ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ನಮ್ಮ ಅಸಮಾಧಾನ: ಯತ್ನಾಳ್
Team Udayavani, Jun 19, 2020, 1:22 PM IST
ಬೆಂಗಳೂರು: ನಾನು ಬಿ ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಆಗಲ್ಲ. ಯಾವಾಗ ಬಗ್ಗಬೇಕು ಆಗ ಬಗ್ಗುತ್ತೇನೆ. ಯಾವಾಗ ಸಿಡಿದೇಳಬೇಕು ಆಗ ಸಿಡಿದೇಳುತ್ತೇನೆ. ಈಗ ನಾನು ತಲೆ ಬಗ್ಗಿಸಿದ್ದೇನೆಂದರೆ ಒಳ್ಳೆಯದಾಗುತ್ತೆ ಅಂತಾ ಅರ್ಥ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ನಮ್ಮ ಅಸಮಾಧಾನ ಇರುವುದು. ನಾನು ಮೃದುವಾಗಿದ್ದೇನೆ ಅಂದು ಅನ್ಕೊಳ್ಳೋದು ಬೇಡ ಎಂದರು.
ಅಧಿಕಾರಿಗಳ ವರ್ಗಾವಣೆ ಬಗ್ಗೆ ಚರ್ಚೆ ಮಾಡಿದ್ದು ನಿಜ ಎಂದ ಅವರು, ಕ್ಷೇತ್ರದ ಅನುದಾನದ ಬಗ್ಗೆ ಅಸಮಾಧಾನ ಇದೆ. ಆದರೆ ಮುಖ್ಯಮಂತ್ರಿಗಳು ಕೋವಿಡ್-19 ನಿಯಂತ್ರಣದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಬೇಕು ಅಂದು ಅಧ್ಯಕ್ಷರನ್ನು ಕೇಳಿದ್ದೇವೆ ಎಂದರು.