ಮಂಗಳೂರು: ಪತ್ನಿಯನ್ನು ಮಾರಕಾಯುಧಗಳಿಂದ ಕಡಿದು ಬರ್ಬರ ಹತ್ಯೆಗೈದ ಪತಿ
Team Udayavani, Jul 3, 2020, 12:33 PM IST
ಮಂಗಳೂರು: ಪತಿ- ಪತ್ನಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಭೀಕರ ಘಟನೆ ಮಂಗಳೂರಿನ ಕಾವೂರಿನಲ್ಲಿ ನಡೆದಿದೆ.
ಕಾವೂರು ನಿವಾಸಿ ಶಾಂತಾ ಮಣಿಯಾನಿ (40) ಹತ್ಯೆಗೀಡಾದ ಮಹಿಳೆ. ಈಕೆಯ ಗಂಡ ಕೊಲೆಗೈದ ಆರೋಪಿಯಾಗಿದ್ದು, ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ಆರೋಪಿ ಗಂಡ ಉತ್ತರ ಕನ್ನಡ ಮೂಲದವನಾಗಿದ್ದು, ಪತಿ ಪತ್ನಿಯಲ್ಲಿ ಜಗಳ ಉಂಟಾಗಿ ಸಿಟ್ಟಿನಿಂದ ಹೆಂಡತಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಹತ್ಯೆ ನಡೆಸಿದ ಬಳಿಕ ತಾನೇ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಘಟನಾ ಸ್ಥಳಕ್ಕೆ ಕಾವೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.