ಫ್ರೆಂಚ್‌ ಆಲ್ಪ್ಸ್ ಪರ್ವತ ಶ್ರೇಣಿಯ ನೀರ್ಗಲ್ಲಿನಡಿ ಸಿಕ್ಕಿದವು 1966ರ ಭಾರತದ ಪತ್ರಿಕೆಗಳು!

ಮುಖಪುಟದಲ್ಲಿ ಇಂದಿರಾ ಪ್ರಧಾನಿಯಾದ ಸುದ್ದಿ ; ಪರ್ವತಶ್ರೇಣಿಯಲ್ಲಿ ಪತನಕ್ಕೀಡಾದ ವಿಮಾನದ ಅವಶೇಷ

Team Udayavani, Jul 14, 2020, 7:30 AM IST

ಫ್ರೆಂಚ್‌ ಆಲ್ಪ್ಸ್ ಪರ್ವತ ಶ್ರೇಣಿಯ ನೀರ್ಗಲ್ಲಿನಡಿ ಸಿಕ್ಕಿದವು 1966ರ ಭಾರತದ ಪತ್ರಿಕೆಗಳು!

ಫ್ರೆಂಚ್‌ ಆಲ್ಪ್ಸ್ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಕೆಫೆ ಮಾಲಿಕನಿಗೆ ದೊರೆತ ಭಾರತೀಯ ಪತ್ರಿಕೆಯ ತುಣುಕು.

ಪ್ಯಾರಿಸ್‌: ಫ್ರೆಂಚ್‌ ಆಲ್ಪ್ಸ್ ಪರ್ವತ ಶ್ರೇಣಿಯ ಮಾಂಟ್‌ ಬ್ಲಾಂಕ್‌ ನೀರ್ಗಲ್ಲುಗಳು ಕರಗುತ್ತಾ ಸಾಗಿದಂತೆ, ಹೊಸ ಹೊಸ ರಹಸ್ಯಗಳು ಬಹಿರಂಗಗೊಳ್ಳುತ್ತಿವೆ.

ಹಲವು ದಶಕಗಳ ಹಿಂದೆ ಹೂತುಹೋಗಿದ್ದ ಪ್ರಶ್ನೆಗಳಿಗೆ ಈ ನೀರ್ಗಲ್ಲಿನಡಿ ಒಂದೊಂದಾಗಿ ಉತ್ತರಗಳು ಸಿಗಲಾರಂಭಿಸಿವೆ.

ಅದಕ್ಕೆ ಹೊಸ ಸೇರ್ಪಡೆಯೆಂಬಂತೆ, 1966ರಲ್ಲಿ ಇಂದಿರಾಗಾಂಧಿ ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾದ ದಿನ ಪ್ರಕಟಗೊಂಡ ವೃತ್ತಪತ್ರಿಕೆಗಳ ಕಟ್ಟೊಂದು ನೀರ್ಗಲ್ಲಿನ ಸಮೀಪ ಪ್ರತ್ಯಕ್ಷವಾಗಿದೆ.

ಈ ಪತ್ರಿಕೆಗಳು ಅಲ್ಲಿಗೆ ತಲುಪಿದ್ದು ಹೇಗೆ ಎನ್ನುವುದೇ ಕುತೂಹಲಕಾರಿ ಸಂಗತಿ!

ಅದು 1966ರ ಜನವರಿ 24. ಬರೋಬ್ಬರಿ 177 ಮಂದಿಯನ್ನು ಹೊತ್ತ ಏರ್‌ಇಂಡಿಯಾ ಬೋಯಿಂಗ್‌ 707 ವಿಮಾನವು ಮುಂಬಯಿನಿಂದ ಲಂಡನ್‌ಗೆ ಹೊರಟಿತ್ತು.

ದಾರಿ ಮಧ್ಯೆ ಪೈಲಟ್‌ನ ಅಚಾತುರ್ಯದಿಂದಾಗಿ ಮಾಂಟ್‌ ಬ್ಲಾಂಕ್‌ ಪರ್ವತ ಶ್ರೇಣಿಯಲ್ಲಿ ವಿಮಾನ ಪತನಗೊಂಡಿತು. ಒಳಗಿದ್ದ ಎಲ್ಲ 177 ಮಂದಿಯೂ ಸಾವಿಗೀಡಾದರು.

ಭಾರತೀಯ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಡಾ| ಹೋಮಿ ಜಹಾಂಗೀರ್‌ ಭಾಭಾ ಅವರೂ ಮೃತಪಟ್ಟಿದ್ದು ಇದೇ ದುರಂತದಲ್ಲಿ.

ಕೆಫೆ ಮಾಲೀಕನ ಕೈಗೆ ಭಾರತದ ಪತ್ರಿಕೆ:

ಈಗ ಸಿಕ್ಕಿರುವ ಸುಮಾರು 12 ಪತ್ರಿಕೆಗಳ ಕಟ್ಟು ಅದೇ ವಿಮಾನದಲ್ಲಿದ್ದ ವಸ್ತುಗಳಲ್ಲಿ ಒಂದು ಎಂದು ಊಹಿಸಲಾಗಿದೆ. ನ್ಯಾಶನಲ್‌ ಹೆರಾಲ್ಡ್‌ ಮತ್ತು ಎಕನಾಮಿಕ್‌ ಟೈಮ್ಸ್‌ ಪತ್ರಿಕೆಗಳು ಅದರಲ್ಲಿದ್ದು, ಮುಖಪುಟದಲ್ಲಿ ಇಂದಿರಾ ಗಾಂಧಿ ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾದ ಸುದ್ದಿ ಪ್ರಕಟಗೊಂಡಿದೆ.

ಶಿಖರದ ಸಮೀಪ ಅಂದರೆ 4,455 ಅಡಿ ಎತ್ತರದಲ್ಲಿ ಕೆಫೆ ನಡೆಸುತ್ತಿರುವ ತಿಮೋತಿ ಮೋಟಿನ್‌ ಎಂಬಾತನಿಗೆ ಈ ಪತ್ರಿಕೆಗಳು ಸಿಕ್ಕಿವೆ. ವಿಮಾನ ಪತನಗೊಂಡ ಸ್ಥಳದಿಂದ ಈತನ ಕೆಫೆಗೆ 45 ನಿಮಿಷ ನಡೆಯಬೇಕು. ಈ ನೀರ್ಗಲ್ಲಿನಲ್ಲಿ ಸಿಕ್ಕಿರುವ ಬಹುತೇಕ ಅವಶೇಷಗಳನ್ನು ಮೋಟಿನ್‌ ತನ್ನ ಕೆಫೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದಾನೆ.
ಈಗ ಈ ಪತ್ರಿಕೆಗಳೂ ನನ್ನ ಅಮೂಲ್ಯ ಸಂಗ್ರಹ ಸೇರುತ್ತದೆ ಎನ್ನುತ್ತಾನೆ ಮೋಟಿನ್‌.

– 177 ಮಂದಿಯನ್ನು ಬಲಿಪಡೆದಿದ್ದ ದುರಂತ

– ಮುಂಬಯಿಯಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ


– ಮಳಿಗೆಯಲ್ಲಿ ಪತ್ರಿಕೆಗಳ ತುಂಡುಗಳನ್ನು ಪ್ರದರ್ಶನಕ್ಕೆ ಇರಿಸಲು ಕೆಫೆ ಮಾಲಕನ ತೀರ್ಮಾನ

ಟಾಪ್ ನ್ಯೂಸ್

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.