ದೇವನಗರಿಗೆ ಮತ್ತೊಮ್ಮೆ ಅಪ್ಪಳಿಸಿದ ಕೋವಿಡ್


Team Udayavani, May 20, 2020, 11:35 AM IST

20-April-03

ಸಾಂದರ್ಭಿಕ ಚಿತ್ರ

ದಾವಣಗೆರೆ: ಇಡೀ ವಿಶ್ವವನ್ನೇ ನಡುಗಿಸಿರುವ ಕೋವಿಡ್ ವೈರಸ್‌ ಮಂಗಳವಾರ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯನ್ನ ಮತ್ತೆ ತಲ್ಲಣಗೊಳಿಸಿದೆ. ನಿನ್ನೆ ಹೊಸದಾಗಿ ಈಗ 22 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 112ಕ್ಕೇರಿದೆ.

ಕೇವಲ 20 ದಿನಗಳ ಹಿಂದೆ ದಾವಣಗೆರೆಯಲ್ಲಿ ಇದ್ದ ವಾತಾವರಣ ಈಗ ಇಲ್ಲ. ಈ ಅವಧಿಯಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಗಿ ಹೋಗಿದೆ. ಏ.29ರಿಂದ ಕೋವಿಡ್‌-19ರ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಈ ಮೊದಲು ದಾವಣಗೆರೆ ನಗರಕ್ಕೆ ಸೀಮಿತವಾಗಿದ್ದ ಸೋಂಕು ಈಗ ಹಳ್ಳಿಗೂ ವ್ಯಾಪಿಸುತ್ತಿರುವುದು ತೀವ್ರ ಆತಂಕಕ್ಕೀಡು ಮಾಡುವಂತಾಗಿದೆ.

ಈ ಮೊದಲು ಮಾರ್ಚ್‌ ಕೊನೆಯ ವಾರದಲ್ಲಿ ವಿದೇಶದಿಂದ ಬಂದಿದ್ದ ಮೂವರಲ್ಲಿ (ಒಂದು ಪ್ರಕರಣ ಚಿತ್ರದುರ್ಗ ಜಿಲ್ಲೆಯದ್ದು) ಕೋವಿಡ್ ಸೋಂಕು ದೃಢಪಟ್ಟಿತ್ತು. ಆಗ ಜಿಲ್ಲೆಯ ಜನ ಆತಂಕಗೊಂಡಿದ್ದರು. ಜಿಲ್ಲಾಡಳಿತ, ಆರೋಗ್ಯ ಹಾಗೂ ಪೊಲೀಸ್‌ ಇಲಾಖೆ, ಇತರರೂ ಒಳಗೊಂಡಂತೆ ಎಲ್ಲರ ಅವಿರತ ಶ್ರಮದಿಂದಾಗಿ ಮಹಾಮಾರಿ ಕೊರೊನಾ ಸೋಂಕು ಹರಡಲು ಅವಕಾಶವಾಗಲಿಲ್ಲ. ಆದರೆ, ಏ. 29ರ ನಂತರ ಕೋವಿಡ್ ದಾವಣಗೆರೆ ಜಿಲ್ಲೆಯ ಜನಜೀವನಕ್ಕೆ ಮುಳ್ಳಾಯಿತು.

ಜಿಲ್ಲೆಯಲ್ಲಿ ಪ್ರಥಮ (ವಿದೇಶದಿಂದ ಬಂದವರ ಬಿಟ್ಟು)ವಾಗಿ ದಾವಣಗೆರೆ ಬಾಷಾನಗರದ ವ್ಯಕ್ತಿ (ರೋಗಿ ನಂಬರ್‌ 533)ಗೆ ಕೋವಿಡ್ ದೃಢಪಟ್ಟ ಕೆಲವೇ ಗಂಟೆಗಳ ಅಂತರದಲ್ಲಿ ಜಾಲಿನಗರದ 69 ವರ್ಷದ ವಯೋವೃದ್ಧ (ರೋಗಿ ಸಂಖ್ಯೆ 556)ಗೆ ಕೋವಿಡ್ ಸೋಂಕು ಪತ್ತೆಯಾಯಿತು. ಜಾಲಿನಗರದ ವೃದ್ಧ ಮೇ 1 ರಂದು ಮೃತಪಟ್ಟರಲ್ಲದೆ, ಅಂದೇ 6 ಮಂದಿಗೆ (ಪಿ-533 ಹಾಗೂ ಪಿ-556ರ ಕುಟುಂಬದವರು) ಸೋಂಕು ಅಂಟಿಕೊಂಡಿತ್ತು. ಒಂದೇ ಬಾರಿಗೆ 6 ಮಂದಿಗೆ ಸೋಂಕು ತಗುಲಿದ್ದು ಜನರ ನೆಮ್ಮದಿ ಕೆಡುವಂತಾಯಿತು. ಆದರೆ ಮೇ 3ರಂದು ದಾವಣಗೆರೆಯಲ್ಲಿ 21 ಮಂದಿಗೆ ಕೋವಿಡ್ ದೃಢಪಟ್ಟ ವರದಿ ಜಿಲ್ಲಾಡಳಿತಕ್ಕೆ ಶಾಕ್‌ ನೀಡಿತು. ಆ ದಿನವೇ ಜಾಲಿನಗರದ 48 ವರ್ಷದ ಮಹಿಳೆ (ರೋಗಿ-651) ಸಹ ಮೃತಪಟ್ಟರು.

ಮೇ 3ರ ನಂತರ ಜಿಲ್ಲೆಯಲ್ಲಿ ಕೊರೊನಾಘಾತ ಮುಂದುವರಿದಿದೆ. ಮೇ 5ರಂದು 12 ಮಂದಿಯಲ್ಲಿ ಕಾಣಿಸಿಕೊಂಡ ಕೋವಿಡ್, ಅಂದು 55 ವರ್ಷದ ಮಹಿಳೆ (ರೋಗಿ-662)ಯನ್ನ ಬಲಿ ಪಡೆಯಿತು. ಮೇ 7ರಂದು ಮತ್ತೆ ಮೂವರಲ್ಲಿ ದೃಢಪಟ್ಟ ಸೋಂಕು, ಆ ದಿನ 55 ವರ್ಷದ ಮತ್ತೋರ್ವ ಮಹಿಳೆ (ರೋಗಿ-694) ಸಹ ಸಾವನ್ನಪಿದರು. ಹಾಗಾಗಿ ಕೆಲವೇ ದಿನಗಳ ಅಂತರದಲ್ಲಿ ಕೋವಿಡ್ ಸೋಂಕಿತರ ಜತೆಗೆ ಸಾವಿನ ಸಂಖ್ಯೆಯೂ ಏರತೊಡಗಿದ್ದರಿಂದ ನಗರದ ನಾಗರಿಕರು ಚಿಂತೆಗೀಡಾದರು. ಮೇ 8ರಂದು ಮತ್ತೆ 14 ಮಂದಿಗೆ ಕೋವಿಡ್ ಸೋಂಕು ಪತ್ತೆಯಾಯಿತಲ್ಲದೆ, ಕೋವಿಡ್‌ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರತೊಡಗಿತು. ಮೇ 9ಕ್ಕೆ 6, 11ರಂದು ಮೂವರು ಹಾಗೂ ಮೇ 12ರಂದು 12 ಮಂದಿಗೆ ಸೋಂಕು ವ್ಯಾಪಿಸಿರುವುದು ದೃಢಪಟ್ಟಿತು. ಪೊಲೀಸ್‌ ಪೇದೆ, ಈರುಳ್ಳಿ-ಬೆಳ್ಳುಳ್ಳಿ ವ್ಯಾಪಾರಿ, ಹೊರ ರಾಜ್ಯದಿಂದ ಬಂದ ಕೃಷಿ ಕಾರ್ಮಿಕ, ಸೇರಿದಂತೆ ಹಲವರು ಸೋಂಕಿಗೊಳಗಾಗಿದ್ದಾರೆ.

ಈಗ ಮಂಗಳವಾರ ಮತ್ತೆ ಆಘಾತವನ್ನುಂಟು ಮಾಡಿದೆ. ಜಿಲ್ಲೆಯಲ್ಲಿ ಹೊಸದಾಗಿ 22 ಮಂದಿಗೆ ಸೋಂಕು ದೃಢಪಟ್ಟಿದ್ದು, ಈಗ ಒಟ್ಟು ಸೋಂಕಿತರ ಸಂಖ್ಯೆ 112ಕ್ಕೇರಿದೆ. ಇವರಲ್ಲಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ಈಗ ಸಕ್ರಿಯ  ಕೋವಿಡ್ ಸೋಂಕಿತರ ಸಂಖ್ಯೆ 106.

ನೆಮ್ಮದಿ ಕಸಿದ ಮಹಾಮಾರಿ
ಕೇವಲ 21 ದಿನಗಳ ಹಿಂದೆ ಒಂದೂ ಸಕ್ರಿಯ ಪ್ರಕರಣವಿಲ್ಲದಿದ್ದ ದಾವಣಗೆರೆ ಜಿಲ್ಲೆಯಲ್ಲೀಗ ಸಂಖ್ಯೆ ಮೂರಂಕಿ ದಾಟಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ಇನ್ನೂ ನೂರಾರು ಮಂದಿಯ ಗಂಟಲುದ್ರವ ಮಾದರಿ ಪರೀಕ್ಷಾ ವರದಿ ಬರಬೇಕಿದೆ. ದಿನೇ ದಿನೇ ಏರುತ್ತಿರುವ ಕೋವಿಡ್  ಸೋಂಕಿತರ ಸಂಖ್ಯೆ ಜಿಲ್ಲೆಯ ಜನರ ನೆಮ್ಮದಿಯನ್ನೇ ಕಸಿದುಕೊಂಡಿದೆ.

ಎನ್‌.ಆರ್‌. ನಟರಾಜ್‌

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.