ಜುಲೈ 1ರಂದು ಶ್ರೀ ಕೃಷ್ಣ ಮಠದಲ್ಲಿ ಯತಿವರ್ಯರಿಗೆ ಮಾತ್ರ ನಡೆಯಲಿದೆ ತಪ್ತಮುದ್ರಾಧಾರಣೆ
Team Udayavani, Jun 24, 2020, 1:04 PM IST
ಉಡುಪಿ ; ಈ ಬಾರಿ ಜುಲೈ 1ರಂದು ಆಷಾಢ ಶುದ್ಧ ಏಕಾದಶಿಯಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಯತಿವರ್ಯರಿಗೆ ಮಾತ್ರ ತಪ್ತಮುದ್ರಾಧಾರಣೆ ನಡೆಯಲಿದೆ ಎಂದು ಪರ್ಯಾಯ ಶ್ರೀ ಅದಮಾರು ಮಠದ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರೀಯ ಶ್ರೀಪಾದರು ತಿಳಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಶ್ರೀಪಾದರು ಸಾರ್ವಜನಿಕರಿಗಾಗಿ ಮುಂದಿನ ಯಾವುದಾದರು ಒಂದು ಶುಭ ದಿನದಂದು ಮುದ್ರಾ ಧಾರಣೆಯನ್ನು ನಡೆಸುವುದಾಗಿ ಹೇಳಿದರು.
ಜೂನ್ 30 ರಂದು ಶ್ರೀ ಕೃಷ್ಣ ಮಠದಲ್ಲಿ ದೇವರಿಗೆ ಎಂದಿನಂತೆ ವಾರ್ಷಿಕವಾಗಿ ಮಹಾಭಿಷೇಕ( ಸಿಯಾಳ ಅಭಿಷೇಕ ) ಜರುಗಲಿದ್ದು ಆದರೆ ಕೋವಿಡ್ 19 ಸೋಂಕಿನಿಂದಾಗಿ ಭಕ್ತರಿಗೆ ಮಠಕ್ಕೆ ಪ್ರವೇಶ ಇಲ್ಲವಾಗಿದ್ದರಿಂದ, ದೇವರಿಗೆ ಅಭಿಷೇಕ ಮಾಡಲು ಸಿಯಾಳ ನೀಡುವ ಭಕ್ತರು ಜೂನ್ 28ರ ಸಂಜೆ ಒಳಗೆ ರಾಜಾಂಗಣದ ಉತ್ತರ ದ್ವಾರದ ಬಳಿ ನೀಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ