ಭಾರತದ ಭೂಪ್ರದೇಶಗಳಿಗೆ ನೇಪಾಲ ಕ್ಯಾತೆ
Team Udayavani, Jun 12, 2020, 8:54 AM IST
ಕಾಠ್ಮಂಡು: ಭಾರತವು ಕಾಳಿ ನದಿಯ ಗಡಿಯನ್ನು ಕೃತಕವಾಗಿ ಸೇರಿಸಿಕೊಂಡಿದೆ ಎಂದು ಆರೋಪಿಸಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ಭಾರತ ಅತಿಕ್ರಮಿಸಿಕೊಂಡಿರುವ ಕಾಲಾಪಾನಿ, ಲಿಪುಲೇಕ್ ಮತ್ತು ಲಿಂಪಿಯಾ ಧುರಾಗಳನ್ನು ನೇಪಾಳ ಪುನಃ ಪಡೆದುಕೊಳ್ಳಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಸಂಸತ್ನಲ್ಲಿ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಒಲಿ, “ಭಾರತವು ಹಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ. ಕಾಳಿ ನದಿಯ ಗಡಿಯನ್ನೂ ತನ್ನದೇ ಎಂದು ಹೇಳಿಕೊಂಡು, ಸೇನೆ ನಿಯೋಜಿಸಿದೆ. ಗಡಿಯುದ್ದಕ್ಕೂ ಅಣೆಕಟ್ಟುಗಳನ್ನು ನಿರ್ಮಿಸಿ, ನೇಪಾಳದ ಅನೇಕ ಭೂಭಾಗಗಳನ್ನು ಮುಳುಗಡೆ ಮಾಡಿದೆ. ಈ ಬಗ್ಗೆ ಭಾರತಕ್ಕೆ ಸಾಕಷ್ಟು ಬಾರಿ ಎಚ್ಚರಿಸಿದ್ದೇವೆ. ನೆರೆರಾಷ್ಟ್ರದ ಇಂಥ ವರ್ತನೆಗಳನ್ನು ಸಹಿಸಿಕೊಳ್ಳಲಾಗು ವುದಿಲ್ಲ’ ಎಂದು ಹೇಳಿದ್ದಾರೆ.
ಯೋಗಿಗೆ ಪ್ರತ್ಯುತ್ತರ: “ಟಿಬೆಟ್ ಮಾಡಿದ ತಪ್ಪನ್ನು ನೇಪಾಳ ಪುನರಾವರ್ತಿಸಬಾರದು. ಟಿಬೆಟ್ಗೆ ಈಗ ಏನಾಗಿದೆ ಎಂಬುದನ್ನು ನೋಡಿಕೊಳ್ಳಿ’ ಎಂದು ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದರು. ಇದಕ್ಕೆ ಪ್ರತ್ಯುತ್ತರಿಸಿದ ಒಲಿ, “ನಿಮ್ಮ ಮಾತುಗಳು ನ್ಯಾಯ ಸಮ್ಮತವಲ್ಲ. ಕೇಂದ್ರ ಸರಕಾರದಲ್ಲಿನ ಜವಾಬ್ದಾರಿಯುತ ಸ್ಥಾನದಲ್ಲೂ ನೀವಿಲ್ಲ. ಕೇವಲ ಸಿಎಂ ಆಗಿದ್ದುಕೊಂಡು ನೇಪಾಳಕ್ಕೆ ಬೆದರಿಕೆ ಹಾಕಲು ಬರಬಾರದು’ ಎಂದು ಟೀಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ