ಸುರತ್ಕಲ್: ನಿಯಮ ಪಾಲಿಸದವರಿಗೆ ದಂಡ
Team Udayavani, May 5, 2020, 7:18 AM IST
ಸುರತ್ಕಲ್: ಸೋಮವಾರದಿಂದ ಸುರತ್ಕಲ್ನಲ್ಲಿ ಜಿಲ್ಲಾಡಳಿತದ ಆದೇಶದಂತೆ ನಿಗದಿತ ಅವಕಾಶವಿರುವ ಅಂಗಡಿ ಮುಗ್ಗಟ್ಟುಗಳು ಆರಂಭವಾಗಿದ್ದು, ಭಾರೀ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಆದೇಶಿಸಲಾಗಿದೆ. ಪಾನ್ ಗುಟ್ಕಾ ಮಾರಾಟದ ವಿರುದ್ಧ ದಂಡ ವಸೂಲಿ ಮಾಡಲಾಗಿದೆ.
ಸುರತ್ಕಲ್ ಅಂಗಡಿ ಒಂದರ ಬಳಿ ಜನ ಗುಂಪು ಸೇರಿದ್ದಲ್ಲದೆ ಮಾಸ್ಕ್ ಹಾಕಿರದ ಕಾರಣಕ್ಕೆ ಮಂಗಳೂರು ಮಹಾನಗರ ಪಾಲಿಕೆ ಅ ಕಾರಿಗಳು ಅಂಗಡಿ ಮಾಲಕನಿಗೆ ದಂಡ ವಿಧಿಸಿದ್ದಾರೆ. ಪಾನ್ ಮಾರಾಟ ಮಾಡುತ್ತಿದ್ದ ಅಂಗಡಿಯನ್ನು ಮುಚ್ಚಲಾಯಿತು. ಕಾರ್ಯಾಚರಣೆಯಲ್ಲಿ ಆರೋಗ್ಯ ಅ ಧಿಕಾರಿ ಸುಶಾಂತ್, ಪ್ರವೀಣ್, ಪರಿಸರ ಅಧಿ ಕಾರಿ ದಯಾನಂದ ಪೂಜಾರಿ ಪಾಲ್ಗೊಂಡಿದ್ದರು.