ಬಾಕಿ ಸ್ಯಾಂಪಲ್ ಟೆಸ್ಟ್ ಪ್ರಕ್ರಿಯೆ ತೀವ್ರಗೊಳಿಸಿ
Team Udayavani, Jun 6, 2020, 6:12 AM IST
ಬೀದರ: ದಿನಕ್ಕೆ 500ರಷ್ಟು ನಡೆಯುವಂತೆ ಸ್ಯಾಂಪಲ್ ಟೆಸ್ಟ್ ಪ್ರಕ್ರಿಯೆ ತೀವ್ರಗೊಳಿಸಿ ಮುಂಬರುವ ಮೂರು ದಿನಗಳಲ್ಲಿ ಬಾಕಿ ಇರುವುದನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಡಿಎಚ್ಒ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿಗಳಿಗೆ ಗಡುವು ವಿಧಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ಕೋವಿಡ್-19 ನಿರ್ವಹಣೆಗಾಗಿ ಎನ್ಎಚ್ಎಂ ಮೂಲಕ ಒದಗಿಸಿದ ಹಣದ ಖರ್ಚು ವೆಚ್ಚದ ವಿವರವನ್ನು ವೈದ್ಯಾಧಿಕಾರಿಗಳು ಸರಿಯಾಗಿ ಒದಗಿಸಬೇಕು. ಯಾವುದೇ ಕಪ್ಪುಚುಕ್ಕೆಯಿಲ್ಲದೇ ಹಾಗೆ ಕೆಲಸ ನಿರ್ವಹಿಸಿದಾಗಲೇ ನಾವು ಹಾಕುವ ಶ್ರಮಕ್ಕೆ ಬೆಲೆ ಬರುತ್ತದೆ. ಜೈವಿಕ ತ್ಯಾಜ್ಯ ನಿರ್ಹಹಣೆ ಕೂಡ ನಿಯಮಾನುಸಾರವೇ ನಡೆಯಬೇಕು. ಈ ವಿಷಯದಲ್ಲಿ ಯಾರಾದರು ನಿರ್ಲಕ್ಷ್ಯ ವಹಿಸಿದಲ್ಲಿ ಮುಲಾಜಿಲ್ಲದೇ ಅಮಾನತು ಮಾಡಿ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಜೂನ್ 5ರ ವರೆಗೆ 28,120 ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. ಸೋಂಕಿತರ ಸಂಖ್ಯೆ 214 ಇದ್ದು, ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 97 ಇದೆ. ಐವರು ಮೃತಪಟ್ಟಿದ್ದಾರೆ. ಪ್ರತಿ ದಿನ ಎಲ್ಲ ತಾಲೂಕುಗಳಿಂದ ತಲಾ 50 ರಷ್ಟು ಸ್ಯಾಂಪಲ್ ಟೆಸ್ಟ್ ಮಾಡಲಾಗುತ್ತಿದೆ ಎಂದು ಜಿಲ್ಲಾ ಕಣ್ಗಾವಲು ಘಟಕದ ಅಧಿಕಾರಿ ಡಾ|ಕೃಷ್ಣಾ ರೆಡ್ಡಿ ಹೇಳಿದರು.
ಇದುವರೆಗಿನ ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಶೇ. 62ರಷ್ಟು, ಪ್ರçಮರಿ ಸಂಪರ್ಕದಿಂದ ಶೇ.33ರಷ್ಟು, ಸೆಕೆಂಡರಿ ಸಂಪರ್ಕದಿಂದ ಇಬ್ಬರಿಗೆ, ದೆಹಲಿಯಿಂದ ಬಂದವರು ಮತ್ತು ಇನ್ನಿತರ ಸೇರಿ 214 ಜನರಲ್ಲಿ ಸೋಂಕು ಪತ್ತೆಯಾಗಿರುವುದನ್ನು ಗುರುತಿಸಲಾಗಿದೆ. ಅತೀ ಹೆಚ್ಚು ಕೋವಿಡ್-19 ಪ್ರಕರಣಗಳು ಬೀದರ ಹಾಗೂ ಬಸವಕಲ್ಯಾಣ ತಾಲೂಕಿನಿಂದ ವರದಿಯಾಗಿವೆ. 31 ವಯಸ್ಸಿನ ಒಳಗಿನವರಿಗೆ ಶೇ.50ರಷ್ಟು ಮತ್ತು ಮೇಲಿನವರಿಗೆ ಶೇ.50ರಷ್ಟು ಸೋಂಕು ಹರಡಿದೆ ಎಂದು ವೈದ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕೋವಿಡ್-19ಗಾಗಿ ಸರ್ಕಾರ ಒದಗಿಸಿದ ಎನ್ಡಿಆರ್ಎಫ್ ಹಣ ಬಳಕೆ ಬಗ್ಗೆ ಗ್ರಾಮ ಲೆಕ್ಕಿಗರು, ಪಿಡಿಒ ದೃಢೀಕರಣ ಮಾಡಿಸಿ ಎಲ್ಲ ತಹಶೀಲ್ದಾರರಿಂದ ಪ್ರತಿವಾರ ಮಾಹಿತಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರಿಗೆ ಸೂಚಿಸಿದರು. ಜಿಲ್ಲೆಯಲ್ಲಿನ ಸೋಂಕಿತ ಪ್ರಕರಣಗಳು, ಚಿಕಿತ್ಸೆ, ಸ್ಯಾಂಪಲ್ ಟೆಸ್ಟ್, ವಿಶೇಷ ವಾರ್ಡುಗಳು, ಬಿಡುಗಡೆಯಾದ ಅನುದಾನ ಬಳಕೆ ಸೇರಿದಂತೆ ಹಲವಾರು ಮಾಹಿತಿ ಪಡೆದರು.
ಜಿಲ್ಲೆಯಲ್ಲಿ 53 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 8 ಸಮುದಾಯ ಆರೋಗ್ಯ ಕೇಂದ್ರಗಳು, ನಾಲ್ಕು ತಾಲೂಕು ಆಸ್ಪತ್ರೆಗಳು, ಬೀದರನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿವೆ. 34 ಅಂಬ್ಯುಲೆನ್ಸ್, 108 ವಾಹನಗಳು 19 ಇವೆ. ಭಾಲ್ಕಿ ಮತ್ತು ಬಸವಕಲ್ಯಾಣದಲ್ಲಿ ತಲಾ 50, ಔರಾದ ಮತ್ತು ಮನ್ನಾಏಖೆಳ್ಳಿನಲ್ಲಿ ತಲಾ 20, ಜಿಲ್ಲೆಯ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 5 ಕೊವಿಡ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಹುಮನಾಬಾದ ತಾಲೂಕು ಆಸ್ಪತ್ರೆಯಲ್ಲೂ 50 ಕೋವಿಡ್ ಬೆಡ್ಗೆ ವ್ಯವಸ್ಥೆ ಮಾಡಲಾಗುತ್ತಿದೆ. 19 ಐಸಿಯು ಬೆಡ್ಸ್, 7 ವೆಂಟಿಲೇಟರ್ಸ್, 51 ವಿಶೇಷ ವೈದ್ಯರಿದ್ದಾರೆ. ಪಿಎಚ್ ಸಿ, ಸಿಎಚ್
ಸಿ, ತಾಲೂಕಾಸ್ಪತ್ರೆ ಸೇರಿದಂತೆ ಇದುವರೆಗೆ 279 ಕೋವಿಡ್-19 ವಿಶೇಷ ಬೆಡ್ ಗಳನ್ನು ಹಾಕಲಾಗಿದೆ. ಈ ಪೈಕಿ 95 ಬೆಡ್ ಗಳಿಗೆ ಆಕ್ಸಿಜನ್ ಸಂಪರ್ಕವಿದೆ. 6 ಜನ ಸ್ಪೆಸಿಯಾಲಿಸ್ಟ್, 55 ಜನ ಎಂಬಿಬಿಎಸ್ ರೆಸಿಡೆಂಟ್ಸ್, 20 ಜನ ಟೆಕ್ನಿಷಿಯನ್, 65 ಹೆಲ್ಪರ್ಸ್, 79 ಸ್ಟಾಪ್ ನರ್ಸ ಕೆಲಸ ಮಾಡುತ್ತಿದ್ದಾರೆ ಎಂದು ಡಿಎಚ್ಒ ಡಾ|ವಿ.ಜಿ. ರೆಡ್ಡಿ ಸಭೆಗೆ ಮಾಹಿತಿ ನೀಡಿದರು.
ಬ್ರಿಮ್ಸ್ನಲ್ಲಿನ ಕೋವಿಡ್ -19 ಹಾಸ್ಪಿಟಲ್ ನಲ್ಲಿ ಪಿಜಿಸಿಯನ್ 3, ಅನೇಸ್ತàಟಿಸ್ಟ್ 2, ಚೆಸ್ಟ್ ಪಿಜಿಸಿಯನ್ 2, ಪಿಜಿಸಿಯನ್ 3, ಡಿಇಒ 6, ಡ್ನೂಟಿ ಡಾಕ್ಟರ್ 8, ಕೋ ಅರ್ಡಿನೇಟರ್-2, ನರ್ಸಿಂಗ್ ಸ್ಟಾಪ್ 63, ಸೆಕ್ಯುರಿಟಿ ಗಾರ್ಡ್ 24, ಗ್ರೂಪ್ ಡಿ 21 ಇದ್ದಾರೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಎಸಿ ಅಕ್ಷಯಶ್ರೀಧರ, ಬ್ರಿಮ್ಸ್ ನಿರ್ದೇಶಕ ಡಾ| ಶಿವಕುಮಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ರತಿಕಾಂತ ಸ್ವಾಮಿ, ಡಾ| ಇಂದುಮತಿ ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು
Bidar; ಯುವಕರ ಬದುಕು ಹಾಳು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ
ಏ… ಇದು ನನ್ ಸೀಟು… ಇಲ್ಲ ನನ್ ಸೀಟು: ಬಸ್ಸಿನೊಳಗೆ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು
Bidar: ಕಳ್ಳತನವಾಗಿದ್ದ 52 ಮೊಬೈಲ್ ಗಳನ್ನು ಪತ್ತೆ ಮಾಡಿದ ಜಿಲ್ಲಾ ಪೊಲೀಸ್
Bidar; 15 ಕೋಟಿ ರೂ. ಮೌಲ್ಯದ ಗಾಂಜಾ ಪೊಲೀಸರಿಂದ ಜಪ್ತಿ: ಇಬ್ಬರ ಬಂಧನ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್