ವಿವೇಕಾನಂದರ ಜೀವನದ ಸ್ಫೂರ್ತಿದಾಯಕ ಘಟನೆಗಳು


Team Udayavani, Jun 3, 2020, 7:30 PM IST

ವಿವೇಕಾನಂದರ ಜೀವನದ ಸ್ಫೂರ್ತಿದಾಯಕ ಘಟನೆಗಳು

ಸ್ವಾಮಿ ವಿವೇಕಾನಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಅವರೊಂದು ಸ್ಫೂರ್ತಿಯ ಕಣಜ, ಯುವ ಜನತೆಯ ಬದುಕಿಗೆ ದಾರಿದೀಪ. ಸದಾ ಯುವ ಜನತೆಯನ್ನು ಹುರಿದುಂಬಿಸುವ ಜತೆಗೆ ಎಚ್ಚರಿಸುವ ಕೆಲಸ ಮಾಡುತ್ತಿದ್ದ ಅವರ ಅದೆಷ್ಟೋ ಮೊನಚಿನಂತಹ ಮಾತುಗಳು ಇತಿಹಾಸದ ಪುಟದಲ್ಲಿ ಅಳಿಸಲಾಗದಂಥಹ ಅಚ್ಚೊತ್ತಿವೆ. ಈ ಮಹಾನ್‌ ಪುರುಷನ ಜೀವನದಲ್ಲಿ ನಡೆದ ಪ್ರತಿ ಘಟನೆಯೂ ಯುವಜನತೆಗೆ ಸ್ಫೂರ್ತಿ ತುಂಬುವಂಥವು. ಅಂತಹ ಎರಡು ಚಿಕ್ಕ ಘಟನೆಗಳು ಇಲ್ಲಿವೆ.

ಘಟನೆ 1
ವಿವೇಕಾನಂದರು ಒಮ್ಮೆ ಬನಾರಸ್‌ನ ದೇವಾಲಯಕ್ಕೆ ಭೆಟಿ ನೀಡಿದ್ದರು. ದೇವರ ದರುಶನ ಮುಗಿಸಿ ಹಿಂದಿರುಗುವಾಗ ಮಂಗವೊಂದು ಅವರ ಬೆನ್ನುಬಿದ್ದು ಪೀಡಿಸಲು ಆರಂಭಿಸಿತು. ಇದರಿಂದ ಕೊಂಚ ಗಲಿಬಿಲಿಗೆ ಒಳಗಾದ ಇವರು ತುಸು ಜೋರಾಗಿ ನಡೆಯಲು ಆರಂಭಿಸಿದರು. ಆದರೂ ಅಷ್ಟೇ ವೇಗವಾಗಿ ಇವರನ್ನು ಆ ಮಂಗ ಹಿಂಬಾಲಿಸುತ್ತಿತ್ತು. ಇವೆಲ್ಲವನ್ನೂ ಅಲ್ಲೇ ಸನಿಹ ನಿಂತಿದ್ದ ಸನ್ಯಾಸಿಯೋರ್ವರು ಗಮನಿಸುತ್ತಿದ್ದರು. ಕೂಡಲೇ ಅವರು ವಿವೇಕಾನಂದರಲ್ಲಿ ಹೇಳಿದರು. ನೀವೇಕೆ ಹೆದರಿ ಓಡುತ್ತಿದ್ದೀರಿ. ನಿಂತಲ್ಲೆ ನಿಲ್ಲಿ. ಮಂಗವನ್ನು ದಿಟ್ಟವಾಗಿ ಎದುರಿಸಿ ಅದರತ್ತಲೇ ಒಂದು ಹೆಜ್ಜೆ ಮುಂದಿಡಿ ಎಂದು. ವಿವೇಕಾನಂದರು ಹಾಗೆ ಮಾಡಿದ್ದೇ ತಡ ಮಂಗ ಸದ್ದಿಲ್ಲದೆ ಓಡಿ ಹೋಯಿತು. ನಮ್ಮನ್ನು ಹೆದರಿಸುವವರು ಅನೇಕರಿರುತ್ತಾರೆ. ಧೈರ್ಯದಿಂದ ಅವರನ್ನು ಎದುರಿಸಿದಾಗ ಮಾತ್ರ ನಾವು ಸುಖವಾಗಿ ಬದುಕಲು ಸಾಧ್ಯ ಎಂಬುದು ಈ ಸಂದರ್ಭ ವಿವೇಕಾನಂದರಿಗೆ ಅರಿವಾಯಿತಂತೆ.

ಘಟನೆ 2
ವಿವೇಕಾನಂದರ ಮಾತಿನ ಮೋಡಿಗೆ ಮರುಳಾಗದವರೇ ಇಲ್ಲ. ಇವರಿಂದ ಬಹಳ ಪ್ರಭಾವಿತರಾಗಿದ್ದ ವಿದೇಶಿ ಮಹಿಳೆಯೋರ್ವರು ಒಮ್ಮೆ ವಿವೇಕಾನಂದರ ಬಳಿ ಬಂದು ನನ್ನನ್ನು ನೀವು ಮದುವೆಯಾಗಿ. ನಿಮಂತೆಯೇ ಜ್ಞಾನವಂತನಾದ ಮಗುವನ್ನು ನಾನು ಪಡೆಯಬೇಕು ಎಂದರಂತೆ. ಇದಕ್ಕೆ ಉತ್ತರಿಸಿದ ವಿವೇಕಾನಂದರು ನಾನೋರ್ವ ಸನ್ಯಾಸಿಯಾಗಿರುವ ಕಾರಣ ನಿಮ್ಮನ್ನು ವರಿಸಲು ಸಾಧ್ಯವಿಲ್ಲ. ನಿಮಗೆ ನನ್ನಂತಹ ಮಗು ಬೇಕೆಂಬ ಆಸೆಯಿದ್ದರೆ ನನ್ನನ್ನೇ ನಿಮ್ಮ ಮಗುವೆಂದು ತಿಳಿದುಕೊಳ್ಳಿ. ಆಗ ನಿಮ್ಮ ಆಸೆ ಈಡೇರಿದಂತಾಗುತ್ತದೆ ಅಲ್ಲವೆ ಎಂದರಂತೆ. ಇವರ ಮಾತುಗಳನ್ನು ಕೇಳಿದ ಆಕೆ ವಿವೇಕಾನಂದರ ವ್ಯಕ್ತಿತ್ವಕ್ಕೆ ತಲೆದೂಗಿದ್ದರಂತೆ.

ಟಾಪ್ ನ್ಯೂಸ್

ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಡೆಂಗ್ಯೂ

Dengue Fever; ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಡೆಂಗ್ಯೂ

Jaishankar

Reply; ಭಾರತದ ಆರ್ಥಿಕತೆ ಸದೃಢ: ಬೈಡೆನ್‌ಗೆ ಜೈಶಂಕರ್‌ ಚಾಟಿ

1-wq-ewqew

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ ಕೋಲ್ಕತಾ ನೈಟ್‌ರೈಡರ್:ಪ್ಲೇ ಆಫ್ ತೇರ್ಗಡೆಗೆ ಹೋರಾಟ

voter

Lok Sabha Election 3ನೇ ಹಂತ: ಬಹಿರಂಗ ಪ್ರಚಾರ ಇಂದು ಅಂತ್ಯ

1———–wewqewq

Bank ಉದ್ಯೋಗಿಗಳ 5 ದಿನಗಳ ಕೆಲಸದ ಬೇಡಿಕೆಗೆ ಶೀಘ್ರ ಅಸ್ತು?

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

10-uv-fusion

UV Fusion: ಅಹಂಕಾರ ಅಳಿಯಲಿ… ಸ್ವಾಭಿಮಾನ ಉಳಿಯಲಿ..

8-uv-fusion

Letter to Son: ಪ್ರೀತಿಯ ಕಂದನಿಗೆ

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಡೆಂಗ್ಯೂ

Dengue Fever; ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಡೆಂಗ್ಯೂ

Jaishankar

Reply; ಭಾರತದ ಆರ್ಥಿಕತೆ ಸದೃಢ: ಬೈಡೆನ್‌ಗೆ ಜೈಶಂಕರ್‌ ಚಾಟಿ

1-wq-ewqew

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ ಕೋಲ್ಕತಾ ನೈಟ್‌ರೈಡರ್:ಪ್ಲೇ ಆಫ್ ತೇರ್ಗಡೆಗೆ ಹೋರಾಟ

Pak 2

Pakistan; ಈಗ ಯೋಗ ತರಬೇತಿ ಅಧಿಕೃತವಾಗಿ ಆರಂಭ

voter

Lok Sabha Election 3ನೇ ಹಂತ: ಬಹಿರಂಗ ಪ್ರಚಾರ ಇಂದು ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.