ಮುಳಗುಂದ: ಅನಿಲ ಭಿಕ್ಷಾ ಅಭಿಯಾನಕ್ಕೆ ಸ್ವಾಗತ
Team Udayavani, May 6, 2020, 4:47 PM IST
ಮುಳಗುಂದ: ಹಲವಾರು ಹಳ್ಳಿಗಳಲ್ಲಿ ಮನುಕುಲ ಕಲ್ಯಾಣಕ್ಕಾಗಿ ಜೋಳಿಗೆ ಹಿಡಿದ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಚಿಂಚಲಿ ಗ್ರಾಮಕ್ಕೆ ಆಗಮಿಸಿದಾಗ ಅನಿಲ ಅಭಿಮಾನಿ ಬಳಗದ ಶರಣಪ್ಪ ಕಮ್ಮಾರ ಗ್ರಾಮದ ಹೊರ ವಲಯದಲ್ಲಿ ದೀಡ್ನಮಸ್ಕಾರ ಹಾಕುವುದರೊಂದಿಗೆ ಅನಿಲ ಭಿಕ್ಷಾ ಅಭಿಯಾನವನ್ನು ಸ್ವಾಗತಿಸಿಕೊಂಡರು.
ಸದಾನಂದ ಕಮ್ಮಾರ ದಂಪತಿ ಮನೆಗೆ ಭೇಟಿ ನೀಡಿದ ಅನಿಲ ಮೆಣಸಿನಕಾಯಿ ಅವರಿಗೆ ಆರತಿ ಬೆಳಗಿ ಸನ್ಮಾನಿಸಿ ಅನಿಲ ಅಕ್ಷಯ ಜೋಳಿಗೆಗೆ ದವಸಧಾನ್ಯಗಳನ್ನು ನೀಡಿದರು. ನಂತರ ಚನ್ನಯ್ಯ ನಂದಿಕೋಲಮಠ, ಗ್ರಾಪಂ ಸದಸ್ಯ ಮುತ್ತಪ್ಪ ಸಂದಕದ ಅವರ ಮನೆಗೆ ತೆರಳಿದಾಗ ಅಲ್ಲಿಯೂ ಆಧರಾದಿತ್ಯದಿಂದ ಬರಮಾಡಿಕೊಂಡು ದವಸಧಾನ್ಯಗಳನ್ನು ನೀಡಿದರು. ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಬಡವರಿಗಾಗಿ ಭಿಕ್ಷಾ ಅಭಿಯಾನದ ಮೂಲಕ ರೈತರು, ದಾನಿಗಳಿಂದ ಸಂಗ್ರಹಿಸಿದ ದವಸಧಾನ್ಯಗಳನ್ನು ಈಗಾಗಲೇ 15 ಸಾವಿರಕ್ಕೂ ಅ ಧಿಕ ದಿನಸಿ ಕಿಟ್ಗಳನ್ನು ಮಾಡಿ ಎಲ್ಲ ಬಡವರಿಗೆ ವಿತರಿಸಲಾಗಿದೆ ಎಂದರು.
ಮಂಜುನಾಥ ಹೂಗಾರ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಾಂತಿಲಾಲ ಬನಸಾಲಿ ಮಾತನಾಡಿದರು. ಧ್ಯಾಮಣ್ಣ ನೀಲಗುಂದ, ಮಹೇಶ ದಾಸರ, ಪರಮೇಶಿ ನಾಯಕ, ಬಸವಣ್ಣೆಯ್ಯ ಹಿರೇಮಠ, ಸದಾನಂದ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ
ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
MUST WATCH
ಹೊಸ ಸೇರ್ಪಡೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?