ವಿಶ್ವನಾಥ್ ಕೈ ಬಿಡಲ್ಲ, ಶೀಘ್ರ ಸೂಕ್ತ ಸ್ಥಾನಮಾನ: ಶೆಟ್ಟರ್
Team Udayavani, Jun 19, 2020, 6:31 AM IST
ಕೊಪ್ಪಳ: ಎಚ್.ವಿಶ್ವನಾಥ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷ ಸೂಕ್ತ ಸ್ಥಾನಮಾನ ಕೊಟ್ಟು ಗೌರವಿಸಲಿದೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, “ರಾಜ್ಯ ಕೋರ್ ಕಮಿಟಿಯಿಂದ ಹಲವರ ಹೆಸರು ಸೇರಿದಂತೆ ವಿಶ್ವನಾಥ ಹೆಸರೂ ಚರ್ಚೆಗೆ ಬಂದಿದ್ದವು. ಹೈಕಮಾಂಡ್ ಒಂದು ವಿಚಾರದಲ್ಲಿ ನಿರ್ಧಾರ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಆ ಅಭ್ಯರ್ಥಿಗಳನ್ನು ನಾವು ಒಪ್ಪಲಿದ್ದೇವೆ. ವಿಶ್ವನಾಥ್ ನಮ್ಮನ್ನು ಬೆಂಬಲಿಸಿ ಬಂದಿದ್ದಾರೆ. ಪಕ್ಷ ಅವರನ್ನು ಎಂದೂ ಕೈ ಬಿಡುವುದಿಲ್ಲ.
ಅವರಿಗೆ ಸೂಕ್ತ ಗೌರವ ಸಿಗಲಿದೆ. ಹೈಕಮಾಂಡ್ ಮಟ್ಟದಲ್ಲಿ ಏನು ನಡೆದಿದೆ ಎನ್ನುವ ವಿಚಾರವನ್ನು ನಾನು ಬಹಿರಂಗವಾಗಿ ಹೇಳಲು ಇಚ್ಛಿಸುವುದಿಲ್ಲ. ಪಕ್ಷ ಒಂದು ನಿರ್ಧಾರ ಕೈಗೊಂಡಿದೆ ಎಂದರೆ ನಾವು ಅದನ್ನು ಒಪ್ಪಲಿದ್ದೇವೆ’ ಎಂದರು. ರಾಜ್ಯಾದ್ಯಂತ ಇರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದಿರುವುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಸರ್ವೇ ನಡೆಸಿ ಪರಿಶೀಲಿಸಲಿದ್ದೇನೆ. ಹೊಸ ಕೈಗಾರಿಕೆ ನೀತಿಯಲ್ಲೂ ಈ ಅಂಶ ಪರಿಗಣಿಸಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎನ್ನುವ ಅಂಶ ಸೇರ್ಪಡೆಯಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ