ಅಗತ್ಯ ವಸ್ತು ಕಿಟ್ ವಿತರಣೆ
Team Udayavani, May 23, 2020, 1:28 PM IST
ತೀರ್ಥಹಳ್ಳಿ: ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು.
ತೀರ್ಥಹಳ್ಳಿ: ಮುಳಬಾಗಿಲು ಗ್ರಾಪಂ ವ್ಯಾಪ್ತಿಯ ಕೆಲವು ಗ್ರಾಮಗಳು ಕೋವಿಡ್ ನಿಂದ ಸೀಲ್ ಡೌನ್ ಆಗಿ ಅನೇಕ ಕುಟುಂಬಗಳು ಸಂಕಷ್ಟದಲ್ಲಿ ಅನುಭವಿಸುತ್ತಿವೆ. ಮಾಜಿ ಸಚಿವ, ಕೆಪಿಸಿಸಿ ನಿಯೋಜಿತ ಕೋವಿಡ್ -19 ಶಿವಮೊಗ್ಗ ಜಿಲ್ಲಾ ಟಾಸ್ಕ್ ಫೋರ್ಸ್ ಅಧ್ಯಕ್ಷ ಕಿಮ್ಮನೆ ರತ್ನಾಕರ್ ಅವರು ವೈಯಕ್ತಿಕವಾಗಿ ಮುಳುಬಾಗಿಲು ಗ್ರಾಪಂ ವ್ಯಾಪ್ತಿಯ ಸೀಲ್ಡೌನ್ನಿಂದ ಸಂಕಷ್ಪಕ್ಕೆ ಸಿಲುಕಿರುವ 75 ಕುಟುಂಬಕ್ಕೆ ಅಗತ್ಯ ದಿನಸಿ ವಸ್ತುಗಳ ಕಿಟ್ಗಳನ್ನು ಮುಳುಬಾಗಿಲು ಗ್ರಾಪಂ ಆವರಣದಲ್ಲಿ ವಿತರಿಸಿದರು.
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕೆಪಿಸಿಸಿ ಸದಸ್ಯ ಜಿ.ಎಸ್. ನಾರಾಯಣ ರಾವ್, ತೀರ್ಥಹಳ್ಳಿ ಬ್ಲಾಕ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮುಡುಬ ರಾಘವೇಂದ್ರ, ಜಿಪಂ ಸದಸ್ಯರಾದ ಕಲ್ಪನಾ ಪದ್ಮನಾಭ್, ಭಾರತಿ ಪ್ರಭಾಕರ್, ತಾಪಂ ಸದಸ್ಯರಾದ ಕೆಳೆಕೆರೆ ದಿವಾಕರ್, ಶೃತಿ ವೆಂಕಟೇಶ್, ಎಪಿಎಂಸಿ ನಿರ್ದೇಶಕರಾದ ಯಲ್ಲಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರಾದ ಪಟಮಕ್ಕಿ ಮಹಾಬಲೇಶ್, ಅಮ್ರಪಾಲಿ ಸುರೇಶ್, ಡಿ.ಎಸ್. ವಿಶ್ವನಾಥ ಶೆಟ್ಟಿ ,ವಾದಿರಾಜ ಭಟ್ರಾ, ಬಾಳೆಹಳ್ಳಿ ಪ್ರಭಾಕರ್, ವಿಲಿಯಮ್ ಮಾರ್ಟಿಸ್, ಪಡುವಳ್ಳಿ ಹರ್ಷೇನ್ದ್ರ ಕುಮಾರ್ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಸಹೋದ್ಯೋಗಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಕ್ಕೆ ಹಿಂದೂಯುವಕನ ಮೇಲೆ ಹಲ್ಲೆ
Sagara; ಇತಿಹಾಸ ಸೇರಿದ ಇತಿಹಾಸ ತಜ್ಞ ಗುಂಡಾ ಜೋಯಿಸ್
Thief: ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ‘ಅಜ್ಜಿ’
ತಪ್ಪು ಮಾಡಿದವರನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ಬರಬೇಕು; ಬೇಳೂರು ಸಲಹೆ
ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಎಸ್ಐಟಿ ತನಿಖೆಗೆ ಕೊಟ್ಟಿರುವುದು ಸಿದ್ದರಾಮಯ್ಯನವರ ನಾಟಕ