ದೇಶದಲ್ಲಿನ ಪಿಂಚಣಿದಾರರಿಗೆ ಹೊಸ ಮಾರ್ಗದರ್ಶಿ ಸೂತ್ರಗಳು ; ಇಲ್ಲಿದೆ ವಿವರ
Team Udayavani, May 21, 2020, 2:30 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. 65 ಲಕ್ಷ ಜನರು ಪ್ರಯೋಜನ ಪಡೆದುಕೊಳ್ಳಲಿದ್ದು, ಹೊಸ ಬದಲಾವಣೆ ಹೀಗಿವೆ.
– ತಮ್ಮ ಮೊದಲ ಪಿಂಚಣಿ ಹಣ ಪಡೆಯಲು, ಬ್ಯಾಂಕ್ಗಳಿಗೆ ಹೋಗಲೇಬೇಕಾಗಿಲ್ಲ. ಖಾತೆ ತೆರೆಯಲು, ಪಿಂಚಣಿದಾರನ ಉಪಸ್ಥಿತಿ ಬೇಕಿಲ್ಲ.
– ಪಿಂಚಣಿದಾರ ಸಂಗಾತಿಯೊಂದಿಗೆ ಬ್ಯಾಂಕ್ನಲ್ಲಿ ಜಂಟಿ ಖಾತೆ ಹೊಂದಿದ್ದರೆ, ಅವರು ಮೃತಪಟ್ಟ ಅನಂತರ ಅವರ ಸಂಗಾತಿ ಬ್ಯಾಂಕ್ಗೆ ಫಾರ್ಮ್ 14 ಅನ್ನು ಸಲ್ಲಿಸುವ ಅಗತ್ಯವಿಲ್ಲ. ಬ್ಯಾಂಕ್ಗಳು ಹೊಸ ಖಾತೆ ತೆರೆಯಿರಿ ಎನ್ನುವಂತಿಲ್ಲ. ಸಂಗಾತಿ ಮರಣ ಪ್ರಮಾಣಪತ್ರ ಸಲ್ಲಿಸಿದರೆ ಸಾಕು.
– ಪಿಂಚಣಿದಾರರು ಮೃತಪಟ್ಟ ವೇಳೆ, ಬ್ಯಾಂಕ್ಗಳು ತಾವಾಗಿಯೇ ಪಿಂಚಣಿ ಯಾರಿಗೆ ಸಲ್ಲಬೇಕು ಎನ್ನುವುದನ್ನು ಗುರ್ತಿಸಬೇಕು. ಒಂದು ವೇಳೆ ಸಂಗಾತಿ ಹೊರತುಪಡಿಸಿ, ಸಂಬಂಧಿಕರಿಗೆ ಸಲ್ಲುವುದಾದರೆ, ತಾವು ಆರ್ಥಿಕ ಗಳಿಕೆ ಹೊಂದಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಬೇಕು.
– ಪಿಂಚಣಿದಾರರ ಮರಣ ಬಳಿಕ ಸಂಗಾತಿ ಪಿಂಚಣಿ ಪಡೆಯುತ್ತಿದ್ದ ಪಕ್ಷದಲ್ಲಿ, 6 ತಿಂಗಳಿಗೊಮ್ಮೆ, ತಾವು ಮರು ಮದುವೆಯಾಗಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಬೇಕು. ಒಂದು ವೇಳೆ ಮದುವೆಯಾದರೆ ಪಿಂಚಣಿ ರದ್ದು.
– ಪಿಂಚಣಿ ಪಡೆಯುವ ಪ್ರತೀ ವ್ಯಕ್ತಿ, ಪ್ರತೀವರ್ಷ ನವೆಂಬರ್ನಲ್ಲಿ ತಮ್ಮ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಬ್ಯಾಂಕ್ಗಳು ಅಂತರ್ಜಾಲದ ಮೂಲಕ ಆಧಾರ್ ಆಧಾರಿತ ಜೀವನ್ ಪ್ರಮಾಣ್ ಅನ್ನು ಅಂಗೀಕರಿಸಬಹುದು. ಇನ್ನು ಬ್ಯಾಂಕ್ಗಳು ಪ್ರತೀವರ್ಷ ಅ.24, ನ.1, ನ.15, ನ. 25ಕ್ಕೆ ಎಲ್ಲ ಪಿಂಚಣಿದಾರರಿಗೆ ಎಸ್ಎಂಎಸ್, ಇಮೇಲ್ಗಳ ಮೂಲಕ ಜೀವಿತ ಪ್ರಮಾಣ ಪತ್ರ ಸಲ್ಲಿಸುವಂತೆ ಎಚ್ಚರಿಸಬೇಕು.
– ಇನ್ನು ಪ್ರತೀವರ್ಷ ಡಿ.1ರಂದು ಬ್ಯಾಂಕ್ಗಳು ಜೀವಿತ ಪ್ರಮಾಣಪತ್ರ ಸಲ್ಲಿಸದಿದ್ದವರ ಪಟ್ಟಿ ತಯಾರಿಸಬೇಕು. ಅವರಿಗೆ ಸಂದೇಶ ಕಳುಹಿಸಿ, ಪ್ರಮಾಣಪತ್ರವನ್ನು ಮನೆ ಬಾಗಿಲಿಗೆ ಬಂದು ಪಡೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಬೇಕು.
– ಒಂದು ವೇಳೆ ಪಿಂಚಣಿಯು ಶಾಶ್ವತ ಅಂಗವೈಕಲ್ಯ ಮಗುವಿಗೆ ಹೋಗುತ್ತಿದ್ದರೆ, ಆ ಮಗು ಇನ್ನು ಪ್ರತೀವರ್ಷ ಅಂಗವೈಕಲ್ಯ ಹೊಂದಿರುವ ಬಗ್ಗೆ ಹೊಸ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ. ಕೇವಲ ತಾನು ಗಳಿಕೆ ಮಾಡುತ್ತಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಿದರೆ ಸಾಕು. ತಾತ್ಕಾಲಿಕ ವೈಕಲ್ಯ ಹೊಂದಿದ್ದರೆ, 5 ವರ್ಷಕ್ಕೊಮ್ಮೆ ಪೋಷಕರು ಪ್ರಮಾಣಪತ್ರ ಸಲ್ಲಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್