ಮುದಗಲ್ಲ ಕ್ವಾರಿಗೂ ಕೋವಿಡ್ ಕಂಟಕ
ಕೆಲಸವಿಲ್ಲದೇ ತೊಂದರೆಗೆ ಸಿಲುಕಿದ ಸಾವಿರಾರು ಕಾರ್ಮಿಕರು
Team Udayavani, May 29, 2020, 7:30 AM IST
ಮುದಗಲ್ಲ: ಕೋವಿಡ್ ಹಾವಳಿಯಿಂದ ಮುದಗಲ್ಲ ಗ್ರಾನೈಟ್ ಕ್ವಾರಿ ಸ್ತಬ್ಧಗೊಂಡಿದೆ. ಇದರಿಂದ ಕೋಟ್ಯಂತರ ರೂ.ಬೆಲೆಬಾಳುವ ಕಲ್ಲು ದಿಮ್ಮಿಗಳು ಅನಾಥವಾಗಿ ಬಿದ್ದಿವೆ. ಮತ್ತೂಂದೆಡೆ ಗ್ರಾನೈಟ್ ಕ್ವಾರಿಯಲ್ಲಿ ದುಡಿದು ಬದುಕು ಕಂಡುಕೊಂಡಿದ್ದ ಸಾವಿರಾರು ಕಾರ್ಮಿಕರು ಕೆಲಸ ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ.
ಮುದಗಲ್ಲದಿಂದ ಕೇವಲ ಎರಡು ಕಿಮೀ ದೂರದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಗ್ರಾನೈಟ್ ಕ್ವಾರಿಗಳಿವೆ. ಈ ಕಂಪನಿಗಳು ಶ್ವೇತ ಮತ್ತು ಗೆù ಗ್ರಾನೈಟ್ ಶಿಲೆಯನ್ನು ಹೊರತೆಗೆದು ಹೊರ ರಾಷ್ಟ್ರಗಳಿಗೆ ರಫ್ತು ಮಾಡುವ ಮೂಲಕ ಲಕ್ಷಾಂತರ ರೂ.ಆದಾಯ ಗಳಿಸುವ ಪ್ರಮುಖ ಕ್ವಾರಿಗಳಾಗಿವೆ. ಮುದಗಲ್ಲ ಭಾಗದಲ್ಲಿ ದೊರೆಯುವ ಎಂಡಿ-5 (ಮುದಗಲ್ ಗ್ರೈ), ಬೆಕ್ಕಿನ ಕಣ್ಣು (ಕ್ಯಾಟ್ ಐ) ಮತ್ತು ಹಿಮಾಲಯ ಬ್ಲೂ ಎಂಬ ಹೆಸರಿನ ಗ್ರಾನೈಟ್ ಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಪ್ರತಿ ತಿಂಗಳು ತೈವಾನ್, ಚೀನ, ಜಪಾನ್ದಿಂದ ಖರೀದಿದಾರರು (ಬಯರ್) ಬಂದು ಸಾವಿರಾರು ಘನ ಮೀಟರ್ ಗ್ರಾನೈಟ್ ಖರಿದಿಸುತ್ತಾರೆ. ಆದರೆ ಚೀನದಲ್ಲಿ ನೂರಾರು ಜನರ ಸಾವಿಗೆ ಕಾರಣವಾಗಿರುವ ಕೋವಿಡ್ ವೈರಸ್ದಿಂದಾಗಿ ಯಾವುದೇ ವಿದೇಶಿ ಖರೀದಿದಾರರು ಬಾರದೆ ಲಕ್ಷಾಂತರ ರೂ. ಬೆಲೆಯ ಕಲ್ಲು ದಿಮ್ಮಿಗಳು ಹಾಗೆ ಬಿದ್ದಿವೆ. ಇದರಿಂದ ಲಕ್ಷಾಂತರ ರೂ. ಕಳೆದುಕೊಂಡಿರುವ ಕ್ವಾರಿ ಮಾಲೀಕರು ಅನೇಕ ಕಾರ್ಮಿಕರಿಗೆ ರಜೆ ನೀಡಿ ಕ್ವಾರಿಯನ್ನು ಸ್ತಬ್ಧ ಮಾಡಿದ್ದಾರೆ. ಕಳೆದ ಆರೇಳು ವರ್ಷಗಳ ಹಿಂದೆ ಮುದಗಲ್ಲ ಭಾಗದ ಗ್ರಾನೈಟ್ ಬೆಲೆ ಒಂದು ಘನ ಮೀಟರ್ಗೆ 1000 ದಿಂದ 1100 ಡಾಲರ್ಗೆ ಮಾರಾಟವಾಗುತ್ತಿತ್ತು. ನಂತರ ಕೆಲ ಮಾರುಕಟ್ಟೆಯಲ್ಲಿ ಕಾಂಪಿಟೇಷನ್ದಿಂದಾಗಿ 800 ಡಾಲರ್ಗೆ ಕುಸಿತ ಕಂಡಿತ್ತು. ಆದರೆ ಇತ್ತೀಚೆಗೆ ಗ್ರಾನೈಟ್ ವಿದೇಶಕ್ಕೆ ಮಾರಾಟವಾಗದಿರುವುದರಿಂದ ಸಾವಿರ ರೂಪಾಯಿಗೂ ಮಾರಾಟವಾಗದೆ ನಷ್ಟ ಅನುಭವಿಸುವಂತಾಗಿದೆ ಎಂಬುದು ಗ್ರಾನೈಟ್ ಮಾಲೀಕರ ಅಳಲಾಗಿದೆ.
ಮುದಗಲ್ಲ ಗ್ರಾನೈಟ್ ವಿದೇಶಗಳಲ್ಲಿ ಬಾರಿ ಬೇಡಿಕೆ ಇತ್ತು. ಪ್ರತಿ ತಿಂಗಳು ನೂರಾರು ಘನ ಮೀ.ದಷ್ಟು ಕಲ್ಲು ವಿದೇಶಕ್ಕೆ ರಫ್ತು ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಚೀನದಲ್ಲಿ ಸೃಷ್ಟಿಯಾದ ಕೋವಿಡ್ ವೈರಸ್ ಹಾವಳಿಯಿಂದ ಕ್ವಾರಿಗಳನ್ನು ಬಂದ್ ಮಾಡಲಾಗಿದೆ. –ಸತೀಶ್ ಭೋವಿ, ಗ್ರಾನೈಟ್ ಮಾಲೀಕರು.
ಕಲ್ಲು ಕ್ವಾರಿಯಲ್ಲಿ ಮ್ಯಾನೇಜರ್ ಆಗಿ ಮತ್ತು ಕಲ್ಲು ಟ್ರಾನ್ಸ್ ಪೋರ್ಟ್ ಮಾಡಿ ದಿನಕ್ಕೆ ಸಾವಿರಾರು ರೂ. ದುಡಿಯುತ್ತಿದ್ದೆ. ಆದರೆ ಈಗ ಕ್ವಾರಿಗಳೆಲ್ಲ ಬಂದಾಗಿದ್ದು, ಕೆಲಸ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. – ರಜ್ಜಬಲ್ಲಿ ಟಿಂಗ್ರಿ ಹಳೆಪೇಟೆ.
– ದೇವಪ್ಪ ರಾಠೋಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್ ಅಡಿಕೆ ತೋಟಕ್ಕೆ ಹಾನಿ
Constitution ಬದಲಿಸಲು ಕಾಂಗ್ರೆಸ್ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ
Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್!