ಇಪಿಎಫ್‌, ಇಎಸ್‌ಐ: ಉದ್ಯೋಗದಾತರು, ಉದ್ಯೋಗಿಗಳಿಗೆ ಪರಿಹಾರ


Team Udayavani, May 22, 2020, 5:49 AM IST

ಇಪಿಎಫ್‌, ಇಎಸ್‌ಐ: ಉದ್ಯೋಗದಾತರು, ಉದ್ಯೋಗಿಗಳಿಗೆ ಪರಿಹಾರ

ಉಡುಪಿ: ಕೋವಿಡ್‌-19 ಹರಡುವುದನ್ನು ತಡೆಗಟ್ಟಲು ಮತ್ತು ಸಾಂಕ್ರಾಮಿಕ ರೋಗದಿಂದ ಉಂಟಾಗುವ ಇತರ ಅಡೆತಡೆಗಳನ್ನು ತಡೆಗಟ್ಟಲು ಲಾಕ್‌ಡೌನ್‌ನಿಂದ ತೊಂದರೆ ಗೀಡಾದ ಇಪಿಎಫ್‌ ಮತ್ತು ಎಂಪಿ ಕಾಯ್ದೆ 1952ರ ವ್ಯಾಪ್ತಿಯಲ್ಲಿರುವ ಸಂಸ್ಥೆಗಳ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಪರಿಹಾರ ನೀಡಲು ಕಾಲ ಕಾಲಕ್ಕೆ ವಿವಿಧ ಕ್ರಮಗಳನ್ನು ಘೋಷಿಸಲಾಗಿದೆ.

ಕೇಂದ್ರ ಸರಕಾರ ಮೇ 13ರಂದು ಇಪಿಎಫ್‌, ಎಂಪಿ ಕಾಯ್ದೆ 1952ರ ವ್ಯಾಪ್ತಿಯ ಎಲ್ಲ ವರ್ಗದ ಸಂಸ್ಥೆಗಳಿಗೆ ಮೇ, ಜೂನ್‌, ಜುಲೈ ತಿಂಗಳ ಶಾಸನ ಬದ್ಧ ದರಗಳನ್ನು ಶೇ. 12ರಿಂದ 10ಕ್ಕೆ ಇಳಿಸಿದೆ. ಅಧಿಸೂಚನೆ ಇಪಿಎಫ್‌ಒ ವೆಬ್‌ಸೈಟ್‌ನ ಮುಖಪುಟದಲ್ಲಿ ಖಅಆ  ಕೋವಿಡ್‌-19 ಅಡಿಯಲ್ಲಿ ಲಭ್ಯವಿದೆ. ಮೇಲಿನ ದರ ಕಡಿತವು ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ವಲಯದ ಉದ್ಯಮ ಗಳಿಗೆ ಅಥವಾ ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಅಥವಾ ನಿಯಂತ್ರಿಸಲ್ಪಡುವ ಯಾವುದೇ ಸಂಸ್ಥೆ ಗಳಿಗೆ ಅನ್ವಯಿಸುವುದಿಲ್ಲ.

ಕಡಿಮೆಗೊಳಿಸಿದ ದರವು ಪಿಎಂಜಿಕೆವೈ ಫಲಾನುಭವಿಗಳಿಗೆ ಸಹ ಅನ್ವಯಿಸುವುದಿಲ್ಲ. ಸರಕಾರ ಇಪಿಎಫ್‌ ದರವನ್ನು ಶೇ. 12ರಿಂದ 10ಕ್ಕೆ ಇಳಿಸಿರುವುದರಿಂದ 4.3 ಕೋಟಿ ಉದ್ಯೋಗಿಗಳು / ಸದಸ್ಯರು ಮತ್ತು 6.5 ಲಕ್ಷ ಉದ್ಯೋಗದಾತರಿಗೆ ತತ್‌ಕ್ಷಣದ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸಲು ಸಹಾಯವಾಗುತ್ತದೆ. ಶಾಸನ ಬದ್ಧ ದರವನ್ನು ಶೇ. 12ರಿಂದ 10ಕ್ಕೆ ಇಳಿಸಿದ ಪರಿಣಾಮ, ಉದ್ಯೋಗಿಯು ಹೆಚ್ಚಿನ ಟೇಕ್‌ ಹೋಂ ವೇತನವನ್ನು ಪಡೆಯುತ್ತಾನೆ. ಉದ್ಯೋಗದಾತನ ಹೊಣೆಗಾರಿಕೆ ಕೂಡ ಶೇ. 2ರಷ್ಟು ಕಡಿಮೆಯಾಗುತ್ತದೆ. ನೌಕರರ ಮಾಸಿಕ ಇಪಿಎಫ್‌ ವೇತನ 10,000 ರೂ. ಇದ್ದರೆ 1,200 ರೂ.ಗಳ ಬದಲಿಗೆ 1,000 ರೂ. ಮಾತ್ರ ವೇತನದಿಂದ ಕಡಿತವಾಗುತ್ತದೆ. ಉದ್ಯೋಗದಾತರು ಅಷ್ಟೇ ಪಾವತಿಸುತ್ತಾರೆ.

ಇಪಿಎಫ್‌ ಯೋಜನೆಯಡಿ 1952ರಲ್ಲಿ ಯಾವುದೇ ಸದಸ್ಯರಿಗೆ ಶಾಸನಬದ್ಧ ದರಕ್ಕಿಂತ (ಶೇ. 10) ಹೆಚ್ಚಿನ ದರದಲ್ಲಿ ಕೊಡುಗೆ ನೀಡುವ ಅವಕಾಶವಿದೆ ಮತ್ತು ಉದ್ಯೋಗದಾತನು ಅಂತಹ ಉದ್ಯೋಗಿಗೆ ಸಂಬಂಧಿಸಿದಂತೆ ತನ್ನ ಕೊಡುಗೆಯನ್ನು ಶೇ. 10 (ಶಾಸನಬದ್ಧ ದರ) ನಿರ್ಬಂಧಿಸಬಹುದು.

ಮಂಗಳೂರು: ಇಎಸ್‌ಐ ಯೋಜನೆ ವ್ಯಾಪ್ತಿಗೆ ಒಳಪಟ್ಟ ನೌಕರರು ಉದ್ಯೋಗಿಗಳಾಗಿದ್ದು, ಅನಂತರ ನಿರುದ್ಯೋಗಿಗಳಾದರೆ ಅವರಿಗೆ ಇಎಸ್‌ಐಸಿಯ ಆರ್‌ಜಿಎಸ್‌ಕೆವೈ ಮತ್ತು ಎಬಿವಿಕೆವೈ ಯೋಜನೆಯಡಿ ಆರ್ಥಿಕ ಸಹಾಯ ದೊರೆಯುತ್ತದೆ ಎಂದು ಇಎಸ್‌ಐಸಿ ಸಂಸ್ಥೆ ತಿಳಿಸಿದೆ.

ಕೈಗಾರಿಕಾ ವಿವಾದ ಅಧಿನಿಯಮ 1947ರ ಕಾಯಿದೆಯನ್ವಯ ಉದ್ಯೋಗಿ ಗಳಾಗಿದ್ದು ನಿರುದ್ಯೋಗಿಗಳಾದರೆ ಮೊದಲ 12 ತಿಂಗಳು ಅವರ ವೇತನದ ಶೇ. 50, ಒಂದು ವೇಳೆ 12 ತಿಂಗಳ ಅನಂತರವೂ ಮತ್ತೆ ಉದ್ಯೋಗ ಪಡೆಯದಿದ್ದರೆ ಅನಂತರದ 12 ತಿಂಗಳ ಅವಧಿಗೆ ವೇತನದ ಶೇ. 25ರಷ್ಟು ನಿರುದ್ಯೋಗ ಭತ್ತೆ ದೊರೆಯುತ್ತದೆ. ಒಂದು ವೇಳೆ ಸಂಸ್ಥೆ/ಕಾರ್ಖಾನೆಯ ಮುಚ್ಚುವಿಕೆ ಅಥವಾ ಕೆಲಸದಿಂದ ತೆಗೆದು ಹಾಕಿರುವುದನ್ನು ಹೊರತುಪಡಿಸಿ ನಿರುದ್ಯೋಗಿಗಳಾದರೆ 90 ದಿನಗಳ ಅವಧಿಗೆ ವೇತನದ ಶೇ. 25ರಷ್ಟು ನಿರುದ್ಯೋಗ ಭತ್ತೆ ಪಡೆಯಲು ಅರ್ಹರಾಗಿರುತ್ತಾರೆ. ನೌಕರರು ಅಗತ್ಯ ದಾಖಲೆಗಳೊಂದಿಗೆ ಇಎಸ್‌ಐಸಿಯ ಕಚೇರಿಗಳನ್ನು ಸಂಪರ್ಕಿಸಬಹುದು.

ಉದ್ಯೋಗದಾತರಿಗೂ ವಿನಾಯಿತಿ
ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉದ್ಯೋಗದಾತರು ಇಎಸ್‌ಐಸಿಗೆ ಸಲ್ಲಿಸುವ ವಂತಿಗೆಯ ಅವಧಿಯನ್ನು ವಿಸ್ತರಿಸಿ ವಿನಾಯಿತಿ ನೀಡಲಾಗಿದೆ. 2019ರ ಅಕ್ಟೋಬರ್‌ನಿಂದ 2020ರ ಮಾರ್ಚ್‌ವರೆಗಿನ ವಂತಿಗೆ ಸಲ್ಲಿಸಲು ಮೇ 11 ಕೊನೆಯ ದಿನಾಂಕವಾಗಿತ್ತು. ಇದೀಗ ಅದನ್ನು ಜೂ. 11ರ ವರೆಗೆ ವಿಸ್ತರಿಸಲಾಗಿದೆ. ಅಂದರೆ ವಂತಿಗೆ ಸಲ್ಲಿಸಲು ಹೆಚ್ಚುವರಿಯಾಗಿ ಒಂದು ತಿಂಗಳ ಅವಧಿಯನ್ನು ನೀಡಲಾಗಿದೆ ಎಂದು ಇಎಸ್‌ಐಸಿ ಮಂಗಳೂರು ಉಪ ಪ್ರಾದೇಶಿಕ ಕಚೇರಿಯ ಪ್ರಭಾರ ನಿರ್ದೇಶಕ ಎಸ್‌. ಶಿವರಾಮಕೃಷ್ಣನ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ: ಇಪಿಎಫ್‌ ಉಡುಪಿ ಕಾರ್ಯಾಲಯ:
0824   2531172 / 2531174 ಇ-ಮೇಲ್‌ [email protected]

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.