ಕಾಳ್ಗಿಚ್ಚಿನಿಂದ ನಲುಗಿದವರ ಮೇಲೆ ಕೋವಿಡ್ ಪ್ರಹಾರ


Team Udayavani, May 12, 2020, 4:09 PM IST

ಕಾಳ್ಗಿಚ್ಚಿನಿಂದ ನಲುಗಿದವರ ಮೇಲೆ ಕೋವಿಡ್ ಪ್ರಹಾರ

ಮೆಲ್ಬೋರ್ನ್ : ಕಷ್ಟಗಳು ಬಂದರೆ ಬೆನ್ನುಬೆನ್ನಿಗೆ ಬರುತ್ತವೆ ಎನ್ನುತ್ತಾರೆ. ಆಸ್ಟ್ರೇಲಿಯಾದ ಪಾಲಿಗೆ ಇದು ಅಕ್ಷರಶಃ ನಿಜವಾಗಿದೆ. ಕಳೆದ ಬೇಸಗೆಯಲ್ಲಿ ಭೀಕರ ಕಾಳ್ಗಿಚ್ಚಿನಿಂದ ಬೆಂದು ಬಸವಳಿದಿದ್ದ ಈ ದೇಶದ ಮೇಲೆ ಕೊರೊನಾ ಮಾರಕ ಪ್ರಹಾರವನ್ನು ನೀಡಿದೆ. ಕಾಳ್ಗಿಚ್ಚಿನ ಬೂದಿಯ ವಾಸನೆ ಮಾಸುವ ಮೊದಲೇ ಜನರು ಕೋವಿಡ್ ತಾಪದಿಂದ ಬಳಲುವಂತಾಗಿರುವುದು ವಿಧಿಯಾಟದಂತೆ ಕಾಣಿಸುತ್ತದೆ.

ಕಾಳ್ಗಿಚ್ಚು ಸಂತ್ರಸ್ತರಿಗೆ ಇನ್ನೂ ಸಹಜ ಜೀವನಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಈ ನಡುವೆ ಕೋವಿಡ್ ವಕ್ಕರಿಸಿ ಲಾಕ್‌ಡೌನ್‌ ಹೇರಿದ ಪರಿಣಾಮವಾಗಿ ಬದುಕು ಇನ್ನಷ್ಟು ದುಸ್ತರವಾಗಿದೆ.

ಒಂಟಿ ವೃದ್ಧೆ 73ರ ಹರೆಯದ ಲಿಂಡಿ ಮಾರ್ಶಲ್‌ ಅವರ ಮನೆ ಕಾಡ್ಗಿಚ್ಚಿನಿಂದಾಗಿ ಸುಟ್ಟು ಹೋಗಿತ್ತು. ಈಗ ಅವರು ತಾತ್ಕಾಲಿಕವಾಗಿ ನಿರ್ಮಿಸಿದ ಟೆಂಟ್‌ ಮನೆಯಲ್ಲಿದ್ದಾರೆ. ಸಾಮಾಜಿಕ ಅಂತರ ಪಾಲಿಸಬೇಕಾದ ಕಾರಣ ಇಲ್ಲಿ ಅವರ ಬದುಕು ಅಸಹನೀಯವಾಗಿದೆ. ನೀರು ಮತ್ತು ಆಹಾರ ಇಲ್ಲಿನ ದೊಡ್ಡ ಸಮಸ್ಯೆ. ಅವರಿಗೆ ವಾರಕ್ಕೆ ಮೂರು ಸಲ ಸ್ನಾನ ಮಾಡಲು ಸಾಕಾಗುವಷ್ಟು ಮಾತ್ರ ನೀರು ಸಿಗುತ್ತದೆ. ಬಟ್ಟೆ ಒಗೆಯಲು ಸಿಗುವುದು ಬರೀ ಒಂದು ಬಾಲ್ದಿ ನೀರು. ಇದು ಲಿಂಡಿ ಮಾರ್ಶಲ್‌ ಅವರೊಬ್ಬರ ದುರಂತ ಕತೆಯಲ್ಲ. ತಾತ್ಕಾಲಿಕ ಟೆಂಟ್‌ಗಳು ಮತ್ತು ಶಿಬಿರಗಳಲ್ಲಿ ಆಶ್ರಯ ಪಡೆದವರೆಲ್ಲ ಈ ಮಾದರಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮೂಲಸೌಕರ್ಯ ಕೊರತೆಗಳ ನಡುವೆಯೇ ಕಟ್ಟುನಿಟ್ಟಿನ ಸಾಮಾಜಿಕ ಅಂತರ ಹಾಗೂ ಇನ್ನಿತರ ಸುರಕ್ಷಾ ಕ್ರಮಗಳನ್ನು ಪಾಲಿಸುವ ಕಷ್ಟ ಅವರದ್ದು.

ಇದು ಒಂದು ದುಃಸ್ವಪ್ನದಂಥ ಜೀವನ. ಅಂತ್ಯವೇ ಇಲ್ಲದ ಯಾತನಾದಾಯಕ ಪ್ರಯಾಣದಂತೆ ಕಾಣಿಸುತ್ತಿದೆ ಈ ಬದುಕು ಎಂದು ನಿಟ್ಟುಸಿರುಡುತ್ತಾರೆ ಲಿಂಡಿ.

ಲಿಂಡಿ ಅವರಂಥ 3,500ಕ್ಕೂ ಅಧಿಕ ಕುಟುಂಬಗಳು ಈಗ ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿವೆ. ನಾಲ್ಕು ತಿಂಗಳು ಬಿಡದೆ ಉರಿದ ಕಾಡ್ಗಿಚ್ಚು ಅವರ ಬದುಕನ್ನು ಮೂರಾಬಟ್ಟೆ ಮಾಡಿದೆ. ಇದರ ಬೆನ್ನಿಗೆ ಅಪ್ಪಳಿಸಿದ ಕೋವಿಡ್ ವೈರಸ್‌ನಿಂದ ಅವರ ಬದುಕು ಸುಂಟರಗಾಳಿಗೆ ಸಿಲುಕಿದ ನಾವೆಯಂತಾಗಿದೆ. ಎಲ್ಲರ ಭವಿಷ್ಯವೂ ಡೋಲಾಯಮಾನವಾಗಿದ್ದು, ಯಾರೂ ಯಾರನ್ನೂ ಸಂತೈಸುವ ಸ್ಥಿತಿಯಲ್ಲಿ ಇಲ್ಲ. ಸ್ವರಕ್ಷಣೆ ಮತ್ತು ಆರೋಗ್ಯವೇ ಅವರ ಮುಖ್ಯ ಸಮಸ್ಯೆ.

ಅಕ್ಕಪಕ್ಕದಲ್ಲಿರುವವರ ಸಂಪರ್ಕಕ್ಕೂ ಬರಬಾರದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದ ಪರಿಣಾಮವಾಗಿ ಕಾಳ್ಗಿಚ್ಚಿನಿಂದ ನಲುಗಿದವರ ಆರೈಕೆಗೆ ಭಾರೀ ತೊಡಕು ಎದುರಾಗಿದೆ. ಕೋವಿಡ್ ದಿಂದಾಗಿ ಅವರ ಪುನರ್‌ವಸತಿಗೆ ಹಮ್ಮಿಕೊಂಡಿದ್ದ ಯೋಜನೆಗಳೆಲ್ಲ ಸ್ಥಗಿತಗೊಂಡಿವೆ.

ಆತ್ಮಹತ್ಯೆ ಭೀತಿ
ಮನೆಯಿಲ್ಲದಿರುವುದು, ಏಕಾಂತ ವಾಸ, ಸೊತ್ತುಗಳೆಲ್ಲ ಕಳೆದು ಹೋಗಿರುವುದು, ತೀರಾ ಆಪ್ತರನ್ನೂ ಭೇಟಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಿಂದಾಗಿ ನಿರಾಶ್ರಿತ ಶಿಬಿರಗಳಲ್ಲಿ ಆತ್ಮಹತ್ಯೆಯ ಭೀತಿ ತಲೆದೋರುತ್ತಿದೆ. ಜನರು ಸ್ವಯಂ ಹಾನಿ ಮಾಡಿಕೊಳ್ಳಲು ಅಥವಾ ಸಾವಿಗೆ ಶರಣಾಗಲು ಮುಂದಾಗುವ ಸಾಧ್ಯತೆಯಿದೆ ಎಂದು ಮನಃಶಾÏಸ್ತ್ರಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ಕೆಲವು ಆತ್ಮಹತ್ಯೆ ಅಥವಾ ಆತ್ಮಹತ್ಯೆ ಪ್ರಯತ್ನಗಳು ಸಂಭವಿಸಿದ್ದು, ಇದು ಮಾನಸಿಕ ಒತ್ತಡದ ಪರಿಣಾಮ ಎನ್ನಲಾಗುತ್ತಿದೆ.

ಆಸ್ಟ್ರೇಲಿಯದಲ್ಲಿ ಕೋವಿಡ್ ಹಾವಳಿ ತುಸು ಜೋರಾಗಿಯೇ ಇದೆ. ಲಕ್ಷಗಟ್ಟಲೆ ಜನರು ಕೋವಿಡ್ ದಿಂದಾಗಿ ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಉದ್ಯಮ-ವ್ಯವಹಾರಗಳು ಸ್ಥಗಿತಗೊಂಡಿರುವುದರಿಂದ ಜನರಲ್ಲಿ ಖನ್ನತೆ ಕಾಣಿಸಿಕೊಂಡಿದೆ. ದೇಶದ ಆತ್ಮಹತ್ಯೆ ತಡೆ ಸಹಾಯವಾಣಿಗೆ ನಿತ್ಯ ಸುಮಾರು 4000ದಷ್ಟು ಕರೆಗಳು ಬರುತ್ತಿರುವುದೇ ಇದಕ್ಕೆ ಸಾಕ್ಷಿ. ಹಿಂದೆ ಮಾಮೂಲಿ ದಿನಗಳಲ್ಲಿ ದಿನಕ್ಕೆ 30 ಕರೆಗಳು ಬರುತ್ತಿದ್ದವು.

ಶಿಬಿರಗಳಲ್ಲೇ ಜೀವನ
ಕಳೆದ ಸೆಪ್ಟೆಂಬರ್ ನಿಂದ ಮಾರ್ಚ್‌ ತನಕ ಧಗಧಗಿಸಿದ ಕಾಡ್ಗಿಚ್ಚಿಗೆ ಎಕ್ಕರೆಗಟ್ಟಲೆ ಅರಣ್ಯ ಬೂದಿಯಾಗಿರುವುದಲ್ಲದೆ ಸಾವಿರಾರು ಮನೆಗಳೂ ನಾಶವಾಗಿವೆ. ಕೊಬಾರ್ಗೊ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ ಮನೆಗಳ ಪುನರ್‌ನಿರ್ಮಾಣ ಪೂರ್ಣವಾಗದೆ ಜನರು ಶಿಬಿರಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂಥ ಶಿಬಿರಗಳಲ್ಲಿ ಕೋವಿಡ್ ವೈರಸ್‌ ಹಾವಳಿ ತೀವ್ರಗೊಂಡಿದೆ. ನೈರ್ಮಲ್ಯದ ಕೊರತೆ ಈ ಶಿಬಿರಗಳ ದೊಡ್ಡ ಸಮಸ್ಯೆ. ಹೀಗಾಗಿ ರೋಗಗಳು ಕ್ಷಿಪ್ರವಾಗಿ ಹರಡುತ್ತಿವೆ. ಆಸ್ಟ್ರೇಲಿಯನ್ನರ ಈ ವರ್ಷ ನಮ್ಮ ಪಾಲಿಗೆ ಶಾಪಗ್ರಸ್ತ ವರ್ಷವಾಯಿತು ಎಂದು ನಿಟ್ಟುಸಿರಿಡುತ್ತಿದ್ದಾರೆ.

ಟಾಪ್ ನ್ಯೂಸ್

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.