ಶಸ್ತ್ರಾಸ್ತ್ರ ಸ್ವಾವಲಂಬನೆಗೆ ಸಿದ್ಧರಾಗಿ; ವಿದೇಶಿ ಆಯುಧಗಳ ಮೇಲಿನ ಅತಿಯಾದ ಅವಲಂಬನೆ ಸರಿಯಲ್ಲ
Team Udayavani, May 11, 2020, 5:48 AM IST
ಹೊಸದಿಲ್ಲಿ: ವಿದೇಶಗಳಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ತರಿಸಿಕೊಳ್ಳಲು ನಾವೇನು ಪ್ರಪಂಚದಾದ್ಯಂತ ದಂಡ ಯಾತ್ರೆ ಕೈಗೊಳ್ಳುತ್ತಿಲ್ಲ, ಯಾರ ಮೇಲೂ ಯುದ್ಧ ಮಾಡುತ್ತಿಲ್ಲ.
ಹೀಗಾಗಿ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ‘ಮೇಕ್ ಇನ್ ಇಂಡಿಯ’ ಕಾರ್ಯಕ್ರಮವನ್ನು ಮುನ್ನೆಲೆಗೆ ತರುವ ಅಗತ್ಯವಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.
‘ದ ಟೈಮ್ಸ್ ಆಫ್ ಇಂಡಿಯಾ’ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಶಸ್ತ್ರ ಪಡೆಗಳು ವಿದೇಶಿ ಶಸ್ತ್ರಾಸ್ತ್ರ ಗಳ ಮೇಲಿನ ಅತಿಯಾದ ಅವಲಂಬ ನೆಯಿಂದ ಹೊರಬಂದು, ದೇಶಿ ನಿರ್ಮಿತ ಆಯುಧಗಳನ್ನು ಬಳಸುವ ಮೂಲಕ ‘ಮೇಕ್ ಇನ್ ಇಂಡಿಯಾ’ ಕೇವಲ ಘೋಷಣೆಯಲ್ಲ ಎಂಬುದನ್ನು ಸಾಬೀತು ಪಡಿಸಬೇಕು.
ಕೋವಿಡ್ ವೈರಸ್ ಎಲ್ಲರನ್ನೂ ಬಾಧಿಸುತ್ತಿರುವ ಈ ಸಂದರ್ಭದಲ್ಲಿ ವಾಸ್ತವ ಅರಿತು, ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ಅಗತ್ಯ ಮೀರಿ ಆಯುಧ ಆಮದು ಮಾಡಿಕೊಳ್ಳುವ ಬದಲು ದೇಶದಲ್ಲೇ ಕಡಿಮೆ ವೆಚ್ಚದಲ್ಲಿ ಆಯುಧಗಳ ನಿರ್ಮಾಣ, ಅಭಿವೃದ್ಧಿ ಮತ್ತು ತಯಾರಿಕೆಗೆ ಒತ್ತು ನೀಡಬೇಕು ಎಂದಿದ್ದಾರೆ.
ಬಾಕಿ ಇರುವ ಯೋಜನೆಗಳು
– ಹೊಸ ಪೀಳಿಗೆಯ ಸ್ಟೆಲ್ತ್ ಜಲಾಂತರ್ಗಾಮಿಗಳು
– ಮೈನ್ಸ್ವೀಪರ್ಗಳು
– ಭೂ ಸೇನೆ ಯುದ್ಧ ವಾಹನಗಳು
– ಯುದ್ಧ ಸಾಮಗ್ರಿ ಸರಬರಾಜು ವಿಮಾನಗಳು
– ಯುದ್ಧ ವಿಮಾನಗಳು (ಫೈಟರ್ ಜೆಟ್)
– ಲಘು ಉಪಯೋಗದ ಹೆಲಿಕಾಪ್ಟರ್ಗಳು
ಮಾರುತಿ 800 ಕಾರನ್ನು ನಮ್ಮ ನೆಲದಲ್ಲೇ ನಿರ್ಮಿಸುವ ಮೂಲಕ ದೇಶಿ ಉತ್ಪಾದನೆ ಆರಂಭಿಸಿದ ಭಾರತ ಇಂದು ವಾಹನ ಉತ್ಪಾದನೆಯಲ್ಲಿ ವಿಶ್ವದ ಗಮನಸೆಳೆದಿದೆ. ಹಾಗೇ ಆಯುಧಗಳ ಉತ್ಪಾದನೆ, ನಿರ್ಮಾಣದಲ್ಲೂ ಸ್ವಾವಲಂಬನೆ ಸಾಧಿಸಬೇಕಿದೆ.
– ಜ. ಬಿಪಿನ್ ರಾವತ್, ರಕ್ಷಣಾ ಪಡೆಗಳ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್ ಗೆ ಬಿಜೆಪಿ ತಿರುಗೇಟು
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ
ಕಾಂಗ್ರೆಸ್ನಿಂದ ಮತ ಬ್ಯಾಂಕ್ ರಾಜಕಾರಣ; ನೇಹಾ ಹತ್ಯೆ ಲವ್ ಜೆಹಾದ್:ಅಮಿತ್ ಶಾ ಆರೋಪ
ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!
MUST WATCH
ಹೊಸ ಸೇರ್ಪಡೆ
Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
Hunsur: ಅಂಗನವಾಡಿ ಕೇಂದ್ರ ಅಸಮರ್ಪಕ ನಿರ್ವಹಣೆ, ಬೀಗ ಜಡಿದು ಗ್ರಾಮಸ್ಥರ ಆಕ್ರೋಶ
Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ
Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್ ಗೆ ಬಿಜೆಪಿ ತಿರುಗೇಟು