ಬೆಂಗಳೂರಿಗೆ ಸೋಂಕಿತ ಸಂಖ್ಯೆ 653ರ ಸಂಕಷ್ಟ: ರಾಜ್ಯದಲ್ಲಿ ಮತ್ತೆ 23 ಕೋವಿಡ್-19 ಸೋಂಕಿತರು
Team Udayavani, May 16, 2020, 1:21 PM IST
ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 23 ಹೊಸ ಕೋವಿಡ್-19 ಪ್ರಕರಣಗಳು ದೃಢವಾಗಿದೆ. ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದೆ. ಸೋಂಕಿತ ಸಂಖ್ಯೆ 653ರ ದ್ವಿತೀಯ ಸಂಪರ್ಕದಿಂದ ನಗರದಲ್ಲಿ ಸೋಂಕು ಪ್ರಕರಣಗಳು ವರದಿಯಾಗಿದೆ.
ಬೆಂಗಳೂರಿನಲ್ಲಿ 14, ಹಾಸನದಲ್ಲಿ ಮೂರು ಮತ್ತು, ಉಡುಪಿ, ಮಂಡ್ಯ, ಧಾರವಾಡ, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ.
ಬೆಂಗಳೂರಿನ ಎಲ್ಲಾ 14 ಪ್ರಕರಣಗಳು ಸೋಂಕಿತ ಸಂಖ್ಯೆ 653ರ ದ್ವಿತೀಯ ಸಂಪರ್ಕದಿಂದಲೇ ದೃಢವಾಗಿದೆ. ಹಾಸನದಲ್ಲಿ ಮೂರು ಪ್ರಕರಣ ದೃಢವಾಗಿದ್ದು ಮೂರು ಪ್ರಕರಣಗಳು ಮುಂಬೈಯಿಂದ ಬಂದವರಿಗೆ ಸೋಂಕು ತಾಗಿದೆ.
ಬಾಗಲಕೋಟೆ, ಧಾರವಾಡದಲ್ಲೂ ತಲಾ ಒಂದು ಪ್ರಕರಣಗಳು ಮುಂಬೈ ಪ್ರಯಾಣಿಕರಿಗೆ ದೃಢವಾಗಿದೆ. ಉಡುಪಿಯ ಒಂದು ವರ್ಷದ ಮಗುವಿಗೆ ಸೋಂಕು ದೃಢವಾಗಿದ್ದು, ದುಬೈನಿಂದ ಪ್ರಯಾಣದ ಹಿನ್ನಲೆಯಲ್ಲಿ ಸೋಂಕು ತಾಗಿತ್ತು.
ದಾವಣಗೆರೆಯಲ್ಲಿ ಸೋಂಕಿತ ಸಂಖ್ಯೆ 533ರ ಸಂಪರ್ಕದಿಂದ 65 ವರ್ಷದ ವೃದ್ಧೆಗೆ ಸೋಂಕು ತಾಗಿದೆ, ಬಳ್ಳಾರಿಯ 46 ವರ್ಷದ ವ್ಯಕ್ತಿ ಹೈದರಾಬಾದ್ ನಿಂದ ಬಂದಿದ್ದು ಸೋಂಕು ದೃಢವಾಗಿದೆ. ಬೆಂಗಳೂರು ಮತ್ತು ಕೋಲಾರಕ್ಕೆ ಪ್ರಯಾಣ ಮಾಡಿದ್ದ ಮಂಡ್ಯದ 40 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆಯಾಗಿದೆ. ಇದರಲ್ಲಿ ಒಟ್ಟು 494 ಜನರು ಗುಣಮುಖರಾಗಿದ್ದು, 36 ಜನರು ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ಓರ್ವ ಕೋವಿಡ್ ಸೋಂಕಿತ ವ್ಯಕ್ತಿ, ಕೋವಿಡ್-19 ಅಲ್ಲದ ಕಾರಣದಿಂದ ಮೃತಪಟ್ಟಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ