ಅಡ್ಡದಾರಿಯಲ್ಲಿ ಬಂದು ಮದ್ಯ ಖರೀದಿ
Team Udayavani, May 12, 2020, 1:18 PM IST
ಮುಳಬಾಗಿಲು: ತಾಲೂಕು ಗಡಿಗೆ ಹೊಂದಿಕೊಂಡ ಆಂಧ್ರದಲ್ಲಿ ಕೊರೊನಾ ಸೋಂಕಿತರು ಇದ್ದರೂ ಚೆಕ್ ಪೋಸ್ಟ್ ತಪ್ಪಿಸಿ ಅಡ್ಡದಾರಿಗಳಲ್ಲಿ ಬಂದು ಬಾರ್ಗಳಲ್ಲಿ ಮದ್ಯ ಖರೀದಿಸುತ್ತಿದ್ದಾರೆ. ಇದು ಸ್ಥಳೀಯರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ. ಆಂಧ್ರದ ಚಿತ್ತೂರು ಜಿಲ್ಲೆಯ ವಿ.ಕೋಟೆ ವ್ಯಾಪ್ತಿ ಯಲ್ಲಿ 9 ಮತ್ತು ರಾಮಸಮುದ್ರಂ ವ್ಯಾಪ್ತಿಯಲ್ಲಿ ಮೂವರು ಕೊರೊನಾ ಸೋಂಕಿತರು ಇದ್ದಾರೆ.
ಗ್ರೀನ್ ಜೋನ್ನಲ್ಲಿರುವ ಜಿಲ್ಲೆಯಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ತಾಲೂಕಿನ ಆಂಧ್ರ ಗಡಿಯಲ್ಲಿರುವ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ತಾಲೂಕು ಆಡಳಿತ ಲಾಕ್ಡೌನ್ ಮಾಡಿ ಕರ್ನಾಟಕದಿಂದ ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸೇರಿದಂತೆ ಹಳ್ಳಿ ರಸ್ತೆಗಳಲ್ಲಿಯೂ ಚೆಕ್ ಪೋಸ್ಟ್ ಹಾಕಿ ಜನರ ಸಂಚಾರ ನಿರ್ಬಂಧಿಸಿದ್ದಾರೆ.
ಇಷ್ಟಾದರೂ ಆಂಧ್ರದ ಜನರು ತಾಲೂಕಿನ ಬಾರ್ಗಳಿಗೆ ಲಗ್ಗೆ ಇಡಲು ಶುರು ಮಾಡಿದ್ದಾರೆ. ಅಂತೆಯೇ ಭಾನು ವಾರ ಆಂಧ್ರದ ಪಲಮನೇರು ಜನರ ಕಡಿವಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ 75ರ ಅಂಚಿನ ಬಾರ್ಅನ್ನು ಅಬ ಕಾರಿ ಅಧಿಕಾರಿಗಳು ಮುಚ್ಚಿ ಸಿದ್ದಾರೆ. ಉಳಿದಂತೆ ತಾಯಲೂರು ಮತ್ತು ದೂಲಪಲ್ಲಿ ಗ್ರಾಪಂ ವ್ಯಾಪ್ತಿ ಯಲ್ಲಿನ ಹಳ್ಳಿಗಳಲ್ಲಿ ಸಾಕಷ್ಟು ಜನರೇ ಕಟ್ಟುನಿಟ್ಟಾಗಿ ಲಾಕ್ಡೌನ್ ಸೂಚನೆ ಪಾಲಿಸು ತ್ತಿದ್ದರೂ ಮಲ್ಲ ನಾಯ ಕನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ರುವ ಕೆಲವು ಹಳ್ಳಿಗಳಲ್ಲಿ ಮಾತ್ರ ಜನರು ನಿರ್ಲಕ್ಷಿಸು ತ್ತಿದ್ದಾರೆ.
ಗ್ರಾಮ ದಲ್ಲಿನ ಬಾರ್ಗೆ ದ್ವಿಚಕ್ರ ವಾಹನದಲ್ಲಿ ಮಾಸ್ಕ್ ಧರಿಸದೇ, ಸಾಮಾ ಜಿಕ ಅಂತರ ಕಾಯ್ದು ಕೊಳ್ಳದೇ ಮದ್ಯ ಖರೀ ದಿಸಿ, ಲುಂಗಿ ಮತ್ತು ಚೀಲದಲ್ಲಿ ತೆಗೆದು ಕೊಂಡು ಹೋಗು ತ್ತಿದ್ದು, ಜಿಲ್ಲಾಡಳಿತ ಕ್ರಮ ಕೈಗೊಳ್ಳ ಬೇಕೆಂದು ಮಲ್ಲನಾಯಕನಹಳ್ಳಿ ಗ್ರಾಪಂ ಗಸ್ತುದಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
MUST WATCH
ಹೊಸ ಸೇರ್ಪಡೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!