ನನ್ನಿಷ್ಟದ ಸಿನೆಮಾ ಯುವ ಜನರ ಆಯ್ಕೆ: ಮನಕಲುಕಿದ ‘ವಿಕೃತಿ’


Team Udayavani, Jul 3, 2020, 9:18 PM IST

ನನ್ನಿಷ್ಟದ ಸಿನೆಮಾ ಯುವ ಜನರ ಆಯ್ಕೆ: ಮನಕಲುಕಿದ ‘ವಿಕೃತಿ’

‘ಕಟ್‌ ಟು ಕ್ರಿಯೇಟ್‌’ ಕಂಪೆನಿ ನಿರ್ಮಿಸಿರುವ ‘ವಿಕೃತಿ’ ಚಿತ್ರ 2019ರಲ್ಲಿ ಬಿಡುಗಡೆಯಾದದ್ದು. ಸೂರಜ್‌ ವೆಂಜರಮೂದು ಹಾಗೂ ಸೌಬೀನ್ ಶಹೀರ್‌ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದಾರೆ. ಎಮ್ಸಿ ಜೋಸೆಫ್‌ರ ಮೊದಲ ಚಲನಚಿತ್ರವಿದು. ಈ ಚಿತ್ರದಲ್ಲಿ ಮಲಯಾಳ ಭಾಷೆಯ ಇಬ್ಬರು ಒಳ್ಳೆಯ ನಟರು ಅಭಿನಯಿಸಿರುವುದು ವಿಶೇಷ. ಸಣ್ಣ ಎಳೆಯನ್ನು ಇಟ್ಟಕೊಂಡು ರೂಪಿಸಿರುವ ಸುಂದರ ಚಿತ್ರವೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಆ ಚಿತ್ರದ ಕುರಿತೇ ಬೆಂಗಳೂರಿನ ಜ್ಯೋತಿ ನಿವಾಸ್‌ ಕಾಲೇಜಿನ ಇಂಗ್ಲಿಷ್‌ ಎಂ.ಎ. ವಿದ್ಯಾರ್ಥಿನಿ ಪ್ರಜ್ಞಾ ಹೆಬ್ಬಾರ್ ಬರೆದಿದ್ದಾರೆ.

*******************************************************

ಲಾಕ್‍ಡೌನ್ ಸಮಯದಲ್ಲಿ ಹಲವು ಮಲಯಾಳ ಭಾಷೆಯ ಚಿತ್ರಗಳನ್ನು ವೀಕ್ಷಿಸಿದೆ. ನನಗೆ ಮಲಯಾಳ ಭಾಷೆ ಹಿಡಿತವಿಲ್ಲದಿದ್ದರೂ ಚಿತ್ರಗಳು ಮಾತ್ರ ಮನಸ್ಸಿಗೆ ತುಂಬಾ ಆಪ್ತವೆನಿಸುತ್ತದೆ. ಇತ್ತೀಚಿಗೆ ನೋಡಿದ ಸಿನಿಮಾಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ ಚಿತ್ರ ‘ವಿಕೃತಿ’.

ಎಮ್ಸಿ ಜೋಸೆಫ್ ನಿರ್ದೇಶನದ ಈ ಚಿತ್ರದಲ್ಲಿ ಸೂರಜ್ ಮೂಗನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ನೈಜ ಘಟನೆಯನ್ನು ಆಧರಿಸಿ ಮಾಡಿದ್ದ ಈ ಚಿತ್ರದಲ್ಲಿ ಎಲ್ಲಾ ಪಾತ್ರ ವರ್ಗದ ಅಭಿನಯ ಅದ್ಭುತ. ಸರಳ ಹಾಗೂ ಮನ ಮುಟ್ಟುವ ಕಥಾ ಹಂದರದ ಚಿತ್ರ ನನ್ನನ್ನು ಸಂಪೂರ್ಣವಾಗಿ ಆವರಿಸಿತು. ಒಂದಿಡೀ ದಿನ ಅದರ ಗುಂಗಿನಲ್ಲಿಯೇ ಇದ್ದೆ.

ಒಬ್ಬರು ಮಾಡಿದ ತಪ್ಪಿಗೆ, ಮುಗ್ಧ ಮೂಗನೊಬ್ಬ ಬಲಿಪಶುವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಾನೆ. ನಂತರ ಆತನಿಗೆ ಸಮಾಜದಲ್ಲಿ ತಲೆ ಎತ್ತಿಕೊಂಡು ಓಡಾಡುವುದೇ ಕಷ್ಟವಾಗುತ್ತದೆ. ತನ್ನ ಮನಸ್ಸಿನ ನೋವನ್ನು ಕೇವಲ ಸನ್ನೆ ಮೂಲಕ ತಿಳಿಸಬೇಕಾದ ದೈನ್ಯ ಪರಿಸ್ಥಿತಿ ಚಿತ್ರದ ನಾಯಕನದ್ದು. ಕೊನೆಗೆ ತಪ್ಪು ಮಾಡಿದವನನ್ನು ಕ್ಷಮಿಸಿ, ಮಾನವೀಯತೆಯ ಸಂದೇಶವನ್ನು ಸಾರುತ್ತಾನೆ.

ಚಿತ್ರದಲ್ಲಿ ಸುರಭಿ ಲಕ್ಷ್ಮಿ, ವಿನ್ಸಿ ಅಲೋಶಿಯಸ್‌ ಮತ್ತಿತರ ಅಭಿನಯವಿದೆ. ಛಾಯಾಗ್ರಹಣ ಆಲ್ಬಿಯವರದ್ದು. ಸಂಗೀತ ಬಿಜಿಬಲ್‌ ಅವರದ್ದು.

ಇಷ್ಟವಾದದ್ದು
ನಮ್ಮನ್ನು ಭಾವನಾತ್ಮಕ ಲೋಕಕ್ಕೆ ಕೊಂಡೊಯ್ಯುವ ಮನಮುಟ್ಟುವ ಹಿನ್ನಲೆ ಸಂಗೀತ. ಸಂಜ್ಞೆಯ ಭಾಷೆಯಲ್ಲೇ ಮನದಲ್ಲಿನ ತಳಮಳಗಳನ್ನು ವರ್ಗಾಯಿಸುತ್ತಾ, ಮನೆ ನಡೆಸುವ ಜವಾಬ್ದಾರಿಯನ್ನು ಬೆನ್ನಲ್ಲೇ ಹೊತ್ತು, ತನ್ನ ನೋವನ್ನು ನುಂಗಿಕೊಂಡು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ತಂದೆಯ ಪಾತ್ರ ಹೃದಯವನ್ನು ಆರ್ದ್ರವನ್ನಾಗಿಸುತ್ತದೆ. ಚಿತ್ರವು ಹೆಚ್ಚಿನ ಕಡೆಗಳಲ್ಲಿ ಸಂಭಾಷಣೆಯಿಲ್ಲದೇ ಕೇವಲ ಮೂಕಾಭಿನಯದಲ್ಲೇ ಮುಂದೆ ಸಾಗುತ್ತದೆ. ಈ ಮೌನದ ಭಾಷೆಯು ನನ್ನನ್ನು ಭಾವಪರಶಳನ್ನಾಗಿಸಿತು.

ನೈಜ ಘಟನೆಯನ್ನು ಸಿನಿಮಾ ಭಾಷೆಯಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ಒಂದು ಪುಟ್ಟ ಕಥೆಯನ್ನು ಇಟ್ಟುಕೊಂಡು, ಅನಗತ್ಯ ದೃಶ್ಯಗಳಿಲ್ಲದೆ ಚೆನ್ನಾಗಿ ನಿರೂಪಿಸಿದ್ದಾರೆ. ಸಿನಿಮಾದ ಕ್ಲೈಮಾಕ್ಸ್ ನಲ್ಲಿ ಅಪರಾಧಿಯ ತಪ್ಪನ್ನು ನಾಯಕ ಮನ್ನಿಸುತ್ತಾನೆ. ಈ ಅಂಶವೂ ನನಗೆ ಬಹಳ ಇಷ್ಟವಾಯಿತು. ಇದಲ್ಲದೆ ಬದುಕಿನ ಬಗ್ಗೆ ನಾವೆಲ್ಲರೂ ಕಲಿಯಬೇಕಾದ ಸಂಗತಿ ಇದರಲ್ಲಿದೆ.

ಚಿತ್ರದ ಅಭಿನಯಕ್ಕಾಗಿ ಸೂರಜ್‍ಗೆ ಅತ್ಯುತ್ತಮ ನಟ ಪ್ರಶಸ್ತಿಯೂ ದೊರೆತಿದೆ. ಎಲ್ಲರೂ ನೋಡಲೇಬೇಕಾದ ಚಿತ್ರ, ನೆಟ್‍ಫ್ಲಿಕ್ಸ್ ನಲ್ಲಿ ಲಭ್ಯವಿದೆ.

– ಪ್ರಜ್ಞಾ ಹೆಬ್ಬಾರ್

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.