Lakshadweep ದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ
Team Udayavani, May 28, 2020, 6:39 PM IST
ಮಂಗಳೂರು: ಕೋವಿಡ್ 19 ಲಾಕ್ ಡೌನ್ ಕಾರಣದಿಂದ ಕಳೆದ ಎರಡುವರೆ ತಿಂಗಳಿನಿಂದ ಲಕ್ಷ ದ್ವೀಪದಲ್ಲಿ ಬಾಕಿಯಾಗಿದ್ದ ಕಾರ್ಮಿಕರನ್ನು ಗುರುವಾರದಂದು ಹಡಗಿನ ಮೂಲಕ ಮಂಗಳೂರಿಗೆ ಸುರಕ್ಷಿತವಾಗಿ ಕರೆತರಲಾಯಿತು.
“ಅಮಿನ್ ದಿವಿ” ಎಂಬ ಹೆಸರಿನ ಹಡಗಿನ ಮೂಲಕ ಈ ಕಾರ್ಮಿಕರನ್ನು ಲಕ್ಷದ್ವೀಪದಿಂದ ಮಂಗಳೂರಿಗೆ ಕರೆತರಲಾಯಿತು. 19 ಮಂದಿ ಕಾರ್ಮಿಕರೊಂದಿಗೆ ಹಡಗು ಮಂಗಳೂರಿನ ಹಳೆ ಬಂದರಿಗೆ ಆಗಮಿಸಿದೆ.