ಬೆಳ್ತಂಗಡಿ: ಅಂಧ ಕುಟುಂಬಕ್ಕೆ ವಿದ್ಯುತ್ ಬೆಳಕು
Team Udayavani, May 19, 2020, 5:33 AM IST
ನಾರ್ಯ ನಿವಾಸಿ ಕಮಲಾ ಮೊಗೇರ ಎಂಬುವರಿಗೆ ವಿದ್ಯುತ್ ಸಂಪರ್ಕ.
ಬೆಳ್ತಂಗಡಿ: ಬಡತನದಿಂದ ಜೀವನ ಸಾಗಿಸುತ್ತಿರುವ ವೃದ್ಧೆಯೋರ್ವರ ಮನೆಗೆ ಧರ್ಮಸ್ಥಳ ಗ್ರಾ.ಪಂ. ತುರ್ತು ವಿದ್ಯುತ್ ಸಂಪರ್ಕ ಒದಗಿಸುವ ಕಾರ್ಯ ಮಾಡಿದೆ.
ತಾಲೂಕಿನ ಧರ್ಮಸ್ಥಳದ ನಾರ್ಯ ನಿವಾಸಿ ಕಮಲಾ ಮೊಗೇರ ಎಂಬುವರಿಗೆ ಓರ್ವ ಹೆಣ್ಣು ಮಗಳು ಸಹಿತ ಮೂವರು ಮಕ್ಕಳು. ಆದರೆ ಜಗತ್ತಿನ ಬೆಳಕು ಕಾಣಬೇಕಿದ್ದು ಮಕ್ಕಳು ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಪತಿ ಹಾಗೂ ಒಬ್ಬ ಮಗ ಈಗಾಗಲೇ ನಿಧನ ಹೊಂದಿದ್ದು, ಮನೆಗೆ 8 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಬದುಕಿಗೆ ಕತ್ತಲು ಆವರಿಸಿತ್ತು.
ಈ ವಿಚಾರವಾಗಿ ಪಂಚಾಯತ್ ಹಾಗೂ ಮೆಸ್ಕಾಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಇದನ್ನು ಅರಿತ ಸ್ಥಳೀಯ ನಿವಾಸಿಗಳಾದ ನಿಶಾನ್ ಬಂಗೇರ ಹಾಗೂ ಸತೀಶ್, ಗ್ರಾ.ಪಂ. ಸದಸ್ಯ ಸುಧಾಕರ್ ಗೌಡ ಅವರ ಗಮನಕ್ಕೆ ತಂದಿದ್ದರು. ತತ್ಕ್ಷಣ ಸ್ಪಂದಿಸಿದ ಸುಧಾಕರ್ ಮನೆಗೆ ಭೇಟಿ ನೀಡಿ ಪಂಚಾಯತ್ ಮುಖಾಂತರ ಒಂದೇ ದಿನದಲ್ಲಿ ವಿದ್ಯುತ್ ಸಂಪರ್ಕ ಸಹಿತ ನಳ್ಳಿ ನೀರಿನ ಸಂಪರ್ಕದ ಜತೆಗೆ ಒಂದು 1 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ