ಜಾಯಿಂಟ್‌ ವೀಲ್‌ ಅಳವಡಿಕೆ: ಜಾತ್ರೆಗೆ ಬಂದು ಸಿಲುಕಿದ ವಲಸೆ ಕಾರ್ಮಿಕರು


Team Udayavani, May 28, 2020, 6:48 AM IST

ಜಾಯಿಂಟ್‌ ವೀಲ್‌ ಅಳವಡಿಕೆ: ಜಾತ್ರೆಗೆ ಬಂದು ಸಿಲುಕಿದ ವಲಸೆ ಕಾರ್ಮಿಕರು

ಹೆಬ್ರಿ: ಇತಿಹಾಸ ಪ್ರಸಿದ್ಧ ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಜಾತ್ರೆಯಲ್ಲಿ ಮನೋರಂಜನೆ ಆಟಕ್ಕಾಗಿ ಜಾಯಿಂಟ್‌ ವೀಲ್‌ ಅಳವಡಿಸಲು ಬಂದಿದ್ದ ಸುಮಾರು 20 ಮಂದಿ ವಲಸೆ ಕಾರ್ಮಿಕರು ಲಾಕ್‌ಡೌನ್‌ನಲ್ಲಿ ಸಿಲುಕಿ 2 ತಿಂಗಳುಗಳು ಕಳೆದಿವೆ. ಮೈಸೂರು, ಹುಣಸೂರಿನ ಮಹಿಳೆಯರು, ಮಕ್ಕಳು ಸಹಿತ 15 ಮಂದಿ ಹಾಗೂ ಮಹಾರಾಷ್ಟ್ರದ 5ಮಂದಿ ಸಂಕಷ್ಟಕ್ಕೆ ಸಿಲುಕಿದವರು. ಸದ್ಯ ಇವರು ದೇವಸ್ಥಾನದ ಎದುರಿನ ಗದ್ದೆಯಲ್ಲಿ ಟೆಂಟ್‌ ನಿರ್ಮಿಸಿ ವಾಸವಾಗಿದ್ದಾರೆ. ಊರಿಗೆ ತೆರಳಲು ಜಿಲ್ಲಾಡಳಿತ ಬಸ್ಸಿನ ವ್ಯವಸ್ಥೆ ಮಾಡಿದರೂ 6 ಲಾರಿಗಳಲ್ಲಿ ಸಾಗಿಸುವಷ್ಟು ಸಾಮಗ್ರಿಗಳು ಇರುವುದರಿಂದ ಸಮಸ್ಯೆಯಾಗಿದೆ. ಹುಣಸೂರಿಗೆ ಲಾರಿಯೊಂದಕ್ಕೆ 13 ಸಾ.ರೂ., ಮುಂಬಯಿಗೆ 22 ಸಾವಿರ ರೂ. ಬಾಡಿಗೆ ಕೇಳುತ್ತಿದ್ದು, ಒಟ್ಟು 90 ಸಾವಿರಕ್ಕೂ ಮಿಕ್ಕಿ ಹಣದ ಆವಶ್ಯಕತೆ ಇದೆ.

ಮಕ್ಕಳು, ಹೆಂಗಸರು ಸಹಿತ 20 ಮಂದಿ ಆಹಾರದ ಸಮಸ್ಯೆ ಎದುರಿಸುತ್ತಿದ್ದ ಸಂದರ್ಭ ದೇವಸ್ಥಾನದಿಂದ ಊಟ ಒದಗಿಸಲಾಗಿದೆ. ಜತೆಗೆ ಸ್ಥಳೀಯ ದಾನಿಗಳು ಹಾಗೂ ವಿ ಲವ್‌ ಹ್ಯುಮ್ಯಾನಿಟಿ ಸಂಸ್ಥೆ ಅಗತ್ಯ ವಸ್ತುಗಳನ್ನು ಪೂರೈಸಿದೆ. ಗುಂಪಾಗಿ ರಸ್ತೆ ಬದಿಯ ಡೇರೆಯಲ್ಲಿ ವಾಸಿಸುವ ಇವರಿಗೆ ಕೈ ತೊಳೆಯಲು ಸಾಬೂನು ಹಾಗೂ ಪ್ರತಿಯೊಬ್ಬರಿಗೂ ಮಾಸ್ಕ್ಗಳನ್ನು ಮಾನವೀಯ ನೆಲೆಯಲ್ಲಿ ಹಿರಿಯಡಕ ಠಾಣಾ ಪೊಲೀಸ್‌ ಸಿಬಂದಿ ಸಂತೋಷ ಕಾರ್ಕಳ ನೀಡಿದ್ದಾರೆ.

ಕೂಲಿ ಕೆಲಸ
ಎರಡು ತಿಂಗಳುಗಳಿಂದ ಕೆಲಸವಿಲ್ಲದೆ ಇದ್ದ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಪರಿಹಾರ ಕಂಡುಕೊಂಡಿದ್ದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು. ಮಹಿಳೆಯರು ಮೀನಿನ ಬಲೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡರೆ ಪುರುಷರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃಷಿ ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡು ನಿತ್ಯದ ಖರ್ಚನ್ನು ನಿಭಾಯಿಸಿದರು.

ಊರಿಗೆ ತೆರಳಲು ಸೂಚನೆ
ಮಳೆಗಾಲ ಶುರುವಾದರೆ ಸಂಭಾವ್ಯ ಸಾಂಕ್ರಾಮಿಕ ರೋಗ, ಅನಾರೋಗ್ಯದಿಂದ ಕಷ್ಟವಾಗಲಿದೆ. ಆದ್ದರಿಂದ ಅಧಿಕಾರಿಗಳು ಶನಿವಾರದೊಳಗೆ ಊರಿಗೆ ತೆರಳಲು ಸೂಚನೆ ನೀಡಿದ್ದು, ಸಂಕಷ್ಟದಲ್ಲಿದ್ದಾರೆ.

ಸರಕಾರದ ಸಹಾಯವಿಲ್ಲ
“ಚಿಕ್ಕ ಮಕ್ಕಳೊಂದಿಗೆ ಕಷ್ಟದಲ್ಲಿ ಜೀವನ ಸಾಗಿಸುವ ನಮಗೆ ಪೆರ್ಡೂರಿನ ಜನತೆಯ ಸಹಕಾರದಿಂದ ಜೀವ ಉಳಿದುಕೊಂಡಿದೆ. ಸ್ಥಳೀಯರಾದ ತುಕಾರಾಮ್‌ ಅವರ ಸಹಾಯ ಹಾಗೂ ದೇವಸ್ಥಾನದ ಊಟ ಹೊರತುಪಡಿಸಿದರೆ ಸರಕಾರದಿಂದ ಬೇರೆ ಯಾವ ಸಹಾಯವೂ ನಮಗೆ ಸಿಗಲಿಲ್ಲ’ ಎಂದು ಕಾರ್ಮಿಕರಲ್ಲೊಬ್ಬರಾದ ಸಾವಿತ್ರಿ ಬಾಯಿ ತಿಳಿಸಿದ್ದಾರೆ.

ಸ್ಪಂದಿಸುವುದು ಅಗತ್ಯ
ಎರಡು ತಿಂಗಳುಗಳಿಂದ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರಿಗೆ ನಮ್ಮ ಸಂಸ್ಥೆಯ ವತಿಯಿಂದ ಸುಮಾರು 75 ಸಾವಿರಕ್ಕೂ ಅಧಿಕ ಆಹಾರ ಸಾಮಗ್ರಿಗಳನ್ನು ನೀಡಲಾಗಿದೆ. ಮುಂದೆ ಮಳೆಗಾಲ ಬರುವುದರಿಂದ ಆದಷ್ಟು ಶೀಘ್ರ ಇವರನ್ನು ಊರಿಗೆ ಕಳುಹಿಸುವುದು ಉತ್ತಮ. ಈ ಬಗ್ಗೆ ತಹಶೀಲ್ದಾರ್‌ ಅವರಲ್ಲಿ ಮತನಾಡಿದ್ದೇವೆ. ಸರಕು ಸಾಗಿಸಲು ಹಣದ ಆವಶ್ಯಕತೆ ಇರುವುದರಿಂದ ಜಿಲ್ಲಾಡಳಿತ ದಾನಿಗಳ ನೆರವಿನೊಂದಿಗೆ ಸ್ಪಂದಿಸಬೇಕಾಗಿದೆ.
-ತುಕಾರಾಮ್‌ ನಾಯಕ್‌, ಸಂಸ್ಥಾಪಕರು, ವಿ ಲವ್‌ ಹ್ಯುಮ್ಯಾನಿಟಿ ಸಂಸ್ಥೆ, ಪೆರ್ಡೂರು

ಸಹಾಯದ ನಿರೀಕ್ಷೆಯಲ್ಲಿದ್ದೇವೆ
ಊರು ಊರು ಜಾತ್ರೆ ಸುತ್ತಿ ಜೀವನ ಸಾಗಿಸುವ ನಮಗೆ ಲಾಕ್‌ಡೌನ್‌ನಿಂದ ಸಮಸ್ಯೆಯಾಗಿ ಪರಿಣಮಿಸಿದೆ. ಅಧಿಕಾರಿಗಳು ಬರುವ ಶನಿವಾರದೊಳಗೆ ಜಾಗ ಖಾಲಿ ಮಾಡಲು ಹೇಳಿದ್ದಾರೆ. ಊರಿಗೆ ನಮ್ಮ ಸರಕುಗಳೊಂದಿಗೆ ಸಾಗಲು ಹಣವಿಲ್ಲ. ನಮ್ಮ ಊರಿನವರಿಂದ ಸಾಲ ಕೇಳಿದ್ದೇವೆ. ಕೆಲಸವಿಲ್ಲದೆ ಬದುಕು ಸಾಗಿಸುವುದು ಕಷ್ಟವಾದ್ದ‌ರಿಂದ ಸರಕಾರದ ಸಹಾಯದ ನಿರೀಕ್ಷೆಯಲ್ಲಿ ಇದ್ದೇವೆ.
-ರವಿ ಹುಣಸೂರು, ಸಂತ್ರಸ್ತ ಕಾರ್ಮಿಕ

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.