ಕೋವಿಡ್-19 ಚಿಕಿತ್ಸೆ: ಖಾಸಗಿ ಆಸ್ಪತ್ರೆಗಳ ದರ: ತಜ್ಞರ ಸಮಿತಿ ಪರಿಷ್ಕರಣೆ
Team Udayavani, Jun 20, 2020, 6:20 AM IST
ಬೆಂಗಳೂರು: ಕೋವಿಡ್ 19ರ ಚಿಕಿತ್ಸೆ ದರ ನಿಗದಿ ಕುರಿತು ಖಾಸಗಿ ಆಸ್ಪತ್ರೆಗಳು ಸಲ್ಲಿಸಿದ್ದ ಬೇಡಿಕೆ ದರಗಳನ್ನು ಸರಕಾರ ರಚಿಸಿದ್ದ ಎಂಟು ಜನರ ಸಮಿತಿ ಪರಿಷ್ಕರಿಸಿದ್ದು, ಈ ಕುರಿತು ಮುಂದಿನ ಸಚಿವ ಸಂಪುಟದ ಮುಂದೆ ಮಂಡಿಸಿ ಅನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ (ಎಬಿ-ಎಆರ್ಕೆ) ಫಲಾನು ಭವಿಗಳಿಗೆ ಸಾಮಾನ್ಯ ವಾರ್ಡ್ಗೆ ದಿನಕ್ಕೆ 5,200 ರೂ. ಆಕ್ಸಿಜನ್ವುಳ್ಳ ವಾರ್ಡ್ಗೆ 7,000 ರೂ., ಐಸಿಯು ವಾರ್ಡ್ಗೆ 8,500 ರೂ., ಐಸಿಯು ಜತೆಗೆ ವೆಂಟಿಲೇಟರ್ವುಳ್ಳ ವಾರ್ಡ್ಗೆ 10,000 ರೂ. ನಿಗದಿ ಮಾಡಿದೆ.
ಹಾಗೆಯೇ ನಗದು ಪಾವತಿಸುವ ಮತ್ತು ವಿಮೆ ಯೋಜನೆಗಳಡಿ ಚಿಕಿತ್ಸೆ ಪಡೆಯುವವರಿಗೆ ಸಾಮಾನ್ಯ ವಾರ್ಡ್ಗೆ 10,000 ರೂ., ಆಕ್ಸಿಜನ್ ಸಹಿತ ವಾರ್ಡ್ಗೆ 12,000 ರೂ., ಐಸಿಯು ವಾರ್ಡ್ಗೆ 15,000ರೂ., ಐಸಿಯು ಜತೆ ವೆಂಟಿಲೇಟರ್ ಇದ್ದರೆ 25,000 ರೂ. ನಿಗದಿ ಮಾಡಿದೆ. ಇಲಾಖೆ ವತಿಯಿಂದ ಸೋಂಕು ಪರೀಕ್ಷೆಗೊಳಗಾದರೆ ಉಚಿತ ವಿದೆ. ಆದರೆ ಖಾಸಗಿಯಲ್ಲಿ 2,600 ರೂ. ದರ ನಿಗದಿ ಮಾಡಲು ಪ್ರಸ್ತಾವಿಸ ಲಾಗಿದ್ದು, ಇದಕ್ಕೆ ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ಸೂಚಿಸಿಲ್ಲ. 4,000 ರೂ. ಮೇಲ್ಪಟ್ಟು ದರ ನಿಗದಿಗೆ ಪಟ್ಟು ಹಿಡಿದಿವೆ. ಈ ಬಗ್ಗೆಯೂ ಸಂಪುಟದಲ್ಲಿ ತೀರ್ಮಾನಿಸ ಲಾಗುವುದು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
MUST WATCH
ಹೊಸ ಸೇರ್ಪಡೆ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ