ಲಾಕ್ಡೌನ್ ನಲ್ಲಿ ಕಳೆದ ಆಧಾರ್ ಪಡೆಯೋದು ಹೇಗೆ?
Team Udayavani, May 25, 2020, 6:50 AM IST
ಸಾಂದರ್ಭಿಕ ಚಿತ್ರ.
ಈ ಕೋವಿಡ್- 19 ಲಾಕ್ಡೌನ್ ಅವಧಿಯಲ್ಲಿ ತವರಿಗೆ ಮರಳುವ ಗಡಿಬಿಡಿಯಲ್ಲಿ ನೀವು ನಿಮ್ಮ ಆಧಾರ್ ವಿಶಿಷ್ಟ ಗುರುತಿನ ಸಂಖ್ಯೆ ಇಲ್ಲವೇ ದಾಖಲಾತಿ ಐಡಿ ಕಳೆದುಕೊಂಡಿದ್ದಲ್ಲಿ ಮೊದಲು, ನೀವು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕು. ದೂರಿನ ಎಫ್ಐಆರ್ ಕಾಪಿಯನ್ನಿಟ್ಟುಕೊಂಡು ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ನೀವು ಸುಲಭವಾಗಿ ನಿಮ್ಮ ಆಧಾರ್ ಸಂಖ್ಯೆಗನು ಗುಣವಾಗಿ ಹೊಸ ಕಾರ್ಡ್ ಪಡೆಯಬಹುದು.
ಏನೆಲ್ಲಾ ಬೇಕಾಗುತ್ತೆ?
-ಆಧಾರ್ ಸಂಖ್ಯೆ
-ಆಧಾರ್ ಜತೆ ಲಿಂಕ್ ಮಾಡಿ ರುವ ಮೊಬೈಲ್ ಸಂಖ್ಯೆ ಇಲ್ಲವೇ ಇಮೇಲ್ ವಿಳಾಸ
-ಆಧಾರ್ ಕಳೆದ ಬಗ್ಗೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರತಿ (ಎಫ್ಐಆರ್)
ವಿಧಾನ 1: ಆಧಾರ್ ಸಂಖ್ಯೆ, ಮೊಬೆ„ಲ್ ಸಂಖ್ಯೆ ಗೊತ್ತಿದ್ದರೆ, ಆ ಸಂಖ್ಯೆ ಈಗಲೂ ಕಾರ್ಯನಿರ್ವಹಿಸುತ್ತಿದ್ದು, ನಿಮ್ಮ ಬಳಿಯೇ ಇದ್ದರೆ ಶೇ.95 ಕೆಲಸ ಮುಗಿದಂತೆ. ಹಾಗಿ ದ್ದಲ್ಲಿ, ನೇರವಾಗಿ https://eaadhaar.uidai.gov.in/#/ ಗೆ ಲಾಗ್ಇನ್ ಆಗಿ ಅಥವಾ ಮೊಬೆ„ಲ್ನಲ್ಲಿರುವ ಎಂಆಧಾರ್ ಆ್ಯಪ್ ಮೂಲಕ ಇ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು. ನಿಮಗೆ ಕಾರ್ಡ್ ಪೋಸ್ಟ್ ಮೂಲಕ ಬೇಕಿದ್ದರೆ ಅದೇ ವೆಬ್ಸೈಟ್ನಲ್ಲಿ 50 ರೂ. ಪಾವತಿಸಿ, ಮನವಿ ಸಲ್ಲಿಸಬೇಕು. 5-6 ದಿನಗಳಲ್ಲಿ ಆಧಾರ್ ಕಾರ್ಡ್ ಬರುತ್ತದೆ.
ವಿಧಾನ 2: ನಿಮಗೆ 12 ಅಂಕಿಗಳ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ/ಇಮೇಲ್ ಐಡಿ ಗೊತ್ತಿಲ್ಲದಿದ್ದರೆ ಮಾತ್ರ ಈ ವಿಧಾನ ಸಹಕಾರಿ. ಆಧಾರ್ ಸಹಾಯವಾಣಿ 1947ಕ್ಕೆ ಕರೆ ಮಾಡಿ. ಹೆಸರು, ಜನನ ದಿನಾಂಕ ಅಥವಾ ವರ್ಷ, ಪಿನ್ಕೋಡ್ ಸೇರಿ ಗ್ರಾಹಕ ಸೇವಾ ಪ್ರತಿನಿಧಿ ಕೇಳುವ ಎಲ್ಲ ವಿವರಗಳನ್ನು ಒದಗಿಸಿ. ಬಳಿಕ ಪ್ರತಿನಿಧಿಯು ನೀಡುವ ದಾಖಲಾತಿ ಐಡಿ ಸಂಖ್ಯೆಯನ್ನು ಒಂದೆಡೆ ಬರೆದುಕೊಳ್ಳಿ. ಈ ದಾಖಲಾತಿ ಐಡಿ ಸಂಖ್ಯೆ ಬಳಸಿ ನಿಮ್ಮ ಆಧಾರ್ ಪ್ರಿಂಟ್ ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್