿದೆ. ಎಪಿಎಂಸಿ ಬಳಿ ಬೃಹತ್ ಮರವೊಂದು ಧರೆಗುರುಳಿದೆ. ಪರನೀರು, ಬಾಲಾಜಿ ಶಿಬಿರ ಬಳಿ ಮನೆಗಳು ಹಾನಿಗೀಡಾಗಿದೆ.
ಗ್ರಾಮೀಣ ಪ್ರದೇಶದ ಗುರುಬೆಟ್ಟು, ಚಿಕ್ಕಬೆಟ್ಟು, ಮುರತ್ತಂಗಡಿ ಭಾಗಗಳಲ್ಲೂ ಭಾರಿ ಗಾಳಿ ಬೀಸಿದ್ದು ಅಪಾರ ಪ್ರಮಾಣದ ನಷ್ಟವುಂಟಾಗಿದೆ. ನಗರದಲ್ಲಿ 5 :15ರಿಂದ 6 ಗಂಟೆವರೆಗೆ ಸಿಡಿಲು, ಮಿಂಚಿನ ಆರ್ಭಟದೊಂದಿಗೆ ಧಾರಾಕಾರ ಮಳೆಯಾಗಿತ್ತು. ರಾತ್ರಿ ಮತ್ತೆ 7:30ರಿಂದ ಮಳೆ ಪ್ರಾರಂಭವಾಗಿ ಸುಮಾರು ಅರ್ಧ ಗಂಟೆ ಕಾಲ ಮಳೆ ಸುರಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ