ಕಡೂರು: ಕೋವಿಡ್ ಪರಿಹಾರ ನಿಧಿಗೆ ದೇಣಿಗೆ
Team Udayavani, May 16, 2020, 4:10 PM IST
ಸಾಂದರ್ಭಿಕ ಚಿತ್ರ
ಕಡೂರು: ಪ್ರಧಾನ ಮಂತ್ರಿಗಳ ಕೋವಿಡ್ -19 ಪರಿಹಾರ ನಿಧಿಗೆ ಕಡೂರು ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳು ಶಾಸಕ ಬೆಳ್ಳಿಪ್ರಕಾಶ್ ಅವರ ಮೂಲಕ ಡಿಡಿಯನ್ನು ನೀಡಿದರು.
ಎಲ್ಐಸಿ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಸೀಗೆಹಡ್ಲು ಹರೀಶ್ ನೇತೃತ್ವದಲ್ಲಿ ಶುಕ್ರವಾರ ಜೀವವಿಮಾ ಪ್ರತಿನಿಧಿಗಳು ಶಾಸಕರ ಕಚೇರಿಗೆ ತೆರಳಿ 20 ಸಾವಿರ ರೂ.ಗಳ ಡಿಡಿಯನ್ನು ಶಾಸಕರಿಗೆ ಹಸ್ತಾಂತರಿಸಿದರು. ಯೂನಿಯನ್ ಅಧ್ಯಕ್ಷ ಸೀಗೆಹಡ್ಲು ಹರೀಶ್ ಮಾತನಾಡಿ ದೇಶವೇ ಕೋವಿಡ್ ಮಹಾಮಾರಿಗೆ ತತ್ತರಿಸಿದ್ದು ಇಂತಹ ಸಮಯದಲ್ಲಿ ಕಡೂರು ಎಲ್ಐಸಿ ಶಾಖೆಯ ಪ್ರತಿನಿಧಿಗಳ ಯೂನಿಯನ್ ಸಭೆ ನಡೆಸಿ ರಾಜ್ಯ ಮತ್ತು ದೇಶದಲ್ಲಿ ಪ್ರಕೃತಿ ವಿಕೋಪ ಮತ್ತಿತರ ಸಮಸ್ಯೆಗಳು ಬಂದಾಗ ನಮ್ಮ ಪ್ರತಿನಿಧಿ ಸ್ನೇಹಿತರು ಕೈಲಾದ ಸಹಾಯವನ್ನು ಮಾಡುತ್ತ ಬಂದಿದ್ದು ಇದೀಗ ಪ್ರಧಾನಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಸಹಾಯ ನೀಡಲು ಮುಂದಾಗಿದ್ದು, ಕ್ಷೇತ್ರದ ಶಾಸಕರ ಮೂಲಕ ಡಿಡಿಯನ್ನು ನೀಡಿದ್ದೇವೆ ಎಂದರು.
ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ ತಾಲೂಕಿನಾದ್ಯಂತ ಅನೇಕ ಸಂಘ,ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ, ಡಿಡಿಯನ್ನು ಪ್ರಧಾನ ಮಂತ್ರಿಗಳ ಕೋವೀಡ್-19 ಖಾತೆಗೆ ಕೂಡಲೆ ಕಳುಹಿಸಿಕೊಡಲಾಗುವುದಾಗಿ ತಿಳಿಸಿದರು. ಎಲ್ಐಸಿ ಪ್ರತಿನಿ ಧಿಗಳಾದ ಬಿ.ಎನ್.ಪ್ರಕಾಶ್, ಎಸ್.ಟಿ.ಚಂದ್ರಪ್ಪ, ಚಂದ್ರಶೇಖರ್, ಯಳ್ಳಂಬಳಸೆ ಜಗದೀಶ್, ಎಂ.ಎನ್. ಜಗದೀಶ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ