ಗೋಂಧಳಿ ಸಮಾಜಕ್ಕೂ ವಿಶೇಷ ಪ್ಯಾಕೇಜ್ ನೀಡಲಿ
Team Udayavani, May 9, 2020, 7:54 AM IST
ಬಳ್ಳಾರಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಅಲೆಮಾರಿ ಗೋಂಧಳಿ ಸಮಾಜಕ್ಕೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿ ಸಂಘದ ಮುಖಂಡರು ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಕಷ್ಟಕ್ಕೊಳಗಾದವರಿಗೆ 1610 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಿದ್ದು ಅಭಿನಂದನೀಯ. ಅಲೆಮಾರಿ ಸಮುದಾಯಕ್ಕೆ ಸೇರಿದ ಲಕ್ಷಾಂತರ ಕುಟುಂಬಗಳೂ ಜೀವನ ನಿರ್ವಹಣೆ ಮಾಡಲಾಗದೆ ತೊಂದರೆಗೊಳಗಾಗಿವೆ. ಗೋಂಧಳಿ, ಬುಡಬುಡಿಕೆ ಸಮುದಾಯದ ಅಲೆಮಾರಿ ಜನರು ಹೊಟ್ಟೆಗೆ ಹಿಡಿ ಅನ್ನ ಇಲ್ಲದೇ ದಯನೀಯ ಸ್ಥಿತಿ ತಲುಪಿದ್ದಾರೆ. ಗೊಂದಲ ಹಾಡುತ್ತ, ಬುಡಬುಡಿಕೆ ನುಡಿಸುತ್ತ ಭಿಕ್ಷಾಟನೆ ಮಾಡುವವರು ತೊಂದರೆಗೀಡಾಗಿದ್ದಾರೆ. ಕೌದಿ ಹೊಲಿಯುವವರು, ಪಾತ್ರೆ ವ್ಯಾಪಾರ, ಕಬ್ಬಿಣ ಗುಜರಿ, ಹಳೇ ತಗಡು, ಹಳೇ ಸಾಮಾನು ಮೋಡಕಾ, ತಳ್ಳು ಗಾಡಿ, ಬೈಕ್ ಮೂಲಕ ಹಳ್ಳಿ ಹಳ್ಳಿಗೆ ತೆರಳಿ ವ್ಯಾಪಾರ ಮಾಡುವ ಜನರ ಬದುಕು ದುಸ್ತರವಾಗಿದೆ.
ಹಳ್ಳಿಗಳಲ್ಲಿ ವ್ಯಾಪಾರ ಮಾಡಲು ಗ್ರಾಮಸ್ಥರು ಅವಕಾಶ ಮಾಡಿಕೊಡುತ್ತಿಲ್ಲ. ಜ್ಯೋತಿಷ್ಯ, ಗಿಣಿ ಶಾಸ್ತ್ರ ಹೇಳುವವರದ್ದೂ ಇದೇ ಸಮಸ್ಯೆ ಆಗಿದೆ. ದೆ„ನಂದಿನ ಜೀವನ ನಡೆಸಲು ಕಷ್ಟಕರವಾಗಿದೆ. ಹೀಗಾಗಿ ಮುಖ್ಯಮಂತ್ರಿಗಳು ಮುಂದಿನ ಅಧಿವೇಶನಕ್ಕೂ ಮೊದಲು ಅಲೆಮಾರಿ ಜನಾಂಗದ ಗೋಂಧಳಿ ಹಾಗೂ ಬುಡಬುಡಿಕೆ ಸಮುದಾಯದ ಜ್ಯೋತಿಷ್ಯ, ಗಿಣಿ ಶಾಸ್ತ್ರ, ಗುಜರಿ, ಭಾಂಡೆ, ಗುಜರಿ ವ್ಯಾಪಾರ ಮಾಡುವ ಜನರಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಸವಿತಾ ಸಮಾಜ ಮತ್ತು ಮಡಿವಾಳ ಸಮಾಜದವರಿಗೆ ನೀಡಿದಂತೆ ಈ ಸಮುದಾಯದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ತಲಾ 10 ಸಾವಿರ ರೂ.ಜಮೆ ಮಾಡುವ ಮೂಲಕ ಆರ್ಥಿಕವಾಗಿ ಉತ್ತೇಜನ ನೀಡಬೇಕೆಂದು ಒತ್ತಾಯಿಸಿದ್ದಾರೆ.
ವಾಕೋಡೆ ರಾಘವೇಂದ್ರ, ವಿನೋದ್ ಸಿಂಧೆ, ಪ್ರವೀಣ್ ವಾಕೋಡೆ, ಚಿರಂಜೀವಿ, ಚಂದ್ರಶೇಖರ್ ಸಿಂಧೆ, ಬಿ.ಧನರಾಜ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ