ಕಾರಹುಣ್ಣಿಮೆಗೆ ಕೋವಿಡ್ ಕಾರ್ಮೋಡ


Team Udayavani, Jun 3, 2020, 12:34 PM IST

ಕಾರಹುಣ್ಣಿಮೆಗೆ ಕೋವಿಡ್ ಕಾರ್ಮೋಡ

ಬೀಳಗಿ: ಪ್ರತಿ ವರ್ಷ ಸಂಭ್ರಮ- ಸಡಗರದಿಂದ ಆಚರಿಸಲಾಗುತ್ತಿದ್ದ ಕಾರ ಹುಣ್ಣಿಮೆಗೆ ಈ ಬಾರಿ ಕೋವಿಡ್ ಕರಿನೆರಳು ಆವರಿಸಿದೆ. ಕೋವಿಡ್ ಹೊಡೆತಕ್ಕೆ ರೈತನ ಬದುಕು ಸಂಕಷ್ಟಕ್ಕೆ ಸಿಲುಕಿದ ಪರಿಣಾಮ, ರೈತನ ಮುಖದಲ್ಲಿ ಕಾರ ಹುಣ್ಣಿಮೆ ಸಡಗರ ಎದ್ದು ಕಾಣುತ್ತಿಲ್ಲ.

ಉತ್ತರ ಕರ್ನಾಟಕದ ಹರ್ಷದಾಯಕ ಹಬ್ಬ ಕಾರಹುಣ್ಣಿಮೆ. ಮುಂಗಾರು ಹೊತ್ತಿಗೆ ರೋಹಿಣಿ ಸಿಂಚನಗೈಯುವ ಖುಷಿ. ಮುಂಗಾರು ಕೃಷಿ ಚಟುವಟಿಕೆಗಳಿಗೆ ಅಣಿಯಾಗುವ ಹೊತ್ತು. ಇಂತಹ ಸಂದರ್ಭದ ಹೊಸ್ತಿಲಲ್ಲಿ ಅಗಮಿಸುವ ಕಾರ ಹುಣ್ಣಿಮೆ ರೈತನ ಪಾಲಿಗೆ ಸಡಗರ ತಂದುಕೊಡುವ ಹಬ್ಬ. ಕಾರಹುಣ್ಣಿಮೆ ಹಬ್ಬಕ್ಕೆ ರೈತನ ಜೀವನಾಡಿಯಾಗಿರುವ ಎತ್ತುಗಳ ಶೃಂಗಾರಕ್ಕಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ಸಾಮಗ್ರಿಗಳ ಖರೀದಿ ಜೋರಾಗಿರುತ್ತದೆ. ಆದರೆ, ಈ ಬಾರಿ ಎತ್ತುಗಳ ಶೃಂಗಾರ ಸಾಮಗ್ರಿಗಳ ವ್ಯಾಪಾರ ಕಳೆಗುಂದಿದೆ. ಹೀಗಾಗಿ ಅನ್ನದಾತ ತನ್ನ ಕೈಯಿಂದ ಸಾಧ್ಯವಾದಷ್ಟು ಹಣೆಗೊಂಡೆ, ಗೆಜ್ಜೆಸರ, ಲಡ್ಡು, ಹಣೆಕಟ್ಟು, ಹಗ್ಗ, ಮಗಡ, ಮೂಗುದಾರ ಹೀಗೆ ಹಲವು ಶೃಂಗಾರ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಕಂಡುಬಂದಿತು. ಏನು ಮಾಡೋದ್ರಿ.. ಕೋವಿಡ್ ಬಂದು ಚಂದಿಲ್ರೀ ಬಾಳೆ… ಬೆಳಿ ಬೆಳೆದೇವು ಬೆಲೆಯಿಲ್ಲ. ಕಷ್ಟದಾಗ ಕೈ ತೊಳಿಯೋದಾಗೈತಿ. ಹಂಗಂತ್‌ ನಾವು ನಂಬಿದ ಬಸವಣ್ಣನ (ಎತ್ತುಗಳು) ಮರ್ಯಾಕೂ ಆಗುದಿಲ್ಲ ಎನ್ನುತ್ತಾರೆ ರೈತರು.

ಎತ್ತಿನ ಮೈ ತೊಳೆದು, ಅದರ ಮೈಮೇಲೆ ಬಣ್ಣದ ಚಿತ್ತಾರವಿಟ್ಟು, ಕೊಂಬಿಗೆ ಕೊಮ್ಮನಸು, ರಿಬ್ಬನ್‌, ಗೆಜ್ಜೆ ಸರ ಕಟ್ಟಿ, ಹೊಸಗೊಂಡೆ, ಲಡ್ಡು, ಹಗ್ಗಗಳಿಂದ ಶೃಂಗರಿಸುವ ಮೂಲಕ ಎತ್ತುಗಳ ಓಟದ ಸ್ಪರ್ಧೆ ಖುಷಿ ಕಾಣುವ ಮತ್ತು ಕರಿ ಹರಿಯುವ ಸಂಭ್ರಮದೊಂದಿಗೆ ಮುಂಗಾರು-ಹಿಂಗಾರು ಫಸಲಿನ ಕುರಿತು ಕನಸು ಪೋಣಿಸುವ ರೈತನ ಸೊಬಗು ಈ ಬಾರಿ ಕೋವಿಡ್ ಕರಿ ಛಾಯೆಗೆ ಕಮರಿ ಹೋಗಿದೆ.

ಕಾರ ಹುಣ್ಣಿಮೆ ನಮ್ಮ ಪಾಲಿಗೆ ದೊಡ್ಡ ಹಬ್ಬ. ಕೈಲಾದಷ್ಟು ಮಾಡೋದ್ರಿ. ಹೊಲದಾಗಿನ ಬೆಳೆ ತಿನಬಾರದಂತ ಎತ್ತಿಗೆ ಬಾಯಿಚಿಕ್ಕ ಹಾಕುತ್ತಿದ್ದೇವ್ರಿ.. ಈಗ ಮನಷ್ಯಾರೆಲ್ಲ ಬಾಯಿಚಿಕ್ಕ (ಮಾಸ್ಕ್) ಕಟಗೊಂಡು ತಿರುಗುವಂಗ್‌ ಆಗೈತಿ. ಹಬ್ಬ ಅಷ್ಟೇನು ಹುರುಪ ಇಲ್ರೀ -ಸಂಗಪ್ಪ ಮಳಗಾಂವಿ, ರೈತ

 

ರವೀಂದ್ರ ಕಣವಿ

ಟಾಪ್ ನ್ಯೂಸ್

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.