ಸಿಎಂ ನಿಧಿಗೆ ಬಾಲಕಿಯ ದೇಣಿಗೆ
Team Udayavani, Jun 9, 2020, 5:56 AM IST
ಕಾಸರಗೋಡು: ನೂತನ ಶೈಕ್ಷಣಿಕ ವರ್ಷದಲ್ಲಿ ಶಾಲಾ ನೂತನ ಸಮವಸ್ತ್ರ ಖರೀದಿಗಾಗಿ ತೆಗೆದಿರಿಸಿದ್ದ ಮೊಬಲಗನ್ನು ಮುಖ್ಯಮಂತ್ರಿ ದುರಂತ ನಿವಾರಣೆ ನಿಧಿಗೆ ಹಸ್ತಾಂತರಿಸುವ ಮೂಲಕ ಮೂರೂವರೆ ವರ್ಷ ಪ್ರಾಯದ ಬಾಲಕಿ ಮಾದರಿಯಾಗಿದ್ದಾಳೆ. ಬದಿಯಡ್ಕ ನಿವಾಸಿ, ಜಿಲ್ಲಾ ಕ್ರೀಡಾ ಮಂಡಳಿ ಸಿಬಂದಿ ಕುಂಞಿಕೃಷ್ಣನ್ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್ ರಜಿತಾ ಅವರ ಪುತ್ರಿ ದಕ್ಷಾ ಈ ರೀತಿ ಮಾದರಿಯಾದವಳು.
ಈಕೆ ಈ ಬಾರಿ ಎಲ್.ಕೆ.ಜಿ.ಗೆ ಪ್ರವೇಶಾತಿ ನಡೆಸಲು ಸಿದ್ಧತೆ ನಡೆಸಿದ್ದಳು. ನೂತನ ಸಮವಸ್ತ್ರ ಖರೀದಿಗಾಗಿ ಮೂರು ತಿಂಗಳಿಂದ ಈಕೆ ಕೊಂಚ ಕೊಂಚವಾಗಿ ಸಂಗ್ರಹಿಸಿರಿಸಿದ್ದ ಮೊಬಲಗನ್ನು ನೀಡಿದ್ದಾಳೆ. ಜಿಲ್ಲಾಧಿಕಾರಿ ಡಾಣ ಡಿ. ಸಜಿತ್ ಬಾಬು ನಿಧಿ ಪಡೆದು ಕೊಂಡಿದ್ದಾರೆ.