ಹೆಜಮಾಡಿ ಮಹಾಲಿಂಗೇಶ್ವರ ದೇಗುಲ: ಭೂದಾನ ಶಾಸನ ಪತ್ತೆ
Team Udayavani, Jun 1, 2020, 5:53 AM IST
ಪಡುಬಿದ್ರಿ: ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಇದ್ದ ಶಿಲಾಶಾಸನವನ್ನು ಓದಿರುವ ಇತಿಹಾಸ ಸಂಶೋಧಕ ಸುಭಾಸ್ ನಾಯಕ್ ಬಂಟಕಲ್ಲು ಅವರು ಲಿಪಿ ಲಕ್ಷಣದ ಆಧಾರದಲ್ಲಿ ಇದು 14-15ನೇ ಶತಮಾನದ ಭೂದಾನ ಶಾಸನ ಎಂದು ಗುರುತಿಸಿದ್ದಾರೆ.
ಶಾಸನದ ಮೊದಲ ಹಾಗೂ ಕೊನೆಯ ಭಾಗ ಸಂಪೂರ್ಣ ತ್ರುಟಿತ ಗೊಂಡಿರುವುದರಿಂದ ಯಾವ ಅರಸರ ಕಾಲದಲ್ಲಿ ಯಾರಿಗೆ ನೀಡಲಾದ ಭೂದಾನ ಶಾಸನ ಎಂದು ಹೇಳಲಾಗುವುದಿಲ್ಲ ಎಂದಿರುವ ಅವರು ಅಸ್ಪಷ್ಟವಾಗಿ ದಾನ ನೀಡಲಾದ ಭೂಮಿಯ ಚತುಃ ಸೀಮೆಯ (ಚಕ್ಕು ಬಂಧಿಯ) ನಮೂದುಗಳಿವೆ. ಸಾಮಾನ್ಯವಾಗಿ ದಾನ ಶಾಸನಗಳಲ್ಲಿ ಇರುವ ಶಾಪಾಶಯವೂ ಸ್ಪಷ್ಟವಾಗಿ ಹೇಳಲಾಗದು.
ದೇವಳದ ಬಾವಿಕಟ್ಟೆಯ ಬಳಿ ಗೋಡೆಗೆ ಆನಿಸಿ ಇಟ್ಟಂತೆ ಈ ಶಾಸನವು ದೊರಕಿದ್ದು, ಈ ಶಿಲಾಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರರು ಹಾಗೂ ಶಿವಲಿಂಗ, ಜೋಡಿ ನಂದಿ, ದೀಪಗಳ ಉಬ್ಬು ಚಿತ್ರಗಳಿವೆ. ಈ ಶಾಸನವು 66 ಇಂಚು ಉದ್ದ, 25 ಇಂಚು ಅಗಲವಿದೆ.
ಜೀರ್ಣೋದ್ಧಾರಗೊಳ್ಳುತ್ತಿದೆ
ಶಾಂಭವಿ ನದಿ ತೀರದಲ್ಲಿರುವ ಹನ್ನೊಂದು ಶಿವಾಲಯಗಳಲ್ಲಿ ಬಸ್ತಿಪಡ್ಪು ಅಥವಾ ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನವೂ ಒಂದಾಗಿದ್ದು, ಇದು ಸುಮಾರು 10ನೇ ಶತಮಾನದ್ದೆಂದು ಹೇಳಲಾಗುತ್ತಿದೆ. ಗಜಪೃಷ್ಠ ಆಕಾರದ ಈ ದೇಗುಲವು ಪ್ರಸ್ತುತ ಸಗ್ರವಾಗಿ ಜೀರ್ಣೋ ದ್ಧಾರಗೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು