ಈರುಳ್ಳಿ ಬಿತ್ತನೆ ಬೀಜ ದರ ಬಲು ದುಬಾರಿ!
ಕಳೆದ ವರ್ಷ 600 ರೂ. ಇದ್ದ ದರ ಈ ಬಾರಿ 1200 ರೂ.ಗೆ ಏರಿಕೆ
Team Udayavani, May 11, 2020, 5:49 PM IST
ಸಾಂದರ್ಭಿಕ ಚಿತ್ರ
ಹಗರಿಬೊಮ್ಮನಹಳ್ಳಿ: ಲಾಕ್ಡೌನ್ ಪರಿಸ್ಥಿತಿಯಲ್ಲಿ ಅನೇಕ ಸಮಸ್ಯೆಗಳೊಂದಿಗೆ ದಿನದೂಡುತ್ತಿರುವ ರೈತರ ಸಮಸ್ಯೆಗಳಿಗೆ ಟೊಂಕ ಕಟ್ಟಿ ನಿಲ್ಲಬೇಕಾದ ರಾಜ್ಯ ಸರಕಾರ, ಈರುಳ್ಳಿ ಬೆಳೆಗೆ ಉತ್ತಮ ಬೆಲೆ ನೀಡದೆ, ಈರುಳ್ಳಿ ಬೀಜದ ಬೆಲೆಯನ್ನು ಗಗನಕ್ಕೇರಿಸಿ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಬೇಸಿಗೆಯಲ್ಲಿ ಈರುಳ್ಳಿ ಬೆಳೆದವರ ಪಾಡು ಬೀದಿಗೆ ಬಂದಿದೆ.
ಈರುಳ್ಳಿ ಬೆಲೆ ಹಗ್ಗಕ್ಕೆ ಮುಗ್ಗಿನ ಜೋಳ ಎಂಬಂತೆ ಕೇಳಿದ್ದರಿಂದ ಮಾರುಕಟ್ಟೆಯಲ್ಲಿ ಬೆಳೆಗಾರರು ಸುರಿದು ಬರಿಗೈಯಲ್ಲಿ ವಾಪಾಸಾಗಿರುವುದು ಸರಕಾರಕ್ಕೆ ತಿಳಿದಿದೆ. ಆದರೂ ಕೂಡ ಈರುಳ್ಳಿ ಬೀಜವನ್ನು ಸರಕಾರ ಸಬ್ಸಿಡಿಯಲ್ಲಿ ಕೊಡುವ ಬದಲಿ ಹಿಂದಿದ್ದ ರೇಟಿಗಿಂತ ಎರಡರಷ್ಟು ಹೆಚ್ಚಿಸಿ ರೈತರು ಈರುಳ್ಳಿ ತಂಟೆಗೆ ಹೋಗದಂತೆ ಮಾಡಿದೆ.
ಕಂಪನಿ ಬೆನ್ನಿಗೆ ಸರಕಾರ: ಸರಕಾರ ರೈತರ ಹಿತ ಕಾಪಾಡುವ ಬದಲಿ ಈರುಳ್ಳಿ ಸೀಡ್ ಕಂಪನಿಗಳ ಅಭಿವೃದ್ಧಿಗೆ ನಿಂತಂತಿದೆ. ದುಬಾರಿ ಈರುಳ್ಳಿ ಬೀಜ ತೆಗೆದುಕೊಳ್ಳಲು ಹಿಂಜರಿಯುತ್ತಿರುವ ರೈತರು ಸರಕಾರದ ಕ್ರಮಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈರುಳ್ಳಿ ಬೀಜ ದರ ಏರಿಕೆ ರೈತರಿಗೆ ನುಂಗಲಾರದ ತುತ್ತಾಗಿದೆ. ಹೊಲಗಳನ್ನು ಮಾಗಿ ಮಾಡಿಕೊಂಡು ಬಿತ್ತನೆಯ ತರಾತುರಿಯಲ್ಲಿರುವ ಈರುಳ್ಳಿ ಬೆಳೆಗಾರರು ಗೊಂದಲದಲ್ಲಿ ಸಿಕ್ಕಿಕೊಂಡಿದ್ದಾರೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಈರುಳ್ಳಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಕೊರೊನಾ ಕಾರಣ ನೀಡಿದ ಸರಕಾರ, ಕೊರೊನಾ ಪರಿಸ್ಥಿತಿಯಲ್ಲಿ ಸೀಡ್ ಕಂಪನಿಗಳ ಪರವಾಗಿ ನಿಂತಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ತಾಲೂಕಿನ ರೈತರ ಪ್ರಶ್ನೆಯಾಗಿದೆ.
ಈರುಳ್ಳಿಗೆ ಬೆಲೆ ಇಲ್ಲದ್ದರಿಂದ ತಿಪ್ಪೆಗೆ ಚೆಲ್ಲಿದ್ದೇವೆ. ಸರಕಾರ ಈರುಳ್ಳಿ ನಷ್ಟ ಬೆಳೆಗಾರರಿಗೆ ಪರಿಹಾರ ನೀಡಿ ಕೈ ತೊಳೆದುಕೊಂಡಿದ್ದಾರೆ. ಈರುಳ್ಳಿ ಬೀಜದ ದರವನ್ನು ಕಂಪನಿಗಳು ಗಗನಕ್ಕೇರಿಸಿದರು ಸರಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಸಚಿವರೊಂದಿಗೆ ದೂರವಾಣಿ ಮೂಲಕ ಈರುಳ್ಳಿ ಬೀಜ ದರ ಏರಿಕೆ ಬಗ್ಗೆ ಮಾತನಾಡಿದರೆ ಸೂಕ್ತ ಸ್ಪಂದನೆ ನೀಡಲಿಲ್ಲ. ಕಳೆದ ಬಾರಿ 600 ರೂ.ಗೆ ಸಿಗುತ್ತಿದ್ದ ಈರುಳ್ಳಿ ಬೀಜದ ಪ್ಯಾಕೇಟ್ ಸದ್ಯ 1200 ರೂ. ಆಗಿದೆ. ಈವರೆಗೂ ಈರುಳ್ಳಿ ಬೆಲೆ ಕುಸಿತ ಇರುವುದರಿಂದ ಬೆಳೆಗಾರರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೈನಳ್ಳಿ ಕೊಟ್ರೇಶ,
ಈರುಳ್ಳಿ ಬೆಳೆಗಾರ
ಕಳೆದ ವರ್ಷ ಈರುಳ್ಳಿ ಬೀಜ ಸೀಡ್ ಮಾಡುವ ಸಂದರ್ಭದಲ್ಲಿ ಹೆಚ್ಚು ಮಳೆ ಇದ್ದಿದ್ದರಿಂದ ಉತ್ಪಾದನೆ ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ಈರುಳ್ಳಿ ಬೀಜದ ದರ ಏರಿಕೆಯಾಗಿರಬಹುದು. ಕಂಪನಿಯವರಿಂದ ಬೆಲೆ ಏರಿಕೆಯ ಸೂಕ್ತ ಕಾರಣ ತಿಳಿದುಕೊಳ್ಳಲಾಗುವುದು. ಡಾ.ಪರಮೇಶ್ವರಪ್ಪ.
ಸಹಾಯಕ ನಿರ್ದೇಶಕರು,
ತೋಟಗಾರಿಕೆ ಇಲಾಖೆ.
ಸುರೇಶ ಯಳಕಪ್ಪನವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಚ್ಚು ರಾಜಕಾರಣಕ್ಕೆ ಸಿದ್ದು ದೊಡ್ಡ ಬೆಲೆ ತೆರಬೇಕಾದೀತು: ಡಿವಿಎಸ್
Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ
Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್
ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ
ಎಸಿ ಗ್ಯಾಸ್ ಸ್ಫೋಟ; ಐವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Padma Shri: ಬದುಕಿಗಾಗಿ ದಿನಗೂಲಿ ಮಾಡುತ್ತಿರುವ ಪದ್ಮಶ್ರೀ ಪುರಸ್ಕೃತ ಕಲಾವಿದ!
Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸಾವು
IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ
ಇಸ್ರೇಲ್ ದೇಶದಲ್ಲಿ ಅಲ್ಜಝೀರಾ ಸುದ್ದಿ ವಾಹಿನಿ ಶಾಶ್ವತ ಸ್ಥಗಿತ!
LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್