ಕೋವಿಡ್‌ನಿಂದಾಗಿ ಮಕ್ಕಳ ಲಸಿಕೆ ಕಾರ್ಯಕ್ರಮಕ್ಕೆ ಕುತ್ತು


Team Udayavani, May 24, 2020, 6:39 PM IST

ಕೋವಿಡ್‌ನಿಂದಾಗಿ ಮಕ್ಕಳ ಲಸಿಕೆ ಕಾರ್ಯಕ್ರಮಕ್ಕೆ ಕುತ್ತು

ಸಾಂದರ್ಭಿಕ ಚಿತ್ರ.

ಸವಾಲುಗಳನ್ನು ಮೀರಿ ಹಲವು ರಾಷ್ಟ್ರಗಳು ರೋಗನಿರೋಧಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಮುಂದುವರಿಸುವುದಕ್ಕೆ ವಿಶೇಷ ಪ್ರಯತ್ನಗಳನ್ನು ನಡೆಸುತ್ತಿವೆ.ಉಗಾಂಡಾ ಇತರ ಆವಶ್ಯಕ ಆರೋಗ್ಯ ಸೇವೆಗಳೊಂದಿಗೆ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರಿಸುತ್ತಿದೆ. ಲಾವೋಸ್‌ನಲ್ಲಿ ಮಾರ್ಚ್‌ನಿಂದ ರಾಷ್ಟ್ರೀಯ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ನಿಗದಿತ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಲಸಿಕೆ ನೀಡುವ ಕಾರ್ಯಕ್ರಮವನ್ನು ಮುಂದುವರಿಸಲಾಗುತ್ತಿದೆ.

ವಿಶ್ವಸಂಸ್ಥೆ: ವಿಶ್ವಾದ್ಯಂತ ಜೀವರಕ್ಷಕ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಕೋವಿಡ್‌ ಹೆಮ್ಮಾರಿ ಅಡ್ಡಿಯಾಗಿ ಪರಿಣಮಿಸಿದೆ ಮತ್ತು ಇದರಿಂದಾಗಿ ಒಂದು ವರ್ಷದೊಳಗಿನ 8 ಕೋಟಿ ಮಕ್ಕಳ ಮೇಲೆ ಪರಿಣಾಮವಾಗುವ ಸಾಧ್ಯತೆಯಿದೆ.

ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಅಸ್ತವ್ಯಸ್ತಗೊಳ್ಳಲು ಹಲವು ಕಾರಣಗಳಿವೆ. ಕೆಲ ಹೆತ್ತವರು ನಿರ್ಬಂಧಗಳು ಜಾರಿಯಲ್ಲಿರುವುದರಿಂದ, ಮಾಹಿತಿ ಕೊರತೆಯಿಂದ ಅಥವಾ ಕೋವಿಡ್‌ ಸೋಂಕು ತಗಲುವ ಭೀತಿಯಿಂದ ಮನೆಯಿಂದ ಹೊರಹೋಗಲು ಹಿಂಜರಿಯುತ್ತಿದ್ದಾರೆ.

ಸಂಚಾರ ನಿರ್ಬಂಧಗಳಿಂದಾಗಿ ಅಥವಾ ಕೋವಿಡ್‌ ಕರ್ತವ್ಯಕ್ಕೆ ಮರುನಿಯೋಜನೆಯಿಂದಾಗಿ ಹಾಗೂ ಸಂರಕ್ಷಕ ಸಾಧನಗಳ ಕೊರತೆಯಿಂದಾಗಿ ಅನೇಕ ಕಾರ್ಯಕರ್ತರು ಕೂಡ ಈ ಕಾರ್ಯಕ್ರಮಕ್ಕೆ ಲಭ್ಯರಾಗುತ್ತಿಲ್ಲ ಬಡ ಮತ್ತು ಶ್ರೀಮಂತ ರಾಷ್ಟ್ರಗಳೆರಡರಲ್ಲೂ ಕೋಟ್ಯಂತರ ಮಕ್ಕಳು ಡಿಫ್ತಿàರಿಯ, ದಡಾರ ಮತ್ತು ಪೋಲಿಯೋದಂಥ ರೋಗಗಳಿಗೆ ತುತ್ತಾಗುವ ಅಪಾಯ ಎದುರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ಯುನಿಸೆಫ್, ಗಾವಿ ಮತ್ತು ಸಾಬಿನ್‌ ವ್ಯಾಕ್ಸಿನ್‌ ಇನ್‌ಸ್ಟಿಟ್ಯೂಟ್‌ ಸಂಗ್ರಹಿಸಿರುವ ದತ್ತಾಂಶಗಳಿಂದ ವ್ಯಕ್ತವಾಗಿದೆ.

ಸಾಧಿಸಿದ್ದ ಪ್ರಗತಿ ನಷ್ಟ
ಕೋವಿಡ್‌-19ರಿಂದಾಗಿ ರೋಗನಿರೋಧಕ ಲಸಿಕೆಗಳನ್ನು ನೀಡುವ ಕಾರ್ಯಕ್ರಮ ಅಸ್ತವ್ಯಸ್ತವಾಗಿರುದರಿಂದ ಲಸಿಕೆ ಮೂಲಕ ತಡೆಯಬಹುದಾದ ದಡಾರದಂಥ ರೋಗಗಳ ಮೇಲೆ ದಶಕಗಳಿಂದ ಸಾಧಿಸಲಾಗಿದ್ದ ಪ್ರಗತಿ ನಷ್ಟವಾಗುವ ಅಪಾಯವುಂಟಾಗಿದೆ ಎಂದು ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಡಾ| ಟೆಡ್ರೋಸ್‌ಆಧನೋಮ್‌ ಹೇಳಿದ್ದಾರೆ.

ಅನೇಕ ರಾಷ್ಟ್ರಗಳು ಕೋವಿಡ್‌ ಸೋಂಕು ತಗಲುವ ಅಪಾಯ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅಗತ್ಯದ ಹಿನ್ನೆಲೆಯಲ್ಲಿ ಕಾಲರಾ, ದಡಾರ, ಮೆದುಳುಜ್ವರ, ಪೋಲಿಯೊ, ಟಿಟೇನಸ್‌. ಟೈಫಾಯ್ಡ ಮತ್ತು ಹಳದಿ ಜ್ವರದಂಥ ಕಾಯಿಲೆಗಳನ್ನು ತಡೆಗಟ್ಟುವುದಕ್ಕೆ ಸಾಮೂಹಿಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಅಮಾನತುಗೊಳಿಸಿವೆ.

ವಿಶೇಷವಾಗಿ ದಡಾರ ಮತ್ತು ಪೋಲಿಯೊ ಲಸಿಕೆ ನೀಡುವ ಅಭಿಯಾನಗಳು ಬಾಧಿತವಾಗಿವೆ. 27 ರಾಷ್ಟ್ರಗಳು ದಡಾರ ಹಾಗೂ 38 ರಾಷ್ಟ್ರಗಳು ಪೋಲಿಯೊ ಅಭಿಯಾನವನ್ನು ಸ್ಥಗಿತಗೊಳಿಸಿವೆ.

ಅಭಿಯಾನಗಳನ್ನು ಮುಂದೂಡಿರುವುದು ಮತ್ತು ಹೊಸ ಲಸಿಕೆಗಳನ್ನು ಪರಿಚಯಿಸುವುದರಿಂದಾಗಿ 21 ಹಿಂದುಳಿದ ರಾಷ್ಟ್ರಗಳ ಕನಿಷ್ಠ 2.4 ಕೋಟಿ ಮಕ್ಕಳು ಪೋಲಿಯೊ, ದಡಾರ, ಟೈಫಾಯ್ಡ, ಹಳದಿ ಜ್ವರ, ಕಾಲರಾ, ರೋಟಾ ವೈರಸ್‌, ಎಚ್‌ಪಿವಿ, ಮೆದುಳುಜ್ವರ, ಹಾಗೂ ರುಬೆಲ್ಲಾ ನಿರೋಧಕ ಲಸಿಕೆಗಳಿಂದ ವಂಚಿತರಾಗುವ ಅಪಾಯದಲ್ಲಿದ್ದಾರೆ.

“ಕೋವಿಡ್‌-19ರಿಂದಾಗಿ ಈ ರೋಗಗಳನ್ನು ಹತ್ತಿಕ್ಕುವಲ್ಲಿ ಸಾಧಿಸಲಾಗಿದ್ದ ಪ್ರಗತಿ ನಷ್ಟವಾಗುವ ಅಪಾಯವುಂಟಾಗಿದೆ ಮತ್ತು ದಡಾರ ಹಾಗೂ ಪೋಲಿಯೊದಂಥ ರೋಗಗಳು ಮರುಕಳಿಸುವ ಅಪಾಯ ತಲೆದೋರಿದೆ ಎಂದು ಗಾವಿ ಸಿಇಒ ಡಾ| ಸೇತ್‌ ಬಕ್ಲಿ ಹೇಳುತ್ತಾರೆ.

ಸಾಗಣೆ ವಿಳಂಬ
ಲಸಿಕೆಗಳ ಸಾಗಣೆಯಲ್ಲಿನ ವಿಳಂಬದಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಲಾಕ್‌ಡೌನ್‌ ಕ್ರಮಗಳು, ವಾಣಿಜ್ಯ ವಿಮಾನಗಳ ಹಾರಾಟದಲ್ಲಿ ಇಳಿಕೆ ಹಾಗೂ ಬಾಡಿಗೆ ವಿಮಾನಗಳ ಲಭ್ಯತೆಯಲ್ಲಿನ ಕೊರತೆಯಿಂದಾಗಿ ಲಸಿಕೆಗಳ ರವಾನೆಯಲ್ಲಿ ಗಣನೀಯ ವಿಳಂಬವುಂಟಾಗುತ್ತಿದೆಯೆಂದು ಯುನಿಸೆಫ್ ಹೇಳಿದೆ.

ಯುನಿಸೆಫ್ ಮನವಿ
ಈ ಜೀವರಕ್ಷಕ ಲಸಿಕೆಗಳ ಸಾಗಣೆ ಸಾಧ್ಯವಾಗುವಂತಾಗಲು ಸರಕು ವಿಮಾನಗಳ ಹಾರಾಟಕ್ಕೆ ಅವಕಾಶ ಕಲ್ಪಿಸುವಂತೆ ಸರಕಾರಗಳು, ಖಾಸಗಿ ಕ್ಷೇತ್ರ ಹಾಗೂ ವಿಮಾನ ಉದ್ದಿಮೆಗೆ ಯುನಿಸೆಫ್ ಮನವಿ ಮಾಡಿದೆ.

ಬೇರೆ ರೋಗಗಳ ವಿರುದ್ಧ ಹೋರಾಟದಲ್ಲಿ ನಾವು ದೀರ್ಘ‌ಕಾಲದಲ್ಲಿ ಸಾಧಿಸಿರುವ ಪ್ರಗತಿ ಒಂದು ರೋಗದ ಕಾರಣಕ್ಕೆ ವ್ಯರ್ಥವಾಗುವುದಕ್ಕೆ ನಾವು ಅವಕಾಶ ನೀಡುವಂತಿಲ್ಲ ಎಂದು ಯುನಿಸೆಫ್ ನಿರ್ವಾಹಕ ನಿರ್ದೇಶಕ ಹೆನ್ರಿಟಾ ಫೋರ್‌ ಹೇಳುತ್ತಾರೆ.

ಟಾಪ್ ನ್ಯೂಸ್

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

Pak 2

Pakistan; ಈಗ ಯೋಗ ತರಬೇತಿ ಅಧಿಕೃತವಾಗಿ ಆರಂಭ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: 3 ಭಾರತೀಯರನ್ನು ಬಂಧಿಸಿದ ಕೆನಡಾ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ

Chandra

China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.