ನಿವೇಶನಕ್ಕೆ ಕಾಯುತ್ತಿವೆ 7 ಸಾವಿರಕ್ಕೂ ಅಧಿಕ ಅರ್ಜಿ!

ಪುತ್ತೂರು-ಸುಳ್ಯ ನಗರದಲ್ಲಿ ಖಾಲಿ ಜಾಗದ ಕೊರತೆ

Team Udayavani, Jun 11, 2020, 6:14 AM IST

ನಿವೇಶನಕ್ಕೆ ಕಾಯುತ್ತಿವೆ 7 ಸಾವಿರಕ್ಕೂ ಅಧಿಕ ಅರ್ಜಿ!

ವಿಶೇಷ ವರದಿ-ಪುತ್ತೂರು/ಸುಳ್ಯ: ಮನೆ ಕಟ್ಟಿಕೊಳ್ಳಲು ನಿವೇಶನಕ್ಕಾಗಿ ಪುತ್ತೂರು ಮತ್ತು ಸುಳ್ಯ ನಗರ ಸ್ಥಳೀಯಾಡಳಿತಕ್ಕೆ ಸಲ್ಲಿಕೆಯಾದ ಅರ್ಜಿಗಳ ಒಟ್ಟು ಸಂಖ್ಯೆ ಬರೋಬ್ಬರಿ ಏಳು ಸಾವಿರಕ್ಕೂ ಅಧಿಕವಿದೆ.

ದಿನೇ ದಿನೇ ಬೆಳವಣಿಗೆ ಹೊಂದು ತ್ತಿರುವ ಉಭಯ ತಾಲೂಕುಗಳ ನಗರ ಪ್ರದೇಶಗಳಲ್ಲಿ ನಿವೇಶನ ರಹಿತರ ಪಟ್ಟಿಯು ವೃದ್ಧಿಯಾಗುತ್ತಿದ್ದು, ನಿವೇಶನ ಒದಗಿ ಸಲು ಜಾಗವೇ ಇಲ್ಲ ಎಂದು ಸ್ಥಳೀಯಾ ಡಳಿತಗಳು ಕೈಚೆಲ್ಲಿ ಕುಳಿತಿವೆ.

ಪುತ್ತೂರು ನಗರಸಭೆ
ಜಿಲ್ಲಾ ಕೇಂದ್ರವಾಗುವ ಅರ್ಹತೆ ಹೊಂದಿರುವ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ 3,500ಕ್ಕೂ ಮಿಕ್ಕ ಜನರು ನಿವೇಶನ ನೀಡುವಂತೆ ಅರ್ಜಿ ಸಲ್ಲಿಸಿ ದ್ದಾರೆ. ಹಲವು ವರ್ಷಗಳಿಂದ ಅರ್ಜಿ ವಿಲೇವಾರಿ ಆಗಿಲ್ಲ. ಕಾರಣ ನಗರ ದಲ್ಲಿ ಖಾಲಿ ಜಮೀನು ಲಭ್ಯವಿಲ್ಲ ಎನ್ನುವುದು. ಪ್ರಸ್ತುತ ಕೊಡಿಮರ ಬಳಿ 1 ಎಕ್ರೆ ಜಾಗ ಇದ್ದು ಇದನ್ನು ನಿವೇಶನ ರಹಿತರಿಗೆ ನೀಡುವ ನಿಟ್ಟಿನಲ್ಲಿ ಭೂ ಸಮ ತಟ್ಟು ಮಾಡಲಾಗುತ್ತಿದೆ. ಬೇರೆ ಕಡೆ ಗಳಲ್ಲಿ ಸೂಕ್ತ ಜಾಗವಿಲ್ಲ. 3,500 ಅರ್ಜಿ ಗಳ ಪೈಕಿ 2,500ರಷ್ಟು ಅರ್ಹ ಫಲಾನುಭವಿಗಳಿದ್ದರೂ ಅವರಿಗೆ ನೀಡಲು 1 ಎಕ್ರೆ ಸಾಲದು. ಹೀಗಾಗಿ ಹಂಚಿಕೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸುಳ್ಯ ನಗರ ಪಂಚಾಯತ್‌
ಸುಳ್ಯ ನಗರ ಪಂಚಾಯತ್‌ ವ್ಯಾಪ್ತಿ ಯಲ್ಲೂ 3 ಸಾವಿರಕ್ಕೂ ಮಿಕ್ಕಿ ಅರ್ಜಿ ಸಲ್ಲಿಕೆ ಆಗಿವೆ. ಈಗಲೂ ಅರ್ಜಿ ಸಲ್ಲಿಕೆ ಆಗುತ್ತಿದೆ ಹೊರತು ವಿಲೇವಾರಿಯಾಗುತ್ತಿಲ್ಲ. ಇಲ್ಲೂ ಜಾಗದ ಕೊರತೆ ಎನ್ನುವ ಸಬೂಬು ಇದೆ. ಆದರೆ ಜಾಗ ಇದ್ದು ಒತ್ತುವರಿ ಆಗಿದೆ ಎನ್ನುವುದು ನ.ಪಂ.ನ ಕೆಲವು ಸದಸ್ಯರ ಆರೋಪ. ಪರ್ಯಾಯ ವ್ಯವಸ್ಥೆ ಕೂಡ ಇಲ್ಲಿ ಗಗನಕುಸುಮವಾಗಿದೆ.

ಖಾಸಗಿ ಜಾಗ ಖರೀದಿಗೆ ಸರಕಾರಿ ಮೌಲ್ಯ ಸಾಲದು!
ಸರಕಾರಿ ಜಾಗವಿಲ್ಲದಿದ್ದರೆ ನಗರ ವ್ಯಾಪ್ತಿಯ ಗಡಿ ಗ್ರಾಮಗಳಲ್ಲಿ ಅಥವಾ ನಗರ ದೊಳಗೆ ಖಾಸಗಿ ಜಾಗ ಖರೀದಿ ಸಲು ಸರಕಾರ ಅವಕಾಶ ನೀಡಿದೆ. ಆದರೆ ಜಾಗದ ಸರಕಾರಿ ಮಾರುಕಟ್ಟೆ ಮೌಲ್ಯ ತೀರಾ ಕಡಿಮೆ ಇರುವ ಕಾರಣ ಆ ಮೊತ್ತಕ್ಕೆ ಯಾರೂ ಕೂಡ ಜಾಗ ನೀಡುತ್ತಿಲ್ಲ. ಮೌಲ್ಯ ಹೆಚ್ಚಿಸುವ ಮನವಿಗೂ ಸ್ಪಂದನೆ ಸಿಗುತ್ತಿಲ್ಲ. ಹಾಗಾಗಿ ಖಾಸಗಿ ಜಾಗ ಖರೀದಿ ಕೂಡ ನನೆಗುದಿಗೆ ಬಿದ್ದಿದೆ.

ಫ್ಲ್ಯಾಟ್‌ ಮಾದರಿ ಚಿಂತನೆ
ನಿವೇಶನ ಕೊರತೆಗೆ ಪರ್ಯಾಯವಾಗಿ ಫ್ಲ್ಯಾಟ್‌ ಮಾದರಿಯಲ್ಲಿ ಮನೆ ನಿರ್ಮಿಸಿ ನೀಡುವ ಚಿಂತನೆ ಕೂಡ ಉಭಯ ತಾಲೂಕುಗಳ ಸ್ಥಳೀಯಾಡಳಿತದ್ದು. ಬಹು ಮಹಡಿಯ ಕಟ್ಟಡದಲ್ಲಿ ವಸತಿಗೃಹ ನಿರ್ಮಿಸಿ ಹಂಚಿಕೆ ಮಾಡಿದರೆ ನಿವೇ ಶನದ ಅಗತ್ಯ ಉದ್ಭವಿಸುವುದಿಲ್ಲ. ಒಂದೇ ಕಡೆ ಹಲವು ಅರ್ಜಿದಾರರಿಗೆ ಮನೆ ಒದಗಿಸಬಹುದು. ಆದರೆ 7,000ಕ್ಕೂ ಮಿಕ್ಕಿ ಮಂದಿಗೆ ಫ್ಲ್ಯಾಟ್‌ ನಿರ್ಮಾ ಣಕ್ಕೆ ಕೋಟ್ಯಂತರ ರೂ. ಅನು ದಾನದ ಅಗತ್ಯವೂ ಇದೆ. ಅದನ್ನು ಹೊಂದಿ ಸಿದ ಬಳಿಕವಷ್ಟೇ ಯೋಜನೆ ರೂಪಿಸಬಹುದಾಗಿದೆ.

1 ಎಕ್ರೆ ಜಾಗ ಸಮತಟ್ಟು
2,500ಕ್ಕೂ ಮಿಕ್ಕಿ ಜನರಿಗೆ ನಿವೇಶನ ಅಗತ್ಯ ಇದೆ. ನಗರದಲ್ಲಿ ನಿವೇಶನಕ್ಕೆ ಸೂಕ್ತ ಜಾಗ ಇಲ್ಲ. ಜಾಗ ಒದಗಿಸಲು ಕಂದಾಯ ಇಲಾಖೆಗೆ ಮನವಿ ಮಾಡಲಾಗಿದೆ. ಪ್ರಸ್ತುತ ಕೊಡಿಮರದಲ್ಲಿ 1 ಎಕ್ರೆ ಜಾಗ ಇದ್ದು ಭೂ ಸಮತಟ್ಟು ಪ್ರಗತಿಯಲ್ಲಿದೆ.
– ರೂಪಾ ಶೆಟ್ಟಿ, ಪೌರಾಯುಕ್ತೆ, ನಗರಸಭೆ ಪುತ್ತೂರು

ಟಾಪ್ ನ್ಯೂಸ್

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.